ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಟ್ಟ ರಾಜಕೀಯಕ್ಕೆ ತಕ್ಕ ಉತ್ತರ ಲೋಕಸತ್ತಾ?

By Prasad
|
Google Oneindia Kannada News

ಬೆಂಗಳೂರು, ಫೆ. 23 : ನೀವು ಯಾವ ಪಕ್ಷಕ್ಕೆ ಈ ಬಾರಿ ಮತ ಹಾಕುತ್ತೀರಿ ಎಂದು ಯಾರನ್ನಾದರೂ ಕೇಳಿ ನೋಡಿ. ಕೇಳುಗರು ಮುಖ ಸಿಂಡರಿಸದಿದ್ದರೆ ಕೇಳಿ. ಎಲ್ಲವೂ ಒಂದೇ, ಎಲ್ಲವೂ ಭ್ರಷ್ಟವೇ, ಎಲ್ಲವೂ ಅಸಮರ್ಥವೇ ಎಂಬ ಅಭಿಪ್ರಾಯ ನೆಲೆಯೂರುವಂತೆ ಎಲ್ಲ ಪಕ್ಷಗಳು ನಡೆದುಕೊಂಡಿವೆ.

ಅಂತಹುದರಲ್ಲಿ, ಸುಧಾರಣೆ, ಅಭಿವೃದ್ಧಿ ಮರೀಚಿಕೆಯಾಗಿರುವ ಈ ಸಂದರ್ಭದಲ್ಲಿ, ಭ್ರಷ್ಟಾಚಾರವನ್ನು ತೊಡೆದುಹಾಕುವ ಉದ್ದೇಶದಿಂದ ಲೋಕಸತ್ತಾ ಪಕ್ಷ ವಿಧಾನಸಭೆ ಚುನಾವಣೆಗೆ ಅಣಿಯಾಗುತ್ತಿದೆ. ವಿಜ್ಞಾನ ಮತ್ತು ತಾಂತ್ರಿಕತೆಯಲ್ಲಿ ಹೆಸರು ಪಡೆದಿರುವ ಕರ್ನಾಟಕ ರಾಜ್ಯಕ್ಕೆ ಗತವೈಭವವನ್ನು ಮರಳಿ ತರುವ ಪಣವನ್ನು ಲೋಕಸತ್ತಾ ತೊಟ್ಟಿದೆ.

ಡಾ. ಜಯಪ್ರಕಾಶ ನಾರಾಯಣ (ಡಾ. ಜೆಪಿ) ಅವರು ಸ್ಥಾಪಿಸಿರುವ ಲೋಕಸತ್ತಾ ಪಕ್ಷ, ಈ ನಿಟ್ಟಿನಲ್ಲಿ ಭ್ರಷ್ಟವಿರೋಧಿ ಯುವಪಡೆಯನ್ನು ಕಟ್ಟುವಲ್ಲಿ ನಿರತವಾಗಿದ್ದು, ಮತವನ್ನು ಭ್ರಷ್ಟನಲ್ಲದ ಅಭ್ಯರ್ಥಿಗೇ ನೀಡಿ ಎಂಬ ಸಂದೇಶವನ್ನು ಎಲ್ಲೆಡೆ ಸಾರುತ್ತಿದೆ. ಇಂತಿರುವ ಲೋಕಸತ್ತಾ ಪಕ್ಷ ಬೆಂಗಳೂರಿನಲ್ಲಿ ಶನಿವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆ ಬರೀ ಭರವಸೆಗಳ ಮೂಟೆಯಲ್ಲ ಎಂದು ಒತ್ತಿ ಹೇಳಿದೆ. ಡಾ. ಅಶ್ವಿನ್ ಮಹೇಶ್ ಅವರು ಕರ್ನಾಟಕ ಲೋಕಸತ್ತಾದ ಜವಾಬ್ದಾರಿ ಹೊತ್ತಿದ್ದಾರೆ.

ಲೋಕಸತ್ತಾ ಪ್ರಣಾಳಿಕೆಯ ಮುಖ್ಯಾಂಶಗಳು ಕೆಳಗಿನಂತಿವೆ

ಲೋಕಸತ್ತಾ ಪ್ರಣಾಳಿಕೆ : ರೈತರಿಗಾಗಿ ಯೋಜನೆ

ಲೋಕಸತ್ತಾ ಪ್ರಣಾಳಿಕೆ : ರೈತರಿಗಾಗಿ ಯೋಜನೆ

* ಮಾರುಕಟ್ಟೆಯ ಬೆಲೆ ಏರಿಳಿತ ಹಾಗೂ ಪ್ರಕೃತಿಯ ವೈಪರಿತ್ಯಗಳಿಂದ ರೈತರನ್ನು ಸಂರಕ್ಷಿಸಲು ಸರ್ಕಾರದ ಸಹಯೋಗದೊಂದಿಗೆ ಸಮಗ್ರ ವ್ಯವಸಾಯ ವಿಮೆ.

* ಪ್ರತಿ 3000 ಎಕರೆಗೆ ಒಂದರಂತೆ ವ್ಯವಸಾಯ ಸಂರಕ್ಷಣಾ ಕೇಂದ್ರ ಸ್ಥಾಪನೆ. ಪ್ರತಿಯೊಬ್ಬ ರೈತನಿಗೆ ಸಾವಯವ ವ್ಯವಸಾಯ ಮಾಡಲು ಬೇಕಾದ ಮಾರ್ಗದರ್ಶನ.

* ಕರ್ನಾಟಕದ ಪ್ರತಿ ಹಳ್ಳಿಗೂ ದಿನಕ್ಕೆ 12 ಘಂಟೆಗಳ ಕಾಲ ಲಭ್ಯವಿರುವ 3-ಪೇಸ್ ನಿರಂತರ ವಿದ್ಯುತ್ ಸೌಲಭ್ಯ.

* 10 HP ಸಾಮರ್ಥ್ಯವರೆಗಿನ ಪಂಪ್ ಸೆಟ್ ಹೊಂದಿರುವ ರೈತರಿಗೆ ವಿದ್ಯುತ್ ದರದಲ್ಲಿ ರಿಯಾಯಿತಿ ನೀಡಲಾಗುವದು.

* ನಗರವಾಸಿಗಳಂತೆ, ರೈತರಿಗೂ ಕೂಡ ಸುಲಭದಲ್ಲಿ ಸಾಲ ಪಡೆಯುವ ಅವಕಾಶಗಳ ನಿರ್ಮಾಣ.

ಲೋಕಸತ್ತಾ ಪ್ರಣಾಳಿಕೆ : ಉದ್ಯೋಗಿಗಳಿಗೆ ಆದ್ಯತೆ

ಲೋಕಸತ್ತಾ ಪ್ರಣಾಳಿಕೆ : ಉದ್ಯೋಗಿಗಳಿಗೆ ಆದ್ಯತೆ

* 2 ಮತ್ತು 3ನೇ ವರ್ಗದ ನಗರಗಳಿಗೆ ಸ್ಥಳೀಯ ವಾಣಿಜ್ಯ ಅಭಿವೃದ್ಧಿಪಡಿಸಲು ವಿಶೇಷ ಯೋಜನೆಗಳು.

* ಯೋಜನಾ ಪ್ರಾಧಿಕಾರಗಳಿಂದ ರೈತರ ಜಮೀನು ತೆರವುಗೊಳಿಸುವುದಕ್ಕೆ ಕಡಿವಾಣ.

* ಸ್ವಂತ ಉದ್ಯೋಗ ಮಾಡುತ್ತಿರುವ ಹಾಗೂ ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲಗಳು.

* ಹೊಸ ಕೌಶಲ್ಯಗಳನ್ನು ಕಲಿಯ ಬಯಸುವ ಪ್ರತಿಯೊಬ್ಬ ವ್ಯಕ್ತಿಗೆ ಕೈಗಾರಿಕಾ ಸಂಸ್ಥೆಗಳ ಸಹಾಯದೊಂದಿಗೆ ಆಯಾ ಉದ್ಯೋಗಕ್ಕೆ ಸಂಬಂಧಿಸಿದ ತರಬೇತಿ.

* ಆಯಾ ವರ್ಗಗಳ ಖರ್ಚು ವೆಚ್ಚಕ್ಕೆ ತಕ್ಕಂತೆ, ಎಲ್ಲಾ ಕೆಲಸಗಳಿಗೆ ಕನಿಷ್ಠ ವೇತನ ನಿಗದಿ. ಕೂಲಿ ನೌಕರರನ್ನು ದುಡಿಸುಕ್ಕೊಳ್ಳುವುದಕ್ಕೆ ಕಡಿವಾಣ.

ಲೋಕಸತ್ತಾ ಪ್ರಣಾಳಿಕೆ : ಮಹಿಳೆಯರಿಗೆ ಮನ್ನಣೆ

ಲೋಕಸತ್ತಾ ಪ್ರಣಾಳಿಕೆ : ಮಹಿಳೆಯರಿಗೆ ಮನ್ನಣೆ

* ಪ್ರತಿಯೊಂದು ಪೊಲೀಸ್ ಸ್ಟೇಷನ್ನಲ್ಲಿ ಕಡ್ಡಾಯವಾಗಿ ಓರ್ವ ಮಹಿಳಾ ಪೋಲೀಸ್ ಅಧಿಕಾರಿಣಿಯ ನೇಮಕ.

* ಎಲ್ಲ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ಸೂಕ್ಷ್ಮವಾದ ದೂರುಗಳನ್ನು ಹೇಗೆ ನೊಂದಾಯಿಸಬೇಕು ಮತ್ತು ನಿಭಾಯಿಸಬೇಕೆಂದು ವಿಶೇಷ ತರಬೇತಿ.

* ಸಾರಿಗೆ ವಾಹನಗಳಲ್ಲಿ ಮಹಿಳೆಯರ ಸಂರಕ್ಷಣೆ, ಅದರ ಬಗ್ಗೆ ಅರಿವು ಮೂಡಿಸುವಿಕೆ.

* ಗ್ರಾಮಗಳಲ್ಲಿರುವ ಎಲ್ಲ ಸ್ತ್ರೀಯರಿಗೆ ಹಾಗೂ ಬಾಲಕಿಯರಿಗೆ ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ಉಚಿತ ಶಿಕ್ಷಣ.

* ಪುರುಷ ಹಾಗೂ ಸ್ತ್ರೀಯರಿಗೆ ವೇತನದಲ್ಲಿ ಸಮಾನತೆ.

* ಎಲ್ಲಾ ಕಾಲೇಜ್ ಹಾಗೂ ವಿಶ್ವವಿದ್ಯಾಲಗಳಲ್ಲಿ ಕನಿಷ್ಠ 30%ರಷ್ಟು ಸ್ಥಾನಗಳು ವಿದ್ಯಾರ್ಥಿನಿಯರಿಗೆ ಮೀಸಲು.

ಲೋಕಸತ್ತಾ ಪ್ರಣಾಳಿಕೆ : ಪ್ರತಿಭಾನ್ವಿತರಿಗೆ ಪುರಸ್ಕಾರ

ಲೋಕಸತ್ತಾ ಪ್ರಣಾಳಿಕೆ : ಪ್ರತಿಭಾನ್ವಿತರಿಗೆ ಪುರಸ್ಕಾರ

* ಸರ್ಕಾರದಿಂದ ಗುರುತಿಸಲ್ಪಟ್ಟ ಖಾಸಗಿ ಆರೋಗ್ಯ ಕೇಂದ್ರಗಳ ಸಹಯೋಗದೊಂದಿಗೆ ಬಡವರಿಗೆ ಸಮಗ್ರ ಆರೋಗ್ಯ ವಿಮಾ ಯೋಜನೆ.

* ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ದುರ್ಬಲರಾದ ಗ್ರಾಮಾಂತರ ಪದವೀಧರರಿಗೆ ವಿಶೇಷ ಸ್ಕಾಲರ್ ಷಿಪ್ ಕಾರ್ಯಕ್ರಮ.

* ಎಲ್ಲ ಮಕ್ಕಳಿಗೆ ಅವರ ಅಥವಾ ಅವರ ಪಾಲಕರಿಗೆ ಇಷ್ಟವಾದ ಶಾಲೆಗೆ ಸೇರಲು ವಿಶೇಷ ಸ್ಕಾಲರ್ ಷಿಪ್.

* ಸರ್ಕಾರಿ ಶಾಲೆಗಳಲ್ಲಿಯೇ 9ನೇ ತರಗತಿ ಮೇಲ್ಪಟ್ಟವರಿಗೆ ವಿಶೇಷ ತರಬೇತಿ ಶಿಬಿರಗಳು

ಲೋಕಸತ್ತಾ ಪ್ರಣಾಳಿಕೆ : ಕನ್ನಡ ಸಂಸ್ಕೃತಿ ರಕ್ಷಣೆ

ಲೋಕಸತ್ತಾ ಪ್ರಣಾಳಿಕೆ : ಕನ್ನಡ ಸಂಸ್ಕೃತಿ ರಕ್ಷಣೆ

* ಕರ್ನಾಟಕದ ಸಾಂಸ್ಕೃತಿಕ ಹಿನ್ನೆಲೆಯನ್ನು ಬೆಳೆಸಲು ಮತ್ತು ಪ್ರಸಿದ್ಧ ಪ್ರದೇಶಗಳನ್ನು ಉಳಿಸಲು ವಿಶೇಷ ಆಯೋಗದ ರಚನೆ.

* ಸರ್ಕಾರಿ ಶಾಲೆಗಳಲ್ಲಿ ಕಲೆಯನ್ನು ಪ್ರೋತ್ಸಾಹಿಸಲು 'ಮಕ್ಕಳ ಕಲೆ ಮತ್ತು ನಾಟಕ'ಗಳಿಗೆಂದೇ ವಿಶೇಷ ಆರ್ಥಿಕ ಯೋಜನೆ.

* ಕನ್ನಡೇತರರು ಸುಲಭವಾಗಿ ಕನ್ನಡ ಮಾತನಾಡಲು ಅನುಕೂಲವಾಗುವಂತೆ, ವಿಶೇಷ ಕನ್ನಡ ಭಾಷಾ ಕಲಿಕೆ ಕೇಂದ್ರಗಳ ಸ್ಥಾಪನೆ.

* ಕರ್ನಾಟಕ ರಾಜ್ಯಾದ್ಯಂತ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ಬೆಂಬಲಿಸಲು ಕರ್ನಾಟಕ ಕ್ರೀಡಾ ಸ್ಪರ್ಧಾ ಆಯೋಗದ ನೇಮಕ.

ಲೋಕಸತ್ತಾ ಪ್ರಣಾಳಿಕೆ : ಅಭಿವೃದ್ಧಿ ಮಂತ್ರ

ಲೋಕಸತ್ತಾ ಪ್ರಣಾಳಿಕೆ : ಅಭಿವೃದ್ಧಿ ಮಂತ್ರ

* ರಾಜ್ಯ ಬೊಕ್ಕಸದಿಂದ ರಾಜ್ಯದ ಎಲ್ಲ ಗ್ರಾಮಾಂತರ ಹಾಗೂ ಪುರಸಭಾ ಸಂಸ್ಥೆಗಳಿಗೆ ಖಚಿತವಾದ ಹಣ ಪ್ರತಿ ವರ್ಷ ವರ್ಗಾವಣೆ.

* ಪ್ರತಿ ಗ್ರಾಮದಲ್ಲೂ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಿಂದ ನಡೆಸಲ್ಪಡುವ ನ್ಯಾಯ ಬೆಲೆ ಅಂಗಡಿಗಳ ಸ್ಥಾಪನೆ.

* ಕರ್ನಾಟಕದ ಎಲ್ಲ ಇಲಾಖೆಗಳ ಮಾಹಿತಿ ಮತ್ತು ಕಾಗದ ಪತ್ರಗಳನ್ನು ಸುಲಭವಾಗಿ ಸಿಗುವ ಹಾಗೆ ಅಂತರ್ಜಾಲದಲ್ಲಿಡಲು ಒಂದು ಸಮಗ್ರ ಆನ್ ಲೈನ್ ಕಾರ್ಯಕ್ರಮ.

* ಎಲ್ಲ ಮಾಹಿತಿ ಮತ್ತು ಕಾಗದ ಪತ್ರಗಳ ಸೇವೆಗಳಿಗೆ ಕಡ್ಡಾಯವಾಗಿ 'ಸಕಾಲ'ದ ಎಲ್ಲ ನಿಯಮಗಳನ್ನು ಅನ್ವಯಿಸಲಾಗುವದು.

ಲೋಕಸತ್ತಾ ಪ್ರಣಾಳಿಕೆ : ಭ್ರಷ್ಟಾಚಾರದ ವಿರುದ್ಧ ಯುದ್ಧ

ಲೋಕಸತ್ತಾ ಪ್ರಣಾಳಿಕೆ : ಭ್ರಷ್ಟಾಚಾರದ ವಿರುದ್ಧ ಯುದ್ಧ

* ಲೋಕಾಯುಕ್ತರ ಹುದ್ದೆ ಯಾವಾಗಲೂ ಭರ್ತಿಯಾಗಿರುವಂತೆ ನೋಡಿಕೊಳ್ಳುವದು ಮತ್ತು ಲೋಕಾಯುಕ್ತರಿಗೆ ಪೂರ್ಣ ಪ್ರಮಾಣದ ಅಧಿಕಾರವಿರುವಂತೆ ಕಾನೂನು ಜಾರಿ.

* ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಮದ್ಯವರ್ತಿಗಳ ಪ್ರವೇಶ ನಿಷಿದ್ಧ. ಎಲ್ಲ ಸರ್ಕಾರಿ ಸೇವೆಗಳಿಗಾಗಿ ಸರಕಾರದಿಂದ ನೇಮಿಸಲ್ಪಟ್ಟ 'ಸಹಾಯಕ ಅಧಿಕಾರಿಗಳು ಅಲ್ಲಿರುತ್ತಾರೆ.

* ಇಂಟರ್ನೆಟ್ ಹಾಗೂ ದೂರವಾಣಿಗಳ ಮೂಲಕ FIRಗಳ ನೊಂದಣಿ.

ಲೋಕಸತ್ತಾ ಪ್ರಣಾಳಿಕೆ : ಮೂಲಭೂತ ಸೌಕರ್ಯ

ಲೋಕಸತ್ತಾ ಪ್ರಣಾಳಿಕೆ : ಮೂಲಭೂತ ಸೌಕರ್ಯ

* ಆಡಳಿತಕ್ಕಾಗಿ ಯೋಜನೆ, ನಗರ ನಿರ್ಮಾಣ ಯೋಜನೆ, ಸಾಮಾಜಿಕ ಯೋಜನೆಗಳು, ವಾಣಿಜ್ಯ ಯೋಜನೆಗಳಿಗೆ ಆಯೋಗ.

* ಎಲ್ಲ ಕೊಳವೆ ಬಾವಿಗಳನ್ನು ನೊಂದಾಯಿಸಲಾಗುವದು ಮತ್ತು ನಿಯಮಿತ- ಗೊಳಿಸಲಾಗುವದು. ಕಠಿಣ ಪರೀಕ್ಷೆ ಮತ್ತು ವಿಧಾನಗಳ ಮೂಲಕ ಕಡಿಮೆ ಆಳದಲ್ಲಿ ನೀರು ಸಿಗುವಂತೆ ಮಾಡುವುದು.

* ಡಂಪಿಂಗ್ ಸಾಕು - ಬೆಂಗಳೂರು ಮತ್ತಿತರ ಪ್ರಮುಖ ನಗರಗಳಲ್ಲಿ ಪುರಸಭೆಯ ಮಟ್ಟದಲ್ಲಿ ಸ್ಥಳೀಯವಾಗಿ ಕಸವನ್ನು ವಿಲೇವಾರಿ ಮಾಡಲು ಕಾನೂನಿನಲ್ಲಿ ಬದಲಾವಣೆ.

* ಪ್ರತಿ ಕೆರೆಯನ್ನು ಶುದ್ಧಿಕರಿಸಿ ಅದನ್ನು ಕಾಪಾಡಿಕೊಂಡು ಹೋಗಲು ಸ್ಥಳೀಯ ಸಂಘಟನೆಗಳಿಗೆ ಒಪ್ಪಿಸಲಾಗುವದು.

* 60- ಅಡಿ ರಸ್ತೆಯಲ್ಲಿ ಖಡ್ಡಾಯವಾಗಿ 3 ಮೀಟರ್ ಅಗಲದ ಪಾದಚಾರಿ ರಸ್ತೆ ನಿರ್ಮಾಣ (ಅವಶ್ಯವಿದ್ದರೆ ವಾಹನ ಸಂಚಾರಿ ಭಾಗವನ್ನು ಕಡಿಮೆ ಮಾಡಲಾಗುವದು)

English summary
Answer to bad politics is GOOD politics ; Loksatta party released Karnataka Assembly Election manifesto in Bangalore on Saturday, 23rd February. Loksatta fighting to eradicate corruption in our society says manifesto is just not bundle of promises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X