24 ಗಂಟೆಗಳಲ್ಲಿ ಸರಕಾರ ಪತನ: ಯಡಿಯೂರಪ್ಪ

bsy-warns-bjp-if-action-taken-against-kjp-supporters
ಹೊಳಲ್ಕೆರೆ, ಡಿ.4: ಕೆಜೆಪಿ ನೇತಾರ ಬಿಎಸ್‌ ಯಡಿಯೂರಪ್ಪ ಅವರು ಮತ್ತೊಮ್ಮೆ ಗುಡುಗಿದ್ದಾರೆ. ಹಾಲಿ ಬಿಜೆಪಿ ಸರಕಾರಕ್ಕೆ ಕಟು ಎಚ್ಚರಿಕೆ ರವಾನಿಸಿರುವ ಯಡಿಯೂರಪ್ಪ ಅವರು 'ಬಿಜೆಪಿ ನಾಯಕರು ಇನ್ನು ಮೂರು ತಿಂಗಳ ಕಾಲ ಸುಮ್ಮನಿದ್ದರೆ ಸರಕಾರ ಸುಸೂತ್ರವಾಗಿ ನಡೆಯುತ್ತದೆ. ಇಲ್ಲಾಂದ್ರೆ...' ಎಂದು ಎಚ್ಚರಿಸಿದ್ದಾರೆ.

ಹೊಳಲ್ಕೆರೆಯಲ್ಲಿ ಸುದ್ದಿಗಾರರೊಂದಿಗೆ ಇಂದು ಮಂಗಳವಾರ ಮಾತನಾಡಿರುವ ಯಡಿಯೂರಪ್ಪ ಅವರು 'ಬಿಜೆಪಿ ಪಕ್ಷವು ತಮ್ಮ ಬೆಂಬಲಿಗ ಶಾಸಕರು/ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ ಶೆಟ್ಟರ್ ನಾಯಕತ್ವದ ಬಿಜೆಪಿ ಸರಕಾರವನ್ನು ಕೇವಲ 24 ಗಂಟೆಗಳಲ್ಲಿ ಬೀಳಿಸುವುದು ಖಚಿತ' ಎಂದು ಯಡಿಯೂರಪ್ಪ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಇದರಿಂದ ಶೆಟ್ಟರ್ ಸರಕಾರದ ಭವಿಷ್ಯದ ಮೇಲೆ ಕರಿಛಾಯೆ ಮೂಡಿದಂತಾಗಿದೆ.

ಡಿ. 9ರಂದು ಹಾವೇರಿಯಲ್ಲಿ ನಡೆಯಲಿರುವ ಕೆಜೆಪಿ ಸಮಾವೇಶಕ್ಕೂ ಮುನ್ನ ಯಡಿಯೂರಪ್ಪನವರ ಈ ಎಚ್ಚರಿಕೆಯ ಸಂದೇಶಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಹಾವೇರಿ ಸಮಾವೇಶದಲ್ಲಿ ಯಾರಾದರೂ ಪಾಲ್ಗೊಂಡರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ವರಿಷ್ಠರಿಂದ ರಾಜ್ಯ ಬಿಜೆಪಿ ನಾಯಕರು 'ಆದೇಶ' ಪಡೆದಿದ್ದಾರೆ ಎಂಬ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಕಟ್ಟೆಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಡಿ. 9ರ ನಂತರ ರಾಜ್ಯ ರಾಜಕೀಯದಲ್ಲಿ ಅದರಲ್ಲೂ ಆಡಳಿತಾರೂಢ ಬಿಜೆಪಿಯಲ್ಲಿ ರಾಜಕೀಯ ವಿಪ್ಲವಗಳು ನಡೆಯುವುದು ಖಚಿತ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+