ವಿಶ್ವಾಸ ದ್ರೋಹ: ಅಹಮದ್ ಪಟೇಲ್ ಬಾಲ ಕಟ್

ಆದರೆ ಕಾಂಗ್ರೆಸ್ ಪಾಲಿಗೆ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಅಹಮದ್ ಪಟೇಲ್ ಸದ್ದಿಲ್ಲದೇ ತೆರೆಮೆರೆಗೆ ಸರಿದಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿರುವ ಸರ್ಕಾರ ಮತ್ತು ಪಕ್ಷಕ್ಕೆ ಸಂಬಂಧಪಟ್ಟ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಕೋರ್ ಕಮಿಟಿಯಲ್ಲೂ ಅಹಮದ್ ಪಟೇಲ್ ಸ್ಥಾನ ವಂಚಿತರಾಗಿದ್ದಾರೆ.
ಇದಕ್ಕೆಲ್ಲಾ ಕಾರಣ, ಲಕ್ಷ ಕೋಟಿ ರೂಪಾಯಿಗಿಂತಲೂ ಮಿಗಿಲಾದ ಕೋಲ್ ಗೇಟ್ ಹಗರಣ. ಕಲ್ಲಿದ್ದಲು ಘಟಕ ಹಂಚಿಕೆಯಲ್ಲಿ ನನ್ನ ಪಾತ್ರವೇನೂ ಇಲ್ಲ.ಎಲ್ಲಾ ನಿಮ್ಮ ಆಪ್ತ ಕಾರ್ಯದರ್ಶಿ ಅಹಮದ್ ಪಟೇಲ್ ಅವರ ಶಿಫಾರಸಿನ ಮೇರೆ ಘಟಕ ಹಂಚಿಕೆ ಮಾಡಲಾಗಿದೆ ಎಂದು ಯಾವಾಗ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿಗೆ ದೂರು ನೀಡಿದರೋ ಅಂದಿನಿಂದ ತನ್ನ ಪರಮಾಪ್ತ ಪಟೇಲರನ್ನು ಸೋನಿಯಾ ದೂರು ಸರಿಸಿಬಿಟ್ಟಿದ್ದಾರೆ.
2000 ಇಸವಿಯಿಂದ ಸೋನಿಯಾ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುತ್ತಿದ್ದ ಪಟೇಲ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ ತಪ್ಪಿಗಾಗಿ ಗಾಂಧಿ ಕುಟುಂಬದ ಆಪ್ತ ವಲಯದಿಂದ ಗೇಟ್ ಪಾಸ್ ಪಡೆದಿದ್ದಾರೆ ಎಂದು ಮುಂಬೈ ಮಿರರ್ ಮತ್ತು ಪುಣೆ ಮಿರರ್ ಪತ್ರಿಕೆ ವರದಿ ಮಾಡಿದೆ.
ದೇಶವನ್ನು ಬೆಚ್ಚಿ ಬೀಳಿಸಿದ ಈ ಕಲ್ಲಿದ್ದಲು ಹಗರಣದಿಂದ ಯುಪಿಎ ಮೈತ್ರಿಕೂಟದ ಸದಸ್ಯರೂ, ವಿರೋಧ ಪಕ್ಷಗಳೂ ಪ್ರಧಾನಿ ಕಾರ್ಯಾಲಯವನ್ನು ನೇರವಾಗಿ ಬೊಟ್ಟು ಮಾಡಿದ್ದವು. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಪ್ರಧಾನಿ ತನ್ನ ಅಧಿನಾಯಕಿ ಸೋನಿಯಾ ಬಳಿ ವಸ್ತು ಸ್ಥಿತಿಯನ್ನು ಬಿಚ್ಚಿಟ್ಟರೆನ್ನಲಾಗಿದೆ.
ಅಹಮದ್ ಪಟೇಲ್ ಅವರ ಶಿಫಾರಸಿಗೆ ಅನುಗುಣವಾಗಿ ತನ್ನ ಇಲಾಖೆಯ ಕಾರ್ಯದರ್ಶಿ ಘಟಕ ಹಂಚಿಕೆಗೆ ಮುಂದಾದರು ಎಂದು ಸೋನಿಯಾಗೆ ಮನವರಿಕೆ ಮಾಡಿದ ಪ್ರಧಾನಿ ಈ ಹಗರಣವನ್ನು ನೇರವಾಗಿ ಪಕ್ಷದ ತಲೆಗೆ ಕಟ್ಟಿದ್ದಾರೆ.
ಸದಾ ಮೌನವೇ ಉತ್ತರವೆನ್ನುತ್ತಿದ್ದ ಪ್ರಧಾನಿಯವರ ಈ ನಡೆಯನ್ನು ನಿರೀಕ್ಷಿಸದ ಅಹಮದ್ ಪಟೇಲ್ ತಬ್ಬಿಬ್ಬಾಗಿರುವುದುದಂತೂ ಸತ್ಯ.
ಅದಕ್ಕಿಂತಲೂ ಮಿಗಿಲಾಗಿ ಈ ಭಾರೀ ಹಗರಣದಿಂದ ದೇಶದ ಜನತೆ ತಬ್ಬಿಬ್ಬಾಗಿರುವುದು ಅದಕ್ಕಿಂತ ದೊಡ್ಡ ಸತ್ಯ.. ಸತ್ಯ.. ಸತ್ಯ..
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications