ಎಬಿವಿಪಿ ನಾಯಕ ಸಚಿನ್ ದುರಂತ ಅಂತ್ಯ
ಜು.6,2012ರಂದು ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ಪಲ್ಲಿಕ್ಕುಣ್ಣು ಶಾಲೆ ಬಳಿ ಸಚಿನ್ ಗೋಪಾಲನ್ ಅವರ ಮೇಲೆ ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರು(ಇಸ್ಲಾಮ್ ಉಗ್ರ ಸಂಘಟನೆ) ಮಾರಾಂತಿಕವಾಗಿ ಹಲ್ಲೆಗೈದಿದ್ದರು. ಸುಮಾರು ಎರಡು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಸಚಿನ್ ದುರಂತ ಸಾವು ಕಂಡಿದ್ದಾರೆ ಎಂದು ಸ್ಥಳೀಯ ಎಬಿವಿಪಿ ಸಂಘಕರು ದುಃಖಿಸಿದ್ದಾರೆ.
ಬಂದ್ ಗೆ ಕರೆ: ವಿದ್ಯಾರ್ಥಿ ನಾಯಕ ಸಚಿನ್ ಸಾವಿಗೆ ಸಿಎಫ್ ಐ ಕಾರಣ ಎಂದು ಆರೋಪ ಹೊರೆಸಿ ಬಿಜೆಪಿ ಹಾಗೂ ಆರೆಸ್ಸೆಸ್ ಸಂಘಟನೆಗಳು ಕಣ್ಣೂರು ಜಿಲ್ಲೆಯಲ್ಲಿ ಗುರುವಾರ ಬಂದ್ ಆಚರಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಯಾರನ್ನು ಬಂಧಿಸಿಲ್ಲ. ಘಟನೆ ಬಗ್ಗೆ ತೀವ್ರ ತನಿಖೆ ನಡೆಸಬೇಕು ಎಂದು ಆರೆಸ್ಸೆಸ್ ಅಖಿಲ ಭಾರತೀಯ ಸಹ ಪ್ರಚಾರ್ ಪ್ರಮುಖ್ ಜೆ ನಂದ ಕುಮಾರ್ ಅವರು ಆಗ್ರಹಿಸಿದ್ದಾರೆ.
ಕಣ್ಣೂರು ಜಿಲ್ಲಾ ಪೊಲೀಸ್ ವರಿಷ್ಠ ರಾಹುಲ್ ನಾಯರ್ ಅವರು ಡಿವೈಎಸ್ಪಿ ಪಿ ಸುಕುಮಾರ್ ನೇತೃತ್ವದ 15 ಜನರ ವಿಶೇಷ ತಂಡವನ್ನು ರಚಿಸಿದ್ದಾರೆ. ಆದರೆ, ಇನ್ನೂ ಯಾವುದೇ ಪ್ರಗತಿ ಕಂಡು ಬಂದಿಲ್ಲ.
ಕೇರಳ ಗೃಹ ಸಚಿವ ಟಿ ರಾಧಕೃಷ್ಣನ್ ಅವರಿಗೆ ಎಬಿವಿಪಿ, ಕಣ್ಣೂರು ಘಟಕ ಈ ಬಗ್ಗೆ ಮನವಿ ಸಲ್ಲಿಸಿ ಬಂದಿದ್ದು, ಸಿಎಫ್ ಐ ಹಾಗೂ ಪಿಎಫ್ ಐ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಭಯೋತ್ಪಾದನೆ, ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದ ವಿಶಾಲ್ ಎಂಬ ಎಬಿವಿಪಿ ನಾಯಕನ ಹತ್ಯೆ ನಂತರ ಸಚಿನ್ ದುರಂತ ಅಂತ್ಯ ಎರಡನೇ ಪ್ರಕರಣವಾಗಿದೆ.