ಬಿಎಸ್ವೈ ಹೊಸ ಪಕ್ಷದಿಂದ ವಿನಾಶದ ಅಂಚಿನಲ್ಲಿ ಬಿಜೆಪಿ

ಯಡಿಯೂರಪ್ಪ ಅವರು ರಚಿಸಲು ಉದ್ದೇಶಿಸಿರುವ ಹೊಸ ಪಕ್ಷದಿಂದ ಭಾರತೀಯ ಜನತಾ ಪಾರ್ಟಿಗೆ ಹಿನ್ನಡೆಯಾಗಲಿದೆ ಎಂದು ಜವರೇಗೌಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕುಮಾರಸ್ವಾಮಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಜನಪರ ಕಾರ್ಯಕ್ರಮಗಳು ನಮ್ಮ ಪಕ್ಷಕ್ಕೆ ವರದಾನವಾಗಲಿದೆ.
ಮತದಾರ ಯಾವಾಗಲೂ ಸ್ಥಿರ ಸರಕಾರ ಇರಬೇಕೆಂದು ಬಯಸುತ್ತಾನೆ. ಅವನಿಗೆ ಯಾವತ್ತೂ ಯಾವ ಪಕ್ಷವನ್ನೂ ಬೆಂಬಲಿಸ ಬೇಕೆನ್ನುವ ಗೊಂದಲವಿರುವುದಿಲ್ಲ. ಗೊಂದಲವಿರುವುದು ರಾಜಕೀಯ ಪಕ್ಷಗಳಲ್ಲಿ.
ಯಡಿಯೂರಪ್ಪ ಅವರ ನೂತನ ಪಕ್ಷದಿಂದ ಬಿಜೆಪಿಯ ಸಾಂಪ್ರದಾಯಕ ಮತಗಳು ವಿಭಜನೆಯಾಗಲಿವೆ ಎಂದು ಜವರೇಗೌಡ ಹೇಳಿದ್ದಾರೆ.
ವಿಭಜನೆಗೊಂಡ ಪಕ್ಷಗಳನ್ನು ಮತದಾರರು ಯಾವ ರೀತಿ ತಿರಸ್ಕರಿಸಿದ್ದಾರೆ ಎನ್ನುವುದಕ್ಕೆ ಉದಾಹರಣೆ ರಾಜ್ಯದಲ್ಲಿ ಬೇಕಾದಷ್ಟಿವೆ. ಯಡಿಯೂರಪ್ಪನವರ ಹೊಸ ಪಕ್ಷದಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿವೆ ಎಂದು ಜವರೇಗೌಡ ಭವಿಷ್ಯ ನುಡಿದ್ದಾರೆ.
ಯಾವುದೇ ಪಕ್ಷದ ಸರಕಾರವಿರಲಿ, ಅಧಿಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ದಕ್ಷತೆ, ಬಡವರಪರ ಕಾಳಜಿ ಮತ್ತು ಜನಕಲ್ಯಾಣ ಕೆಲಸಗಳ ಆಧಾರದ ಮೇಲೆ ಜನತಾ ನ್ಯಾಯಾಲಯದಲ್ಲಿ ಪಕ್ಷದ ಭವಿಷ್ಯ ನಿರ್ಧಾರವಾಗಲಿವೆ ಎಂದು ಜವರೇಗೌಡ ಹೇಳಿದ್ದಾರೆ.
ದೇವೇಗೌಡ ಮತ್ತು ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜಾತ್ಯಾತೀತ ಜನತಾದಳ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಶಕ್ತವಾಗಿದೆ. ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ನಾವು ಮಾಡಿರುವ ಜನಪರ ಕೆಲಸಗಳು ಮುಂದಿನ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗಲಿವೆ ಎಂದು ಜವರೇಗೌಡ ಹೇಳಿದ್ದಾರೆ.












Click it and Unblock the Notifications