ಮಂಗಳನ ಅಂಗಳಕ್ಕೆ ಇಳಿದ ಕ್ಯೂರಿಯಾಸಿಟಿ

ಭೂಮಿಯಿಂದ ಸುಮಾರು ಎಂಟು ತಿಂಗಳ ಪಯಣವನ್ನು ಮುಗಿಸಿ ಕೆಂಪು ಗ್ರಹದ ಮೇಲೆ ಕ್ಯೂರಿಯಾಸಿಟಿ ಇಳಿಯುತ್ತಿದ್ದಂತೆ ನಾಸಾದ ವಿಜ್ಞಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು. ಪೂರ್ಣ ಪ್ರಮಾಣದ ಸುಸಜ್ಜಿತ ಮೊಬೈಲ್ ಪ್ರಯೋಗಾಲಯ ಹೊತ್ತ 'ಕ್ಯೂರಿಯಾಸಿಟಿ ರೋವರ್' ಮಂಗಳವಾರ (ಆ.6) ಬೆಳಗ್ಗೆ ನಿಗದಿತ ಸಮಯಕ್ಕೆ ಸರಿಯಾಗಿ ಇಳಿದಿದೆ.
ಲಾಸ್ ಏಂಜಲೀಸ್ ನಲ್ಲಿರುವ ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದ ಇಂಜಿನಿಯರ್ ಗಳು ಈ ಶೋಧ ನೌಕೆಯನ್ನು ಇಳಿಸುವ ಕಾರ್ಯದಲ್ಲಿ ತೊಡಗಿದ್ದರು. ಒಂದು ಟನ್ ತೂಕದ, ಆರು ಚಕ್ರಗಳಿರುವ, 17 ಕೆಮೆರಾ ಹೊಂದಿರುವ ಅಣುಶಕ್ತಿ ಚಾಲಿತ ಈ ವಾಹನವನ್ನು ಕರಾರುವಾಕ್ಕಾಗಿ ಇಳಿಸುವ ಪ್ರಕ್ರಿಯೆ ಅಷ್ಟು ಸುಲಭದ ಮಾತಲ್ಲ. ಸುಮಾರು 2.5 ಬಿಲಿಯನ್ ಡಾಲರ್ ಮೌಲ್ಯದ ಈ ಯೋಜನೆ ಹಿಂದೆ ಸುಮಾರು 30 ವರ್ಷದ ಪರಿಶ್ರಮ ಅಡಗಿದೆ.
ಮಂಗಳನ ವಾತಾವರಣ ನೌಕೆಯನ್ನು ಇಳಿಸಲು ಸೂಕ್ತವಾಗಿದ್ದು, ಎಲ್ಲ ತಾಂತ್ರಿಕ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಭೂಮಿಯಿಂದ 567 ದಶಲಕ್ಷ ಕಿಲೋಮೀಟರ್ ದೂರದ ಮಂಗಳ ಗ್ರಹದತ್ತ ಸುಮಾರು ಎಂಟೂವರೆ ತಿಂಗಳ ಹಿಂದೆ ಕೇಪ್ ಕಾನಾವೆರಲ್, ಫ್ಲೋರಿಡಾದಿಂದ ನೌಕೆಯನ್ನು ಹಾರಿ ಬಿಡಲಾಗಿತ್ತು.
ಪುಟ್ಟ ಕಾರಿನ ಗಾತ್ರದ ಈ ನೌಕೆ ಮಂಗಳದ ದಕ್ಷಿಣಾರ್ಧ ಗೋಳದ ಗೇಲ್ ಕ್ರೇಟರ್ ಸಮೀಪನ ಸಮತಟ್ಟಾದ ನೆಲದಲ್ಲಿ ಇಳಿದಿದೆ.
ಮಂಗಳನ ವಾತಾವರಣ ಹೊರಗೆ ಗಂಟೆಗೆ 8,000 ಮೈಲು ವೇಗದಲ್ಲಿ ಸುತ್ತುತ್ತಿರುವ ಕ್ಯೂರಿಯಾಸಿಟಿ ನಿಧಾನವಾಗಿ ಮಂಗಳನ ಗುರುತ್ವಾಕರ್ಷಣ ಶಕ್ತಿಯ ವ್ಯಾಪ್ತಿಯೊಳಗೆ ಪ್ರವೇಶಿಸಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications