ಉಡುಪಿ ಶ್ರೀಕೃಷ್ಣನ 800 ವರ್ಷಗಳ ಇತಿಹಾಸಕ್ಕೆ ಕಪ್ಪುಚುಕ್ಕೆ

ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಶ್ರೀಲಕ್ಷ್ಮೀವರ ತೀರ್ಥರು ಪ್ರತ್ಯೇಕ ರಥೋತ್ಸವ ನಡೆಸಿ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.
ನನಗೆ ಪ್ರತ್ಯೇಕ ರಥೋತ್ಸವ ನಡೆಸುವಂತೆ ಕನಸಲಿ ಬಂದು ಪ್ರೇರಣೆಯಾದ ಹಿನ್ನಲೆಯಲ್ಲಿ ಉತ್ಸವ ನಡೆಸಿದ್ದೇನೆ. ಮಠದ ಸಂಪ್ರದಾಯ ಮುರಿಯುವುದು ನನ್ನ ಉದ್ದೇಶವಲ್ಲ. ನಮಗೂ ಮತ್ತು ಪರ್ಯಾಯ ಸೋದೆ ಶ್ರೀಗಳಿಗೂ ಅಸಮಾಧಾನವಿರುವುದು ಸತ್ಯ. ಅದನ್ನು ಮಾಧ್ಯಮದ ಮೂಲಕ ಹೇಳಿಕೆ ನೀಡಲಾಗುವುದಿಲ್ಲ ಎಂದು ಶಿರೂರು ಶ್ರೀಗಳು ಹೇಳಿಕೆ ನೀಡಿದ್ದಾರೆ.
ವಿಟ್ಲಪಿಂಡಿ (ಮೊಸರುಕುಡಿಕೆ) ಉತ್ಸವಕ್ಕೆ ಗರ್ಭಗುಡಿಯಿಂದ ಶ್ರೀಕೃಷ್ಣನ ಉತ್ಸವ ಮೂರ್ತಿ ಹೊರಗೆ ಬರುವ ಸ್ವಲ್ಪ ಹೊತ್ತಿಗೆ ಮುನ್ನ ರಥಬೀದಿಯಲ್ಲಿರುವ ರಾಘವೇಂದ್ರ ಮಠದ ಬೆಳ್ಳಿ ರಥದಲ್ಲಿ ಕೃಷ್ಣನ ಮಣ್ಣಿನ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಶಿರೂರು ಶ್ರೀಗಳು ರಥಾರೋಹಣ ಮಾಡಿಸಿದ್ದಾರೆ.
ಕೃಷ್ಣ ಮಠದ ಸಂಪ್ರದಾಯದಂತೆ ಪರ್ಯಾಯ ಶ್ರೀಗಳಿಗೆ ಮಾತ್ರ ವಿಟ್ಲಪಿಂಡಿ ಉತ್ಸವದ ರಥೋತ್ಸವ ಮತ್ತು ಇತರ ಸಂಪ್ರದಾಯ ನಡೆಸುವ ಅಧಿಕಾರವಿರುತ್ತದೆ.
ಅಲ್ಲದೆ ಬೆಳ್ಳಿಯ ರಥದ ಮುಂದೆ ಖುದ್ದು ತಾನೇ ನಿಂತು ಶಿರೂರು ಶ್ರೀಗಳು ಭಕ್ತರಿಗೆ ಲಡ್ಡು, ಚಕ್ಕುಲಿ ಪ್ರಸಾದ ವಿತರಿಸಿದರು. ಇನ್ನೂ ಮುಂದುವರಿದು ಗೊಲ್ಲರಿಂದ ಮೊಸರು ಕುಡಿಕೆಗಳನ್ನು ಒಡೆಸುವ ಆಟ ವಾಡಿಸಿದರು.
ಶಿರೂರು ಶ್ರೀಗಳ ಈ ರಥೋತ್ಸವದಿಂದ ಚಿನ್ನದ ರಥದಲ್ಲಿ ಸಾಗುತ್ತಿದ್ದ ಮೂಲ ಕೃಷ್ಣನ ಉತ್ಸವ ಮೂರ್ತಿ ರಥೋತ್ಸವಕ್ಕೆ ಸ್ವಲ್ಪ ಮಟ್ಟಿನ ಕಿರಿಕಿರಿ, ವಿಳಂಬ ಉಂಟಾಯಿತು.
ಪ್ರತ್ಯೇಕ ರಥೋತ್ಸವದ ಯಾವುದೇ ಮುನ್ಸೂಚನೆ ನೀಡದ ಶಿರೂರು ಶ್ರೀಗಳ ಈ ನಡೆಯಿಂದ ಭಕ್ತರು ಮತ್ತು ಪೊಲೀಸರು ಗಲಿಬಿಲಿಗೊಂಡರು.
ಕೊನೆಗೆ ಶಿರೂರು ಶ್ರೀಗಳು ತಮ್ಮ ರಥವನ್ನು ಕೃಷ್ಣ ಮಠದ ಹಿಂಭಾಗದಲ್ಲಿರುವ ಬೃಹತ್ ಪಾರ್ಕಿಂಗ್ ಪ್ರದೇಶಕ್ಕೆ ಭಾರೀ ಮೆರವಣಿಗೆಯಲ್ಲಿ ಕೊಂಡೊಯ್ದು ಹುಲಿವೇಷ ಸ್ಪರ್ಧೆ ನಡೆಸಿ ವಿಟ್ಲಪಿಂಡಿ ಉತ್ಸವದ ವೈಭವ ಹೆಚ್ಚಿಸಿದರು.
ಉಡುಪಿಯಲ್ಲಿ ಅಷ್ಟಮಠಗಳ ನಡುವಣ ಭಿನ್ನಾಭಿಪ್ರಾಯ ಹೊಸತೇನಲ್ಲ. ಎರಡೆರಡು ಏಕಾದಶಿ ಆಚರಣೆ, ಕೃಷ್ಣನ ಹುಟ್ಟುಹಬ್ಬದ ಗೊಂದಲ ಇತ್ಯಾದಿಗಳಿಂದಾಗಿ ಭಕ್ತರು ಬಹಳಷ್ಟು ಬಾರಿ ಗೊಂದಲಕ್ಕೆ ಈಡಾಗಿದ್ದರು.
ಶ್ರೀಕೃಷ್ಣ ಜನ್ಮಾಸ್ಟಮಿಯ ದಿನವಾದ ಶನಿವಾರ (ಸೆ 8) ಮಧ್ಯರಾತ್ರಿ ನಡೆದ ಅರ್ಘ್ಯಪ್ರಧಾನಕ್ಕೆ ಶಿರೂರು ಶ್ರೀಗಳಿಗೆ ಪರ್ಯಾಯ ಮಠದಿಂದ ಆಹ್ವಾನ ಬಂದಿರಲಿಲ್ಲ ಎನ್ನಲಾಗಿದೆ.
ನಂಜನಗೂಡಿನ ನಂಜುಂಡೇಶ್ವರನನ್ನು ನಂಜುಂಡೇಶ್ವರ ಅನ್ನಬೇಕೋ ಶ್ರೀಕಂಠೇಶ್ವರ ಅನ್ನಬೇಕೋ ಎಂಬ ಎರಡು ಹೆಸರುಗಳ ನಡುವೆ ವಿವಾದ ಹುಟ್ಟಿಕೊಂಡಿತ್ತು. ಈಗ ಉಡುಪಿ ಶ್ರೀಕೃಷ್ಣ ಮಠದ ಸರದಿ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications