ಪ್ಯಾರಾಲಿಂಪಿಕ್ಸ್: ಬೆಳ್ಳಿ ಗೆದ್ದ ಕನ್ನಡಿಗ ಗಿರೀಶ್

24 ವರ್ಷದ ಕನ್ನಡ ಕುವರ ಗಿರೀಶ್, ಎಡಗಾಲು ಊನವಾಗಿದ್ದರೂ ಹೈಜಂಪ್ ನಲ್ಲಿ ಹಾರುವ ರೀತಿ ನೋಡಿ ಪ್ರೇಕ್ಷಕರು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಗಿರೀಶ್ ಅವರು ಕತ್ತರಿ ತಂತ್ರಜ್ಞಾನ ಬಳಸಿ 1.74 ಮೀ ಹಾರಿ ಅಂತಿಮ ಹಣಾಹಣಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಸೋಮವಾರ ರಾತ್ರಿ ನಡೆದ ಈ ಪಂದ್ಯಾವಳಿಯನ್ನು ಸುಮಾರು 80,000 ಪ್ರೇಕ್ಷಕರು ವೀಕ್ಷಿಸಿದರು. ಫಿಜಿ ದೇಶದ ಎಲ್ಲಿಸಾ ಡೆಲಾನಾ ಅವರು ಚಿನ್ನ ಗೆದ್ದರೆ, ಪೋಲೆಂಡ್ ನ ಲೂಕಾಸ್ಜ್ ಮಾಮ್ಕಾಕ್ರಾಜ್ ಅವರು ಕಂಚಿನ ಪದಕಕ್ಕೆ ತೃಪ್ತಿ ಪಟ್ಟರು.
ಗಿರೀಶ್ ಗೆ ಚಿನ್ನದ ಪದಕ ಸ್ವಲ್ಪದರಲ್ಲೇ ಕೈ ತಪ್ಪಿದೆ.ಚಿನ್ನದ ಪದಕ ಗೆದ್ದ ಫಿಜಿ ದೇಶದ ಎಲ್ಲಿಸಾ ಡೆಲಾನಾ ಹಾಗೂ ಗಿರೀಶ್ ಇಬ್ಬರು ಸಮಾನ ಅಂತರ ಎತ್ತರಕ್ಕೆ ಹಾರಿದ್ದರು.
ಸ್ಪರ್ಧೆ ಸುತ್ತು ಮುಗಿದಾಗ ಗಿರೀಶ್ ಹಾಗೂ ಎಲ್ಲಿಸಾ ಇಬ್ಬರು 1.74 ಮೀ ಹಾರಿದ್ದರು.ಆದರೆ, ಎಲ್ಲಿಸಾ ಅವರು ಕಡಿಮೆ ಪ್ರಯತ್ನದಲ್ಲಿ 1.74 ಮೀ ಹಾರಿದ ಕಾರಣ ಅವರಿಗೆ ಚಿನ್ನದ ಪದಕ ಸಿಕ್ಕಿದೆ.
ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆ ಸಮರ್ಥನಂ ಸಂಸ್ಥೆಯ ಬೆಂಬಲ ಪಡೆದು ಪ್ಯಾರಾಲಿಂಪಿಕ್ಸ್ ಗೆ ತೆರಳಿದ್ದ ಗಿರೀಶ್ ತಮ್ಮ ಪ್ರತಿಭೆಗೆ ತಕ್ಕ ಪ್ರದರ್ಶನ ನೀಡಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಭಾರತ ಸರ್ಕಾರದ ನೆರವಿನಿಂದ ಬಾಸಿಲ್ಡಾನ್ ಕ್ರೀಡಾ ಗ್ರಾಮದಲ್ಲಿ ಸುಮಾರು ಮೂರು ವಾರಗಳ ಕಾಲ ತರಬೇತಿ ಪಡೆದ ಗಿರೀಶ್ ನೀಡಿದ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರಿನ ಎನ್ ಜಿಒ ಸಮರ್ಥನಂ 2008ರಿಂದ ಅಂಗವಿಕಲರಿಗೆ ಸಹಾಯ ಹಸ್ತ ಚಾಚುತ್ತಾ ಬಂದಿದೆ. ಕ್ರೀಡಾಪಟುಗಳಿಗೆ ಆಶಾಕಿರಣವಾಗಿರುವ ಈ ಸಂಸ್ಥೆ ಜನಮೆಚ್ಚುಗೆಗೆ ಪಾತ್ರವಾಗಿದೆ.
ಪ್ಯಾರಾಲಿಂಪಿಕ್ಸ್ ನ ಪುರುಷರ ಡಿಸ್ಕಸ್ ಥ್ರೋ ಪಂದ್ಯದಲ್ಲಿ ಭಾರತದ ಜೈದೀಪ್ 39.77 ಮೀದೂರ ಎಸೆದು 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಭಾರತದ ಅಂಗವಿಕಲ ಕ್ರೀಡಾಪಟುಗಳಿಗೆ ಸರಿಯಾದ ಸಹಾಯಕರಿಲ್ಲದೆ ತಮ್ಮ ವೀಲ್ ಚೇರ್ ದೂಡಿಕೊಂಡು ಓಡಾಡಲು ಕಷ್ಟಪಟ್ಟ ಪ್ರಸಂಗ ನಡೆದಿದೆ. ಪವರ್ ಲಿಫ್ಟರ್ ಫರ್ಮಾನ್ ಬಾಷಾ ಅವರು ಸಹಾಯಕರಿಲ್ಲದೆ ಅರ್ಧ ಕಿ.ಮೀ ದೂರದ ಭೋಜನ ಶಾಲೆಗೆ ಹೋಗಲು ಆಗದೆ ಕಷ್ಟಪಟ್ಟಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications