30 ಲಕ್ಷಕ್ಕೆ 90 ಲಕ್ಷ ದಂಡ ತೆತ್ತ ಸೈಫ್ ಅಲಿ?

ಛೋಟಾ ನವಾಬ್ ಸೈಫ್, ಸಣ್ಣ ಮೊತ್ತ ಭರಿಸದೆ ತನ್ನ ಆಮದು ಕಾರಿನೊಂದಿಗೆ ಸಿಕ್ಕಿಬಿದ್ದು , ದೊಡ್ಡ ಮೊತ್ತದ ದಂಡ (ಮೂರುಪಟ್ಟು ) ತುಂಬಬೇಕಾದ ಪ್ರಸಂಗ ಒದಗಿಬಂದಿದೆ.
ಎಂಟು ವರ್ಷ ಹಳೆಯದಾದ ಕಾರು ಆಮದು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸೈಫ್ ಅಲಿಯನ್ನು ನಾಲ್ಕು ತಾಸು ವಿಚಾರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿದೇಶಿ ಕಾರು ಆಮದು ಪ್ರಕರಣ ದಾಖಲೆ ಪರಿಶೀಲಿಸುತ್ತಿರುವ ಅಧಿಕಾರಿಗಳು 2004ರಲ್ಲಿ ದುಬೈನಿಂದ ಟೊಯೋಟಾ ಲ್ಯಾಂಡ್ ಕ್ರೂಸರ್ ವಾಹನವನ್ನು ಖರೀದಿಸಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿತ್ತು.
ಆದರೆ, ವಾಹನ ಆಮದು ಆಗಿದ್ದು ಮಾತ್ರ ಕೇರಳದ ನಿವಾಸಿ ಕೊಲಾಂಗರ ಮಹಮ್ಮದ್ ಹೆಸರಿನಲ್ಲಿ ಎಂಬುದು ವಿಶೇಷ.
ಕೆ ಮಹಮ್ಮದ್ ಹಿನ್ನೆಲೆ ಪರೀಕ್ಷಿಸಿದ ಕಸ್ಟಮ್ಸ್ ಅಧಿಕಾರಿಗಳು ಈತ ಈ ಐಷಾರಾಮಿ ವಾಹನ ಖರೀದಿಸಲು ಸಾಧ್ಯವೇ ಸಾಧ್ಯವಿಲ್ಲ ಎಂದು ಷರಾ ಹಾಕಿಬಿಟ್ಟಿತು. ಕಸ್ಟಮ್ಸ್ ಅಧಿಕಾರಿಗಳಿ ಹಾಗೂ ಗುಪ್ತಚರ ವಿಭಾಗ ತನಿಖೆ ನಡೆಸಿ, ಆಮದು ವ್ಯವಹಾರ ಕಾನೂನು ಬದ್ಧವಾಗಿಲ್ಲ ಎಂದು ವರದಿ ನೀಡಿತ್ತು.
ಒಂದು ವೇಳೆ ಕಾರು ಆಮದಿಗೆ ಸೈಫ್ 30 ಲಕ್ಷ ರೂ 'ವೈಟ್ ಮನಿ' ನೀಡಿದ್ದರೆ ತೆರಿಗೆ (ಡ್ಯೂಟಿ) ಬಾಬ್ತು ಕೇವಲ 30ಸಾವಿರ ರೂಪಾಯಿ ಭರಿಸಬೇಕಿತ್ತು. ಆದರೆ ಈಗ ಡ್ಯೂಟಿ ವಂಚಿಸಲು ಹೋಗಿ ಆತ 90 ಲಕ್ಷ ರೂಪಾಯಿ ದಂಡ ಶುಲ್ಕ ಭರಿಸಬೇಕಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ವಿಚಾರಣೆ ವೇಳೆ ಸೈಪ್ ಆರೋಪ ಸಾಬೀತಾದರೆ ಆತ ವಿದೇಶಿ ವಿನಿಮಯ ಆಡಳಿತ ಕಾಯ್ದೆ ಅನ್ವಯ 100 ಪಟ್ಟು ತೆರಿಗೆ ತುಂಬಬೇಕಾಗುತ್ತದೆ. 'ದುಬೈ ಡೀಲರಿಗೆ ಹೇಗೆ ಹಣ ರವಾನಿಸಲಾಗಿತ್ತು ಎಂಬುದರ ಬಗ್ಗೆ ಸೈಫ್ನಲ್ಲಿ ಪ್ರಶ್ನಿಸಲಾಗಿದ್ದು, ಉತ್ತರ ದಾಖಲಿಸಿಕೊಳ್ಳಲಾಗಿದೆ' ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
'ಈಗಾಗಲೇ ಕಾರು ಪ್ರಕರಣದ ಕುರಿತಂತೆ ಸಾಕಷ್ಟು ಸುದ್ದಿಗಳು ಪ್ರಕಟಗೊಂಡಿವೆ. ಹಾಗಾಗಿ ಆ ಬಗ್ಗೆ ನಾನು ಹೇಳುವಂತಹದ್ದೇನೂ ಬಾಕಿ ಉಳಿದಿಲ್ಲ' ಎಂದು ಸುದ್ದಿಗಾರರಿಗೆ ಸೈಪ್ ತಿಳಿಸಿದ್ದಾನೆ.
ಲೋಕವೆಲ್ಲ ಸೈಫ್ ಅಲಿ ಖಾನ್ ಮದುವೆ ಬಗ್ಗೆ ಚರ್ಚೆ ನಡೆಸುತ್ತಿರುವಾಗ, ಆದಷ್ಟು ಬೇಗ ಮದುವೆ ಆಗುವ ಅವಸರದಲ್ಲಿ ಸೈಫೀನಾ ಜೋಡಿ ಇರುವಾಗ ಸೈಫ್ ಅವರ ಕೊರಳಿಗೆ ಎಂಟು ವರ್ಷ ಹಳೆ ಕೇಸು ಜೋತು ಬಿದ್ದಿರುವುದು ಸೈಫ್ ಹಾಗೂ ಕರೀನಾಗೆ ಕಿರಿಕಿರಿ ತಂದಿರುವುದಂತೂ ನಿಜ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications