ಇಂಡಿಯಾಟೈಮ್ಸ್ ಇಮೇಲ್ ಸೇವೆ ಬಂದ್

ಸೋಮವಾರ(ನ.19) ದಿಂದ ಅಧಿಕೃತವಾಗಿ ಇಂಡಿಯಾಟೈಮ್ಸ್ ಇಮೇಲ್ ಸೇವೆ ಲಭ್ಯವಿರುವುದಿಲ್ಲ ಎಂದು ಟ್ರೈಮ್ಸ್ ಗ್ರೂಪ್ ಹೇಳಿದೆ.
ಆದರೆ, ಎಷ್ಟು ಮಂದಿ ಇಂಡಿಯಾಟೈಮ್ಸ್ ಇಮೇಲ್ ಸೌಲಭ್ಯ ಬಳಸುತ್ತಿದ್ದರು ಎಂಬ ಮಾಹಿತಿಯನ್ನು ಸಂಸ್ಥೆ ಹೊರಹಾಕಿಲ್ಲ. ಇಂಟರ್ ನೆಟ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ(IAMAI) ಮಾಹಿತಿ ಪ್ರಕಾರ ಭಾರತದಲ್ಲಿ 150 ಮಿಲಿಯನ್ ಇಂಟರ್ನೆಟ್ ಬಳಕೆದಾರರ ಪೈಕಿ 86.9 ಮಿಲಿಯನ್ ಇಮೇಲ್ ಬಳಸುತ್ತಿದ್ದಾರೆ.
ಇಂಡಿಯಾಟೈಮ್ಸ್ ಇಮೇಲ್ ಗತಿ?: ಆದರೆ, ಇಂಡಿಯಾ ಟೈಮ್ಸ್ ಇಮೇಲ್ ಸೇವೆ ಸಂಪೂರ್ಣವಾಗಿ ಬಂದ್ ಆಗಲು ಫೆಬ್ರವರಿ 18, 2013 ರ ತನಕ ಟೈಮ್ ನೀಡಲಾಗಿದೆ. ಹೀಗಾಗಿ ಹಾಲಿ ಬಳಕೆದಾರರು ಅಲ್ಲಿ ತನಕ ನೆಮ್ಮದಿಯಿಂದ ಉಸಿರಾಡಬಹುದು.
'ನವೆಂಬರ್ 19,2012ರ ನಂತರ ಹೊಸ ಬಳಕೆದಾರರನ್ನು ಸೇರಿಸಿಕೊಳ್ಳುವುದನ್ನು ನಿಲ್ಲಿಸಲಾಗಿದೆ. ಇಂಡಿಯಾಟೈಮ್ಸ್.ಕಾಂನ ಇಮೇಲ್ ಸೌಲಭ್ಯ ಹೊಸಬರಿಗೆ ತಕ್ಷಣದಿಂದಲೇ ಲಭ್ಯವಾಗುವುದಿಲ್ಲ. ಫೆಬ್ರವರಿ 18, 2013ರ 12 ಗಂಟೆ ಭಾರತೀಯ ಕಾಲಮಾನ ಪ್ರಕಾರ ಈ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ' ಎಂದು ಟೈಮ್ಸ್ ಇಂಟರ್ನೆಟ್ ಲಿ. ನ ಉಪಾಧ್ಯಕ್ಷೆ ಅರ್ಚನಾ ವೋಹ್ರಾ ಅವರು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾರೆ.
ಫೆಬ್ರವರಿ 18ರ ನಂತರ ಇಮೇಲ್ ಕಳಿಸುವುದು, ಪಡೆಯುವುದು, ಟಾಸ್ಕ್, ಡಾಕ್ಯುಮೆಂಟ್, ಫೋಲ್ಡರ್, ಅಪಾಯಿಮೆಂಟ್, ಕಾಂಟ್ಯಾಕ್ಟ್ ಮುಂತಾದ ಸೌಲಭ್ಯಗಳಿಂದ ಗ್ರಾಹಕರು ವಂಚಿತರಾಗಲಿದ್ದಾರೆ.
1999ರಲ್ಲೇ ಆರಂಭವಾದ ಇಂಡಿಯಾಟೈಮ್ಸ್ ಮೇಲ್ ಹಲವು ಬಾರಿ ಹೊಸ ವಿನ್ಯಾಸ, ಸೌಲಭ್ಯಗಳೊಂದಿಗೆ ಗ್ರಾಹಕರ ಮುಂದೆ ಬಂದಿತ್ತು. 2007ರಲ್ಲಿ ಪುನರ್ ಆರಂಭಿಸಿದರೂ ಬಳಕೆದಾರರಿಗೆ ಮೆಚ್ಚುಗೆಯಾಗಲಿಲ್ಲ.
ಇಮೇಲ್ ಸೌಲಭ್ಯದಿಂದ ಟೈಮ್ಸ್ ಗ್ರೂಪ್ ಗೆ ಹೆಚ್ಚಿನ ಆದಾಯ ಬರುತ್ತಿಲ್ಲವಾದ್ದರಿಂದ ಇಮೇಲ್ ಸೇವೆಯನ್ನು ಸ್ಥಗಿತಗೊಳಿಸಲು ಟೈಮ್ಸ್ ಇಂಟರ್ನೆಟ್ ಲಿ. ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಆದರೆ, ಇಂಡಿಯಾಟೈಮ್ಸ್ ಇಮೇಲ್ ಐಡಿ ಬಳಸಿ ಗ್ರಾಹಕರು ಇಂಡಿಯಾಟೈಮ್ಸ್ ನ ಇತರೆ ಸೌಲಭ್ಯಗಳನ್ನು ಎಂದಿನಂತೆ ಬಳಕೆ ಮಾಡಬಹುದು. ಇಮೇಲ್ ಮಾತ್ರ ಕಳಿಸಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ.
ಮೈಕ್ರೋಸಾಫ್ಟ್ ನ ಹಾಟ್ ಮೇಲ್ ಕೂಡಾ ಹೊಸ ರೂಪ ಪಡೆದು ವಿಂಡೋಸ್ ಲೈವ್ ಹಾಟ್ ಮೇಲ್ ಆಗಿ ಪರಿವರ್ತನೆಗೊಂಡಿದೆ. ಯಾಹೂ ಮೇಲ್ ಹಾಗೂ ಜೀಮೇಲ್ ತನ್ನ ಪ್ರಭುತ್ವವನ್ನು ಬಿಟ್ಟುಕೊಟ್ಟಿಲ್ಲ. ಸರಿ ಸುಮಾರು 1 ಬಿಲಿಯನ್ ಗೂ ಅಧಿಕ ಬಳಕೆದಾರರನ್ನು ಈ ಎರಡೂ ಸಂಸ್ಥೆಗಳು ಹೊಂದಿದೆ ಎಂದು ಇಮೇಲ್ ಮಾರುಕಟ್ಟೆ ಪಂಡಿತರ ಅಭಿಪ್ರಾಯ.
2004ರಲ್ಲಿ ಆರಂಭವಾದ ಜೀಮೆಲ್ ಸೇವೆ ಸುಮಾರು 425 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಜಾಗತಿಕವಾಗಿ ಹೊಂದಿದೆ ಎಂದು ಗೂಗಲ್ ನ ಅಧಿಕೃತ ಬ್ಲಾಗ್ ಜೂನ್ ನಲ್ಲಿ ಪ್ರಕಟಿಸಿತ್ತು.
2011ರ ಜುಲೈ ತಿಂಗಳ ಗಣತಿಯಂತೆ ಮೈಕ್ರೋಸಾಫ್ಟ್ ನ ಹಾಟ್ ಮೇಲ್ ಬಳಕೆದಾರರ ಸಂಖ್ಯೆ 350 ಮಿಲಿಯನ್ ದಾಟುತ್ತದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications