ಹಾಡಹಗಲೇ ಬಸ್ಟಾಂಡಿನಲ್ಲಿ ಮಹಿಳಾ ಟೆಕ್ಕಿ ಬರ್ಬರ ಹತ್ಯೆ

ಹೀಗೆ ಯುವತಿಯನ್ನು ಹತ್ಯೆ ಮಾಡಿದ ಯುವಕ ತಾನೂ ಚೂರಿಯಿಂದ ಚುಚ್ಚಿಕೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಅದಕ್ಕೂ ಮುನ್ನ ಇಬ್ಬರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಆದರೆ ಬಸ್ಟಾಂಡಿನಲ್ಲಿ ನೆರೆದಿದ್ದ ಜನ ಮಾತ್ರ ಇದ್ಯಾವುದೋ ಸಿನಿಮಾದ ಶೂಟಿಂಗ್ ಇರಬಹುದು ಎಂದು ಸುಮ್ಮನೇ ನೋಡುತ್ತಾ ನಿಂತರು. ಮತ್ತು ಈಗಾಗಲೇ ಇದು ಭಗ್ನ ಪ್ರೇಮದ ಕಥೆ ಎಂದೂ ನಿಮಗೆ ಅರಿವಾಗಿರಬಹುದು.
ಏನಾಯಿತೆಂದರೆ ಸಾವಿಗೀಡಾದ 21 ವರ್ಷ ಕಾರ್ತೀಕಾ ಮತ್ತು 27 ವರ್ಷದ ರಾಜಾರತ್ನಂ ನಡುವೆ ಕಾದಲ್ ನಡೆಯುತ್ತಿತ್ತು. ಆದರೆ ಅದೇನಾಯಿತೋ ಹುಡುಗಿ ಮನೆಯವರು ಈ ಪ್ರೇಮ-ಪ್ರೀತಿಗೆ ರೆಡ್ ಸಿಗ್ನಲ್ ತೋರಿಸಿದರು. ಇದರಿಂದ ತಿರುವತ್ತಿಯೂರಿನ ಮಾಣಿಕ್ಕಂ ನಗರದ ನಿವಾಸಿ, ಪಾಗಲ್ ಪ್ರೇಮಿ ರಾಜಾರತ್ನಂ ಕೆರಳಿದ.
ಟೆಕ್ಕಿ ಕಾರ್ತೀಕಾ ಬೇಕರಿ ಅಂಗಡಿಯ ಮಾಲೀಕನ ಒಬ್ಬಳೇ ಮುದ್ದುಮಗಳು. ಮೂಲತಃ ಕನ್ಯಾಕುಮಾರಿಯವನಾದ ರಾಜಾರತ್ನಂ ಐಟಿಐ ಡಿಪ್ಲೊಮಾ ಮಾಡಿಕೊಂಡಿದ್ದ. ಮಾಣಿಕ್ಕಂ ನಗರದಲ್ಲಿ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ. ಕಾರ್ತೀಕಾ ಮತ್ತು ರಾಜಾರತ್ನಂ ಮನೆಗಳು ಅಕ್ಕಪಕ್ಕದಲ್ಲಿದ್ದವು.












Click it and Unblock the Notifications