ರೇಪ್: ಬೆಂಗಳೂರೂ ಹರಿಯಾಣಾ, ಬಿಹಾರ ಆಗುತ್ತಿದೆಯೇ?

ಆದರೆ ಈ ಉತ್ತರ ಭಾರತದ ಮಂದಿ ಎಲ್ಲೇ ಹೋದರೂ ರೇಪಿಸ್ಟ್ ಗಳು ಅವರನ್ನು ಹಿಂಬಾಲಿಸುತ್ತಿರುವಂತಿದೆ. ಅತ್ಯಂತ ಸುರಕ್ಷಿತ/ಸುಸಂಸ್ಕೃತ ತಾಣ ಎಂದು ಬೆಂಗಳೂರಿಗೆ ಬಂದರೆ ಇಲ್ಲೂ ಅದೇ ಕಾಮಪಿಪಾಸುಗಳ ಉಪಟಳ. ಬೆಂಗಳೂರಿಗೆ ಮಾತ್ರ ಸುಖಾಸುಮ್ಮನೆ ಕೆಟ್ಟ ಹೆಸರು.
ವಾರದ ಹಿಂದೆ ಟೆಕ್ಕಿ ಬಾಯ್ ಫ್ರೆಂಡ್ ಜತೆಗಿದ್ದ ನೇಪಾಳ ಮೂಲದ ವಿದ್ಯಾರ್ಥಿನಿ ಮೇಲೆ ಜ್ಞಾನಭಾರತಿ ಕ್ಯಾಂಪಸ್ ಬಳಿ ಗ್ಯಾಂಗ್ ರೇಪ್ ನಡೆದಿತ್ತು. ಆರೋಪಿಗಳನ್ನು ಹಾಗೂಹೀಗೂ ಹಿಡಿದು ಪೊಲೀಸರು ನಿಟ್ಟುಸಿರು ಬಿಟ್ಟರು.
ಆದರೆ ಮರುಘಳಿಗೆಯೇ ಅದೇ ದಿಕ್ಕಿನಲ್ಲಿ ಮತ್ತಂದು ಹೇಯ, ಪೈಶಾಚಿಕ, ಮಾತುಗಳಲ್ಲಿ ಹೇಳಲಾಗದಂತಹ ಗ್ಯಾಂಗ್ ರೇಪ್ ನಡೆದುಬಿಟ್ಟಿದೆ. ಗುರುವಾರ ಮಧ್ಯರಾತ್ರಿ ಮದ್ಯ ಸರಬರಾಜು ಮಾಡುವ ಮಾನಿನಿಯರ ಮೇಲೆ ಈ ಕುಕೃತ್ಯ ನಡೆದುಬಿಟ್ಟಿದೆ. ಪಾಪಿ ರೇಪಿಸ್ಟುಗಳಾ ನಿಮ್ಮ ತೀಟೆ ತೀರಿಸಿಕೊಳ್ಳುವ ಮುನ್ನ ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳು ಇರುತ್ತಾರೆ ಎಂಬುದನ್ನು ಮರೆಯಬೇಡಿ.
ದರೋಡೆಯೂ ಮಾಡಿ, ಮಾನಿನಿಯರ ಮಾನವನ್ನೂ ದೋಚಿದರು:
ಗುರುವಾರ ಮಧ್ಯರಾತ್ರಿ ಏನಾಗಿದೆಯೆಂದರೆ... ಗಾಂಧಿನಗರದ ಕ್ಯಾಸಿನೊ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಹತ್ತಾರು ಯುವತಿಯರು ಎಂದಿನಂತೆ ಕ್ಯಾಬ್ ಗಳಲ್ಲಿ ಕೆಂಗೇರಿಯ ಹೊರಗಿರುವ ಕೆಂಚಾಪುರ ಕ್ರಾಸ್ ನಾಗದೇವನಹಳ್ಳಿಯ ಜ್ಞಾನಜ್ಯೋತಿ ಲೇ ಔಟ್ನಲ್ಲಿರುವ ತಮ್ಮ ಗೂಡು ಸೇರಿಕೊಂಡಿದ್ದಾರೆ.
ಆಗಲೇ ಸುಮಾರು 9 ಮಂದಿ ಇದ್ದ ದುಷ್ಕರ್ಮಿಗಳ ಗುಂಪೊಂದು ಮನೆಗೆ ನುಗ್ಗಿದೆ. ಡಕಾಯಿತಿಗೆಂದು ಬಂದ ದರೋಡೆಕೋರರು ಕೊಂಡೂ ಹೋದ ಉಂಡೂ ಹೋದ ಎಂಬಂತೆ ಮಾನಿನಿಯರ ಮಾನವನ್ನೂ ದೋಚಿದ್ದಾರೆ.
ದರೋಡೆ ಮಾಡಿ, ಯುವತಿಯರಿಗೆ ಲೈಂಗಿಕ ಕಿರುಕುಳ ಕೊಟ್ಟ ದುಷ್ಕರ್ಮಿಗಳು ಅಷ್ಟಕ್ಕೇ ಸುಮ್ಮನಾಗದೆ ಕೆಲವರು ಮತ್ತೂ ನಾಲ್ಕಾರು ಯುವತಿಯರನ್ನು ಬೇರೊಂದು ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲೂ ಅವರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಅವರನ್ನು ಮತ್ತೆ ಅವರ ಮನೆಗೆ ಬಿಟ್ಟು, ಅವರ ಬಳಿಯಿದ್ದ ಇದ್ದಬದ್ದದ್ದನ್ನೆಲ್ಲ ದೋಚಿಕೊಂಡು ಹೋಗಿದ್ದಾರೆ.
ಇತ್ತ ಮನೆಯಲ್ಲೇ ಉಳಿದವರು ಬಾರ್ ಗರ್ಲ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಆ ಯುವತಿಯರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಒಬ್ಬೊಬ್ಬರನ್ನೇ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ವಿವಸ್ತ್ರಗೊಳಿಸಿ ನಗ್ನ ದೃಶ್ಯಗಳನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.
ಆಘಾತಕ್ಕೊಳಗಾದ ಬಾರ್ ಗರ್ಲ್ಸ್ ಬೆದರಿದ ಗುಬ್ಬಚ್ಚಿಗಳಂತಾಗಿದ್ದಾರೆ. ಇವರೆಲ್ಲ ಪಂಜಾಬ್, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಜಾರ್ಖಂಡ್ ಮೂಲದವರು ಎಂದು ತಿಳಿದುಬಂದಿದೆ. ಬಿಡದಿ ಪೊಲೀಸರು ಈಗ ಅತ್ಯಾಚಾರ, ಡಕಾಯಿತಿ ಮತ್ತು ಅಪಹರಣ ಪ್ರಕರಣಗಳನ್ನು ದಾಖಲಿಸಿಕೊಂಡು ಕುಳಿತಿದ್ದಾರೆ.
'ಆರೋಪಿಗಳು ಅಪರಿಚಿತ ವ್ಯಕ್ತಿಗಳು. ಅವರನ್ನು ಬಾರಿನಲ್ಲಿ ಅಥವಾ ಬೇರೆಲ್ಲೂ ನೋಡಿಲ್ಲ. ತಂಡದಲ್ಲಿದ್ದ ಬಹುತೇಕರು ಕನ್ನಡ ಮಾತನಾಡುತ್ತಿದ್ದರು. ಒಂದಿಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು' ಎಂದು ಯುವತಿಯರು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ. ಆರೋಪಿಗಳು, ಬಾರ್ ಗರ್ಲ್ಸ್ಗಳ ಚಲನವಲನದ ಮೇಲೆ ನಿಗಾ ಇಟ್ಟು ಯೋಜಿತ ರೀತಿಯಲ್ಲಿ ಈ ಕೃತ್ಯ ಎಸಗಿರಬಹುದು ಎಂದೂ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications