2013ರಿಂದ ರೋಮಿಂಗ್ ಉಚಿತ: ಕಪಿಲ್ ಸಿಬಲ್

ರೋಮಿಂಗ್ ಸೇವೆಗೆ ಶುಲ್ಕದಿಂದ ವಿನಾಯ್ತಿ, 2 ಎಂಬಿಪಿಎಸ್ ತನಕ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆ ಎಲ್ಲರಿಗೂ ದೊರೆಯಲಿದೆ ಎಂದು ಪ್ರಕಟಿಸಿದ್ದ ದೂರ ಸಂಪರ್ಕ ಇಲಾಖೆ ಪ್ರಕಟಣೆಯನ್ನು ಮತ್ತೊಮ್ಮೆ ಕಪಿಲ್ ಸಿಬಲ್ ಅವರು ಚಾಚೂ ತಪ್ಪದೆ ಪುನರುಚ್ಚರಿಸಿದ್ದಾರೆ.
ರೋಮಿಂಗ್ ಉಚಿತ : ದೇಶದ ಯಾವುದೇ ಭಾಗದಲ್ಲಿ ಸೇವಾ ಸಂಸ್ಥೆ ಬದಲಿಸಿದರೂ, ಮೊಬೈಲ್ ಸಂಖ್ಯೆ ಬದಲಿಸುವ ಅಗತ್ಯ ಇರದ (ಎಂಎನ್ಪಿ) ಸೌಲಭ್ಯ ಒದಗಿಸಲು ಕೇಂದ್ರದ ಯುಪಿಎ ಸರ್ಕಾರ ಉದ್ದೇಶಿಸಿದೆ.
ದೇಶವ್ಯಾಪಿ 'ಎಂಎನ್ಪಿ' ಸೌಲಭ್ಯ,'ಒಂದು ದೇಶ- ಒಂದು ಲೈಸೆನ್ಸ್', 'ಒಂದು ದೇಶ ಉಚಿತ ರೋಮಿಂಗ್' ಸೌಲಭ್ಯ ಜಾರಿಗೆ ತರಲಾಗುವುದು ಇದರಿಂದ ಎಸ್ ಟಿಡಿ ಕರೆಗಳ ಅಂತರ ಕಡಿಮೆಯಾಗಲಿದೆ. ಈ ನೀತಿ ಅಳವಡಿಕೆಗೆ ಕೆಲ ಕಾಲ ಬೇಕಾಗುತ್ತದೆ ಎಂದು ಸಚಿವ ಕಪಿಲ್ ಹೇಳಿದ್ದಾರೆ.
ಬ್ರಾಡ್ಬ್ಯಾಂಡ್ ಸೇವೆಗೆ ಬದ್ಧ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲ ನಾಗರಿಕರು ಬ್ರಾಡ್ಬ್ಯಾಂಡ್ ಸೌಲಭ್ಯವನ್ನು ಬೇಡಿಕೆ ಆಧಾರದ ಮೇಲೆ ಪಡೆಯಬಹುದು. ಕನಿಷ್ಠ 2 Mbps ಡೌನ್ ಲೋಡ್ ಸ್ಪೀಡ್ ಇರುವ ಇಂಟರ್ನೆಟ್ ಜಾಲ ದೇಶದ ಮೂಲೆ ಮೂಲೆಗೂ ಹಬ್ಬಲಿದೆ. ಈ ನೀತಿ ಎಲ್ಲೆಡೆ ತಕ್ಷಣಕ್ಕೆ ಜಾರಿಗೆ ಬರಲಿದೆ. ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಇದೆ ಎಂದರೆ 2mbps ಸ್ಪೀಡ್ ಇರಲೇಬೇಕು.
ಹೊಸ ದೂರಸಂಪರ್ಕ ನೀತಿ-2012ಯನ್ನು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೊಳಿಸಲಾಗುತ್ತದೆ. ಎಂಎನ್ ಪಿ ಸೌಲಭ್ಯದ ಮೂಲಕ ರೋಮಿಂಗ್ ಶುಲ್ಕವಿಲ್ಲದೆ ನಿರಂತರವಾಗಿ ಸೇವೆ ಪಡೆಯಬಹುದು ಎಂದು ಟೆಲಿಕಾಂ ಕಾರ್ಯದರ್ಶಿ ಆರ್ ಚಂದ್ರಶೇಖರ್ ಹೇಳಿದ್ದಾರೆ.
ಯುಪಿಎ ಸರ್ಕಾರದ ಟೆಲಿಕಾಂ ನೀತಿ, ಯೋಜನೆಗಳ ಮುಖ್ಯಾಂಶ ಇಂತಿದೆ:
* ಗ್ರಾಮೀಣ ಭಾಗದಲ್ಲಿ ದೂರ ಸಂಪರ್ಕ ಸಾಂದ್ರತೆಯನ್ನು 2017ರೊಳಗೆ ಶೇ 39 ರಿಂದ 70ಕ್ಕೆ ಏರಿಸುವುದು
* ಒಂದೇ ತರಂಗಗುಚ್ಛದಲ್ಲಿದ್ದರೆ ಯಾವುದೇ ತಂತ್ರಜ್ಞಾನ, ಯಾವುದೇ ಸೇವೆ ಲಭ್ಯವಾಗುವಂತೆ ಮಾಡುವುದು.
* ಟೆಲಿಕಾಂ ಲೈಸನ್ಸ್, ಡೀಲಿಂಕಿಂಗ್ ಸ್ಪೆಕ್ಟಂ ಲೈಸನ್ಸ್, ಆನ್ ಲೈನ್ ಅರ್ಜಿ ಹಾಗೂ ನಿರ್ವಹಣೆ
* ಎಂಎನ್ಪಿ' ಸೌಲಭ್ಯ,'ಒಂದು ದೇಶ- ಒಂದು ಲೈಸೆನ್ಸ್', 'ಒಂದು ದೇಶ ಉಚಿತ ರೋಮಿಂಗ್' ಸೌಲಭ್ಯ
* Voice over Internet Protocol
* ಕ್ಲೌಡ್ ಕಂಪ್ಯೂಟಿಂಗ್, ಉನ್ನತ ತಂತ್ರಜ್ಞಾನ ಅಳವಡಿಕೆ, IPV6 ಜಾಲ ಬಳಕೆ.
2020 ಹೊತ್ತಿಗೆ ಶೇ 100ರಷ್ಟು ದೂರ ಸಂಪರ್ಕ ಜಾಲವನ್ನು ಗ್ರಾಮೀಣ ಭಾಗದಲ್ಲಿ ಹೊಂದುವುದು.
* ಮೊಬೈಲ್ ಫೋನ್ ಗಳನ್ನು ಆರ್ಥಿಕ, ಸಮಾಜಿಕ ಸಬಲೀಕರಣಕ್ಕೆ ಬಳಸುವುದು.
* ಎಲ್ಲರಿಗೂ ಬ್ರಾಡ್ ಬ್ಯಾಂಡ್ 2 ಎಂಬಿಪಿಎಸ್ ಕನಿಷ್ಠ ಡೌನ್ಲೋಡ್ ಮಿತಿ
ಮುಂತಾದ ಪ್ರಮುಖಾಂಶಗಳು ಹೊಸ ದೂರಸಂಪರ್ಕ ನೀತಿ-2012ಯಲ್ಲಿ ಹೇಳಲಾಗಿದೆ. ಇದರ ಅಳವಡಿಕೆಗೆ ಹರಾಜು ಪ್ರಕ್ರಿಯೆ ನಡೆಸಿ ಸ್ಪೆಕ್ಟ್ರಂ ಹಂಚಿಕೆ ಆದ ನಂತರ ಲೈಸನ್ಸ್ ನೀಡಲಾಗುವುದು ಎಂದು ಚಂದ್ರಶೇಖರ್ ಹೇಳಿದ್ದಾರೆ
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications