ಶೋಷಿತ ಗಂಡಂದಿರ ಗೋಳು ಕೇಳುವವರಾರು?

ಆದರೆ ಮಹಿಳೆಯಿಂದ ಪುರುಷರಿಗೆ ತೊಂದರೆಯಾದರೆ ಯಾವ ಕಾನೂನು ಇದೆ? ಇದರ ಸಾಧಕ ಬಾಧಕಗಳನ್ನು ಕೂಲಂಕುಷವಾಗಿ ಪರಾಂಬರಿಸಿ ಕಾನೂನು ರೂಪಿಸಬೇಕಲ್ಲವೇ?
ಇದು ಮೂವತ್ತಕ್ಕೂ ಹೆಚ್ಚು ಗಂಡಂದಿರು ತಮ್ಮ ತಮ್ಮ ಮಡದಿಯರಿಂದ ನೋವು, ಕಿರುಕುಳ ಅನುಭವಿಸಿ, ತಮ್ಮ ದುಃಖ ದುಮ್ಮಾನಗಳನ್ನು ತೋಡಿಕೊಂಡ 'ದರ್ದ್ ಭರಿ ಕಹಾನಿ'.
ಇವರ ನೋವಿನ ಕಥೆಗಳನ್ನು ಶಾಸಕರ ಭವನದದಲ್ಲಿ ನಡೆದ ಕರ್ನಾಟಕ ರಾಜ್ಯ ಪುರುಷರ ರಕ್ಷಣಾ ಸಮಿತಿ ಏರ್ಪಡಿಸಿದ್ದ 498A ಮಸೂದೆ ವಿಚ್ಛೇದನ ತಿದ್ದುಪಡಿ ಮೇಲಿನ ವಿಚಾರ ಸಂಕಿರಣದಲ್ಲಿ ಹಂಚಿಕೊಳ್ಳಲಾಯಿತು.
ಸರಕಾರ ಮತ್ತು ನ್ಯಾಯಾಲಯ ಮಹಿಳೆಯರ ಪರ 498A ಮಸೂದೆ ತಂದಿದೆ. ಇದನ್ನೇ ಮುಂದಿಟ್ಟುಕೊಂಡು ಅದೆಷ್ಟೋ ಮಹಿಳೆಯರು ರಾದ್ದಾಂತ ಮಾಡುತ್ತಾರೆ.
ಮಹಿಳೆಯರು ಪೊಲೀಸ್ ಕಂಪ್ಲೈಂಟ್ ಕೊಟ್ಟರೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಅದೇ ಪುರುಷರು ಕೊಟ್ಟರೆ ಅವರನ್ನೇ ಜೈಲಿಗೆ ತಳ್ಳುತ್ತಾರೆ.
ಸಣ್ಣ ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಿ ಗಂಡನನ್ನು, ಅವರ ತಂದೆ ತಾಯಿ ಮತ್ತು ಕುಟುಂಬವನ್ನು ಬ್ಲ್ಯಾಕ್ ಮೇಲ್ ಮಾಡುತ್ತಾರೆ. ವಿಚ್ಛೇದನ ಕೊಡೋದಕ್ಕೂ ಒಪ್ಪದೇ ಮಾನಸಿಕವಾಗಿ ಹಿಂಸಿಸುತ್ತಾರೆ ಎಂದು ಸಂಕಿರಣದಲ್ಲಿ ನೊಂದ ಗಂಡಂದಿರು ತಮ್ಮ ನೋವು ತೋಡಿಕೊಂಡರು.
ಸಾಫ್ಟ್ ವೇರ್ ಉದ್ಯೋಗಿಗಳು, ಕಿರುತೆರೆ ಕಲಾವಿದರು ಕೂಡಾ (ಅದು ಯಾರೆಂದು ಕೇಳಬೇಡಿ) ಹೆಂಡತಿಯರಿಂದ ಅನುಭವಿಸಿದ ಮಾನಸಿಕ ನೋವನ್ನು ಹಂಚಿಕೊಂಡು ಸಂಕಿರಣದಲ್ಲಿ ಕಣ್ಣೀರು ಹಾಕಿದರು.
ಕೌಟುಂಬಿಕವಾಗಿ ಮನಸ್ತಾಪ ನಡೆದರೆ ಗಂಡ ಮತ್ತು ಹೆಂಡತಿ ಇಬ್ಬರನ್ನೂ ಹೊಣೆಗಾರರನ್ನಾಗಿ ಮಾಡಬೇಕು. ದುಡಿಯುವ ಹೆಂಡತಿಯನ್ನೂ ಆರ್ಥಿಕವಾಗಿ ಪಾಲುದಾರರನ್ನಾಗಿಸಬೇಕು.
ಇದೆಲ್ಲಾ ಸಾಧ್ಯವಾಗಬೇಕಾದರೆ ಮಹಿಳೆಯರ ಪರವಿರುವ 498A ಮಸೂದೆಗೆ ತಿದ್ದುಪಡಿ ತರಬೇಕೆನ್ನುವುದು ಇವರೆಲ್ಲಾ ಒಕ್ಕೂರಿಲಿನ ಒತ್ತಾಯ.
ಕೆಲ ದಿನಗಳ ಹಿಂದೆ, ಗಂಡಂದಿರು ತಮ್ಮ ಪತ್ನಿಯರಿಗೆ ಕಡ್ಡಾಯವಾಗಿ ಮಾಸಿಕ ಲೆಕ್ಕಾಚಾರದಲ್ಲಿ ಸಂಬಳ ನೀಡುವ ಪದ್ದತಿ ಜಾರಿಗೆ ತರಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆ ಕೇಂದ್ರ ಸಚಿವ ಸಂಪುಟಕ್ಕೆ ಶಿಫಾರಸು ಮಾಡಿತ್ತು.
ಐಪಿಸಿ 498A - ಪುರುಷ ಅಥವಾ ಪುರುಷನ ಸಂಬಂಧಿಕರು ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ಅದು ಸಾಬೀತಾದರೆ ನ್ಯಾಯಾಲಯ ಈ ಕಾಯ್ದೆಯಡಿ ಮೂರು ವರ್ಷದವರೆಗೆ ನೀಡಬಹುದಾದ ಶಿಕ್ಷೆ.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ರಕ್ಷಣೆಗಾಗಿ ರೂಪಿಸಲಾಗಿದ್ದ ಈ ಮಸೂದೆ ಕೆಲವೊಮ್ಮೆ ದಾರಿ ತಪ್ಪುತ್ತಿದೆಯೇ? ಏನಂತೀರಿ ಓದುಗರೇ? [ಗಂಡನನ್ನು ಬಾಲ್ಕನಿಯ ತಳ್ಳಿದ ಹೆಂಡತಿ]
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications