ಬಂಧಿತ ಆರೋಪಿ ಉಗ್ರರಿಗೆ ಜಾಮೀನು ಕಷ್ಟ ಕಷ್ಟ
ಹಾಗೆ ನೋಡಿದರೆ ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ರಾಜ್ಯ ಪೊಲೀಸರು 56 ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಅವರು ಯಾರೂ ಜಾಮೀನಿನ ಮೇಲೆ ಬಿಡುಗಡೆಯಾಗಿಲ್ಲ. ಆದರೆ ಹುಬ್ಬಳ್ಳಿ ನ್ಯಾಯಾಲಯದ ಸ್ಫೋಟ ಆರೋಪಿಗಳು ಮಾತ್ರ ಜಾಮೀನು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳಿದ ಶಂಕಿತ ಉಗ್ರರು ಸುಪ್ರೀಂಕೋರ್ಟ್ ಕದ ತಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದರು ಎಂಬುದಕ್ಕೆ ಪೊಲೀಸರು ಬಲವಾದ ಸಾಕ್ಷ್ಯ ಸಂಗ್ರಹಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಜಾಮೀನು ಕೊಡಲು ಸುತರಾಂ ಮನಸ್ಸು ಮಾಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಭದ್ರತೆ ಸೂಕ್ಷ್ಮ ವಿಚಾರ ಆಗಿರುವುದರಿಂದ ಶಂಕಿತ ಉಗ್ರರಿಗೆ ನ್ಯಾಯಾಲಯಗಳು ಜಾಮೀನು ನೀಡುವುದು ಕಷ್ಟ ಕಷ್ಟ.
ರಾಜ್ಯದಲ್ಲಿ
ನಡೆದ
ಭಯೋತ್ಫಾದನೆ
ಪ್ರಕರಣಗಳು
ಯಾವುವು:
ಚರ್ಚ್
ಬಾಂಬ್
ಸ್ಫೋಟ,
ಐಐಎಸ್
ಸಿ
ಮೇಲಿನ
ದಾಳಿ,
ಬೆಂಗಳೂರು
ಸರಣಿ
ಬಾಂಬ್
ಸ್ಫೋಟ,
ಚಿನ್ನಸ್ವಾಮಿ
ಕ್ರೀಡಾಂಗಣ
ಸ್ಫೋಟ,
ಹುಬ್ಬಳ್ಳಿ
ಜೆಎಂಎಫ್
ಸಿ
ನ್ಯಾಯಾಲಯ
ಸ್ಫೋಟ,
ಮೈಸೂರಿನಲ್ಲಿ
ಸಿಕ್ಕಿಬಿದ್ದ
ಅಲ್
ಬದ್ರ್
ಉಗ್ರರು,
ಆಂಧ್ರದ
ಮೆಹಬೂಬ್
ನಗರದಲ್ಲಿ
ಸಿಕ್ಕಿಬಿದ್ದ
ಎಲ್ಇಟಿ
ಕಮಾಂಡರ್,
ಮಂಗಳೂರು
ಮತ್ತು
ಚಿಂತಾಮಣಿಯಲ್ಲಿ
ಸೆರೆಸಿಕ್ಕ
ಉಗ್ರರು
ಸೇರಿದಂತೆ
ಒಟ್ಟು
56
ಮಂದಿ
ರಾಜ್ಯದ
ವಿವಿಧ
ಜೈಲುಗಳಲ್ಲಿ
ಬಂಧಿಗಳಾಗಿದ್ದಾರೆ.
ಬೆಂಗಳೂರು ಪೊಲೀಸರೇ 40 ಮಂದಿ ಉಗ್ರರ ಬೇಟೆಯಾಡಿದ್ದಾರೆ. ಕೇರಳದ ಪಿಡಿಎಫ್ ಮುಖಂಡ ಅಬ್ದುಲ್ ನಾಜರ್ ಮದನಿ ಸೇರಿದಂತೆ ಹಲವರ ವಿರುದ್ಧ ವಿವಿಧ ನ್ಯಾಯಾಲಯಗಳಿಗೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಹಿಂದೊಂದು ಮುಂದೊಂದು ನಂಬರ್ ಪ್ಲೇಟ್: ಹುಬ್ಬಳ್ಳಿಯಲ್ಲಿ ಮೊನ್ನೆ ಬಂಧನಕ್ಕೊಳಗಾದ ಗುತ್ತಿಗೆದಾರ ಮಹಮ್ಮದ್ ಸಾಧಿಕ್ ಲಷ್ಕರ್ ಅಲಿಯಾಸ್ ರಾಜು (28) ಮನೆಯೊಳಗೆ TVS Victor ದ್ವಿಚಕ್ರ ವಾಹನವೊಂದು ಅಡಗಿ ಕುಳಿತಿದೆ. ಇದರ ವಿಶೇಷವೇನೆಂದು ಕೇಳಿದಿರಾ?
ಈ ವಾಹನ ಸಾಧಿಕ್ ಲಷ್ಕರ್ ಗೆ ಸೇರಿದ್ದು. ಅವ ಕಾರು ಖರೀದಿಸಿದ ನಂತರ ಬೈಕನ್ನು ಮೂಲೆಗೆ ತಳ್ಳಿ, ಕಾರುಬಾರು ಜೋರಾಗಿ ನಡೆಸಿದ್ದಾನೆ. ಆಶ್ಚರ್ಯವೆಂದರೆ ಈ ಬೈಕಿಗೆ ಹಿಂದೆ ಮತ್ತು ಮುಂದೆ ಇರುವ ನೋಂದಣಿ ಸಂಖ್ಯೆ ಬೇರೆ ಬೇರೆಯಾಗಿದೆ.
ಮುಂಬದಿಯ ನಂಬರ್ ಪ್ಲೇಟಿನಲ್ಲಿ KA 17 U 983 ಇದೆ. ಅದೇ ಹಿಂಬದಿಯಲ್ಲಿ KA 17 U 893 ಇದೆ. ಒಂದೇ ದೃಷ್ಟಿಗೆ ಇದು ಪ್ರ್ತೇಕ ನಂಬರ್ ಎಂಬುದು ಗೊತ್ತಾಗದು. ಕೇವಲ 2 ಸಂಖ್ಯೆಗಳನ್ನು ಅದಲು ಬದಲು ಮಾಡಿ, ಪೊಲೀಸರ ಕಣ್ಣಿಗೆ ಮಣ್ಣೆರಚುವ ಪ್ರಯತ್ನವಾ ಇದು? ಅಥವಾ ಈ ಎರಡೂ ನಂಬರುಗಳು ನಕಲಿಯವೇ? ಹುಬ್ಬಳ್ಳಿ ಪೊಲೀಸರು ತಕ್ಷಣವೇ ಸಾಧಿಕ್ ನ ಮನೆಗೆ ತೆರಳಿ, ಸಮಗ್ರ ಪರಿಶೀಲನೆ ನಡೆಸುವುದು ಒಳ್ಳೆಯದು.