ರಾಜೀವ್ ಗಾಂಧಿ ಕುಟುಂಬದ ರಕ್ಷಣೆಗಾದ ಖರ್ಚು 1800 ಕೋಟಿ

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ರಕ್ಷಣಾ ಖರ್ಚುವೆಚ್ಚ ಬರೀ 2011 -12 ಆರ್ಥಿಕ ವರ್ಷದಲ್ಲಿ 386 ಕೋಟಿ ರೂಪಾಯಿ. 2004ರಿಂದ ಇದುವರೆಗೆ ಕೇಂದ್ರ ಸರಕಾರ ಇವರ ರಕ್ಷಣೆಗೆ 1800 ಕೋಟಿ ರೂಪಾಯಿಯನ್ನು ವ್ಯಯಿಸಿದೆ.
ಈ ಐವರಿಗೆ ಕೇಂದ್ರ ಸರಕಾರ ಎಸ್ಪಿಜಿ (ಸ್ಪೆಷಲ್ ಪ್ರೊಟೆಕ್ಶನ್ ಗ್ರೂಪ್) ಭದ್ರತೆ ನೀಡುತ್ತಿದೆ. ಕಳೆದ NDA ಸರಕಾರಕ್ಕೆ ಹೋಲಿಸಿದರೆ ಯುಪಿಎ ಸರಕಾರ ಇವರ ಭದ್ರತೆಗೆ ಖರ್ಚು ಮಾಡುತ್ತಿರುವ ವೆಚ್ಚ ನಾಲ್ಕು ಪಟ್ಟು ಹೆಚ್ಚು.
ಯುಪಿಎ ಸರಕಾರ ಅಧಿಕಾರಕ್ಕೆ ಬಂದ 2004 -05ರಲ್ಲಿ 97 ಕೋಟಿ ರೂಪಾಯಿ ಮಾತ್ರ ಎಸ್ಪಿಜಿ ರಕ್ಷಣೆಗೆ ಖರ್ಚು ಮಾಡಲಾಗಿತ್ತು. ಪ್ರಸಕ್ತ ಹಣಕಾಸಿನ ಸಾಲಿನಲ್ಲಿ ಖರ್ಚಿನ ವೆಚ್ಚ 350 ಕೋಟಿ ರೂಪಾಯಿ ದಾಟಬಹುದೆಂದು ಕೇಂದ್ರ ಗೃಹ ಇಲಾಖೆ ಅಂದಾಜಿಸಿದೆ.
1999 -2000 ದಲ್ಲಿ SPG ರಕ್ಷಣೆಗೆ ಖರ್ಚಾಗಿದ್ದು 75 ಕೋಟಿ ರೂಪಾಯಿ. ವಿ ಪಿ ಸಿಂಗ್ ಮತ್ತು ಪಿ ವಿ ನರಸಿಂಹ ರಾವ್ ತಮಗೆ ನೀಡಿದ್ದ ಎಸ್ಪಿಜಿ ರಕ್ಷಣೆ ಹಿಂದಕ್ಕೆ ಪಡೆಯುವಂತೆ ಗೃಹ ಖಾತೆಗೆ ಸೂಚಿಸಿದ್ದರು.
ಅದಾದ ನಂತರ ಮಾಜಿ ಪ್ರಧಾನಿಗಳಾದ ಐ ಕೆ ಗುಜ್ರಾಲ್, ಚಂದ್ರಶೇಖರ್ ಮತ್ತು ದೇವೇಗೌಡ ಅವರಿಗೆ ನೀಡುತ್ತಿದ್ದ ಈ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿತ್ತು.
ಪ್ಯಾರಾ ಮಿಲಿಟರಿ ಪಡೆಯಿಂದ ವಿಶೇಷ ತರಬೇತಿ ಪಡೆದವರನ್ನು SPG ಪಡೆಯಲ್ಲಿರುತ್ತಾರೆ. ಸುಮಾರು ಮೂರುವರೆ ಸಾವಿರ ಸಿಬ್ಬಂದಿ ಇದರಡಿಯಲ್ಲಿ ಬರುತ್ತಾರೆ ಹಾಗೂ ಅತ್ಯಾಧುನಿಕ ಸಾಧನಗಳನ್ನು ಈ ಪಡೆಗೆ ನೀಡಲಾಗುತ್ತದೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications