ಹೊಸ ಪ್ರಳಯದ ದಿನಾಂಕ ಬಂತು!

ಆದರೆ ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಆದ್ದರಿಂದ ನಿರಾಶೆ ಹೊಂದಬೇಕಿಲ್ಲ. ಮತ್ತೆ ಪ್ರಳಯ ಆಗುತ್ತದೆ ಎಂದು ನಂಬಿಕೂರಬಹುದು. ಏಕೆಂದರೆ ಹೊಸ ಪ್ರಳಯದ ದಿನಾಂಕ ಘೋಷಣೆಯಾಗಿದೆ.
ಅದರ ಪ್ರಕಾರ 2017 ಜನವರಿ 1ರಂದು ಪ್ರಳಯ ಸಂಭವಿಸುವುದು ಗ್ಯಾರಂಟಿ ಎನ್ನಲಾಗಿದೆ. ಇಷ್ಟಕ್ಕೇ ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ ಅವರವರ ಶಕ್ತ್ಯಾನುಸಾರ ಅನೇಕ ಪ್ರಮುಖರು ಪ್ರಳಯಕ್ಕೆ ಇನ್ನೂ ನಾನಾ ದಿನಾಂಕಗಳನ್ನು ಗೊತ್ತುಮಾಡಿದ್ದಾರೆ.
ಹೌದು, Sword of God Brotherhood ಅನುಯಾಯಿಗಳ ಪ್ರಕಾರ 2017 ಜನವರಿ 1ರಂದು ಜಗತ್ತು ಸಂಪೂರ್ಣ ನಾಶವಾಗಲಿದೆ. ಗೇಬ್ರಿಯಲ್ ಎಂಬ ಪ್ರವಾದಿ ಪ್ರಕಾರ ಈ ದಿನಾಂಕದಂದು ಸಾಯುವ ಘಳಿಗೆ ಬರುತ್ತದೆ. ಆದರೆ ಗೇಬ್ರಿಯಲ್ ಅನುಯಾಯಿಗಳಿಗೆ ಏನೂ ಆಗದು. ಉಳಿದವರಷ್ಟೇ ಬೆಂಕಿಯಲ್ಲಿ ಬೆಂದು ಹೋಗುತ್ತಾರೆ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
5,126 ವರ್ಷಗಳ ಮಾಯನ್ ಕ್ಯಾಲೆಂಡರ್ ಪ್ರಕಾರ ಕಳೆದ ವಾರದಲ್ಲಿ ಡಿ. 21ರಂದು ರಾತ್ರಿ 11.11 ಗಂಟೆಗೆ ಜಗತ್ತು ಸರ್ವನಾಶವಾಗುತ್ತದೆ ಎಂದೇ ನಂಬಲಾಗಿತ್ತು.
ಕುತೂಹಲಕಾರಿ ಸಂಗತಿಯೆಂದರೆ ಅಯಾನ್ ಗುರ್ನಿ ಎಂಬ ಕ್ರೈಸ್ತ ಧರ್ಮೀಯನ ಪ್ರಕಾರ 2023ರಲ್ಲಿ Judgement Day ಬರುತ್ತದಂತೆ. ಅಂದರೆ ಜಗತ್ತು ಸದ್ಯಕ್ಕೆ ನಾಶವಾಗದು. ಮುಂದೆ 2013ರಲ್ಲಿ ಪ್ರಳಯ ಸಂಭವಿಸುತ್ತದೆ ಎಂದು ಆತ ಹೇಳಿದ್ದಾನೆ.
ಇನ್ನು, ಐರಿಶ್ ನವರು ಹೇಳುವಂತೆ ಇಷ್ಟು ಬೇಗ ಮನುಷ್ಯನ ನಾಶ ಆಗುವುದಿಲ್ಲವಂತೆ. ಐರಿಶ್ ನ ಧರ್ಮಗುರು ಮಲಾಖಿ 1143ರಲ್ಲಿಯೇ ಹೇಳಿರುವಂತೆ ಮಹಾದುರಂತ ಸಂಭವಿಸುವುದಕ್ಕೆ ಇನ್ನೂ 112 ಪೋಪ್ ಗಳ ಅಗತ್ಯವಿದೆಯಂತೆ. ಆದರೆ ನಾವೀಗ 111ನೇ ಪೋಪ್ ಅನ್ನು ಕಂಡಿದ್ದೇವೆ. ಇನ್ನೂ ಇಂತಹ 112 ಪೋಪ್ ಗಳು ಅವತಾರವನ್ನು ಕಾಣಬೇಕು. ಅಲ್ಲಿಗೆ ಮಹಾದುರಂತ ಸಂಭವಿಸುತ್ತದೆ ಎಂಬುದು ಮಲಾಖಿ ವಾದ.
ಆದರೆ ವಿಜ್ಞಾನದ ಆಧಾದರ ಮೇಲೆ ಹೇಳುವುದಾದರೆ ಸುಮಾರು 4,500,000,000 AD ವೇಳೆಗೆ ಜಗತ್ತು ನಶಿಸಲಿದೆ. ಆ ವೇಳೆಗೆ, ಈಗ ಅತ್ಯಂತ ಚಿಕ್ಕ ನಕ್ಷತ್ರವಾಗಿರುವ ಸೂರ್ಯನು ಬುಧಗ್ರಹ, ಶುಕ್ರಗ್ರಹ, ಭೂಮಿ ಮತ್ತು ಸಾಧ್ಯವಾದರೆ ಮಂಗಳ ಗ್ರಹವನ್ನು ನುಂಗಿಹಾಕಿ ದೊಡ್ಡ ನಕ್ಷತ್ರವಾಗಿ ಮಾರ್ಪಟ್ಟಾಗ ಈ ಜಗತ್ತು ತಾನೇತಾನಾಗಿ ನಶಿಸುತ್ತದೆ ಎಂಬುದು ಖಗೋಳಶಾಸ್ತ್ರಜ್ಞರ ಕರಾರುವಕ್ಕು ಲೆಕ್ಕಾಚಾರ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications