ಮಾರುಕಟ್ಟೆ ಮೌಲ್ಯ: ರಿಲಯನ್ಸ್ ಮೇಲಕ್ಕೆ ಟಿಸಿಎಸ್ ಕೆಳಕ್ಕೆ

ನ.30 ರಿಂದ ಡಿ.7ರ ತನಕದ ಮೌಲ್ಯ ಗಣತಿಯಂತೆ ರಿಲಯನ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆ 13,309 ಕೋಟಿ ರು ಗಳಿಸಿ 2,69,907 ಕೋಟಿ ರು ಮಾರುಕಟ್ಟೆ ಮೌಲ್ಯದೊಂದಿಗೆ ಅಗ್ರಸ್ಥಾನಕ್ಕೇರಿದೆ. ಕಳೆದ ವಾರ ಕಂಪನಿಯ ಷೇರುಗಳು ಶೇ 5 ರಷ್ಟು ಏರಿಕೆ ಕಂಡಿತ್ತು.
ಉಳಿದಂತೆ ಸರ್ಕಾರಿ ಸ್ವಾಮ್ಯದ ಎಸ್ ಬಿಐ 9,448 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡು ಮಾರುಕಟ್ಟೆಯಲ್ಲಿ 1,55,068 ಕೋಟಿ ರು ಮೌಲ್ಯ ಹೊಂದಿದೆ.
ಕಳೆದ ವಾರ ಅಗ್ರಸ್ಥಾನದಲ್ಲಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆ 8788 ಕೋಟಿ ರು ಕಳೆದುಕೊಂಡರೂ 2,48,165 ಕೋಟಿ ರು ನೊಂದಿದೆ ಎರಡನೇ ಸ್ಥಾನ ಕಾಯ್ದುಕೊಂಡಿದೆ.
ಟಿಸಿಎಸ್ ಬದ್ಧ ವೈರಿ ಇನ್ಫೋಸಿಸ್ ಸಂಸ್ಥೆ ಮೌಲ್ಯ 6,713 ಕೋಟಿ ರು ಕಳೆದುಕೊಂಡು 1,33,204 ಕೋಟಿ ರು ಮೌಲ್ಯ ಮಾತ್ರ ಹೊಂದಿದೆ.
ಎನ್ ಟಿಪಿಸಿ ಕೂಡಾ 1772 ಕೋಟಿ ರು ಮೌಲ್ಯ ಕಳೆದುಕೊಂಡು 1.31.886 ಕೋಟಿ ರು ಮೌಲ್ಯ ಗಳಿಸಿದೆ.
ಸಿಐಎಲ್ 1737 ಕೋಟಿ ರು ಕಳೆದುಕೊಂಡು 2,29,410 ಕೋಟಿ ರು ನೊಂದಿಗೆ ಕೆಲ ಸ್ಥಾನ ಕೆಳಗಿಳಿದಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಕೂಡಾ ಕಳೆದ ವಾರ 2127 ಕೋಟಿ ರು ಕಳೆದುಕೊಂಡು 1,63,712 ಕೋಟಿ ರು ಮೌಲ್ಯ ಹೊಂದಿದೆ.
ಟಾಪ್ 10 ಕಂಪನಿಗಳು, ಮಾರುಕಟ್ಟೆ ಮೌಲ್ಯ (ನ.30-ಡಿ.7) ಹೀಗಿದೆ:
1. ರಿಲಯನ್ಸ್ ಇಂಡಸ್ಟ್ರೀ ಲಿಮಿಟೆಡ್, 2,69,907 ಕೋಟಿ ರು
2. ಟಿಸಿಎಸ್, 2,48,165 ಕೋಟಿ ರು
3. ಐಟಿಸಿ, 2,37,273 ಕೋಟಿ ರು
4. ಸಿಐಎಲ್, 2,29,410 ಕೋಟಿ ರು
5. ಒಎನ್ ಜಿಸಿ, 2,28,902 ಕೋಟಿ ರು
6. ಎಚ್ ಡಿಎಫ್ ಸಿ ಬ್ಯಾಂಕ್, 1,63,712 ಕೋಟಿ ರು
7. ಎಸ್ ಬಿಐ, 1,55,068 ಕೋಟಿ ರು
8. ಇನ್ಫೋಸಿಸ್, 1,33,204 ಕೋಟಿ ರು
9. ಎನ್ ಟಿಪಿಸಿ, 1,31,886 ಕೋಟಿ ರು
10. ಐಸಿಐಸಿಐ ಬ್ಯಾಂಕ್, 1,30,402 ಕೋಟಿ ರು
ಬಿಎಸ್ ಇನಲ್ಲಿ ನೋಂದಾಯಿತ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಪ್ರತಿದಿನದ ಮಾರುಕಟ್ಟೆ ಏರಿಳಿತ ಹಾಗೂ ಷೇರು ಮೌಲ್ಯದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಇಲ್ಲಿ ನೀಡಿರುವ ಅಂಕಿ ಅಂಶಗಳು ಸೋಮವಾರ, 10 ಡಿಸೆಂಬರ್ 2012ಕ್ಕೆ ಅನ್ವಯವಾಗುವಂತೆ ಮಾತ್ರ ಇದೆ ಎಂದು ಓದಿಕೊಳ್ಳತಕ್ಕದ್ದು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications