ಬಾಡ್ಮಿಂಟನ್ : ಕರಗಿ ಹೋದ ಸೈನಾ ಚಿನ್ನದ ಕನಸು

ಇದೇ ಪ್ರಪ್ರಥಮ ಬಾರಿಗೆ ಸೆಮಿಫೈನಲ್ಸ್ ಹಂತ ತಲುಪಿದ್ದ ವಿಶ್ವದ 5ನೇ ಶ್ರೇಯಾಂಕದ ಸೈನಾ ನೆಹ್ವಾಲ್ ಅವರು 21-13, 21-13 ಅಂತರದಲ್ಲಿ ವಿಶ್ವದ ನಂ.1 ಎದುರಾಳಿ ಚೀನಾದ ವಾಂಗ್ ಯಿಹಾನ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಹಂತಕ್ಕೇರಿದ ಮೊದಲ ಭಾರತೀಯ ಬಾಡ್ಮಿಂಟನ್ ಆಟಗಾರ್ತಿ ಸೈನಾ ಅವರ ಪದಕದ ಕನಸು ಭಗ್ನಗೊಂಡಿದೆ.
22 ವರ್ಷದ ವಿಶ್ವದ 5ನೇ ಶ್ರೇಯಾಂಕಿತ ಸೈನಾ ಅವರು ವೆಂಬ್ಲಿ ಅರೀನಾದ ಕೋಟ್ ನಂ.1 ರಲ್ಲಿ ನಡೆದ ಸೆಮಿಫೈನಲ್ ನಲ್ಲಿ ಉತ್ತಮ ಆಟದ ನಡುವೆಯೂ ಚೀನಾದ ಪ್ರಬಲ ಎದುರಾಳಿ ಹೊಡೆತಕ್ಕೆ ತಕ್ಕ ಉತ್ತರ ನೀಡುವಲ್ಲಿ ವಿಫಲರಾದರು. ಲಂಡನ್ ಒಲಿಂಪಿಕ್ಸ್ 2012ರಲ್ಲಿ ಇದುವರೆವಿಗೂ ಒಂದು ಗೇಮ್ ಕೂಡಾ ಎದುರಾಳಿಗೆ ಬಿಟ್ಟು ಕೊಡದಿದ್ದ ಸೈನಾ ಸೆಮಿಫೈನಲ್ಸ್ ನಲ್ಲಿ ನೇರ ಸೆಟ್ ಗಳ ಅಂತರದಿಂದ ಸೋತಿರುವುದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಮೊದಲ ಗೇಮ್ ನಲ್ಲೇ ಮುಗ್ಗರಿಸಿದ ಸೈನಾಗೆ ಯಿಹಾನ್ ಭಾರಿ ಹೊಡೆತ ಕೊಟ್ಟರು. 13-6ರ ಮುನ್ನಡೆ ಪಡೆದ ಚೀನಾ ಆಟಗಾರ್ತಿ ಸುಲಭವಾಗಿ ಕೇವಲ 20 ನಿಮಿಷದಲ್ಲಿ ಮೊದಲ ಗೇಮ್ ಅನ್ನು 21-13ರಲ್ಲಿ ಗೆದ್ದರು.
ಎರಡನೇ ಗೇಮ್ ನಲ್ಲಿ ಹೋರಾಟದ ಮನೋಭಾವ ತೋರಿದ ಸೈನಾ 8-10ರಿಂದ ಹಿಂದೆ ಉಳಿದಿದ್ದರೂ ನಂತರ 11-10ರ ಮುನ್ನಡೆ ಪಡೆದರು. ಆದರೆ, ಸೈನಾ ಸರ್ವೀಸ್ ನಲ್ಲಿ ಅನಗತ್ಯ ತಪ್ಪುಗಳನ್ನು ಮಾಡುವ ಮೂಲಕ ಎದುರಾಳಿಗೆ ಸುಲಭವಾಗಿ ಅಂಕಗಳನ್ನು ನೀಡಿದರು. 24 ವರ್ಷದ ಚೀನಾ ಆಟಗಾರ್ತಿ 42 ನಿಮಿಷಗಳಲ್ಲಿ ಫೈನಲ್ ಗೇರುವ ಸೈನಾ ಆಸೆಗೆ ಭಂಗ ತಂದರು.
ವಿಶ್ವದ ಅಗ್ರ ಶ್ರೇಯಾಂಕಿತ ಯಿಹಾನ್ ವಿರುದ್ಧ ಇದುವರೆವಿಗೂ ಸೈನಾ ನೆಹ್ವಾಲ್ ಗೆದ್ದಿಲ್ಲ. 5 ಬಾರಿ ಪರಸ್ಪರ ಸಂಧಿಸಿದ್ದು, ಐದು ಬಾರಿ ಕೂಡಾ ಯಿಹಾನ್ ಗೆಲುವು ಸಾಧಿಸಿ ಹೂಂಕರಿಸಿದ್ದಾರೆ.
* ಮಲೇಶಿಯಾ ಓಪನ್ (14.1.2012) ಯಿಹಾನ್ ಗೆ ಗೆಲುವು 21-15, 21-16
* ಬಿಡಬ್ಲ್ಯೂ ಎಫ್ ವಿಶ್ವ ಸೂಪರ್ ಸೀರಿಸ್ (18.12.2011) ಯಿಹಾನ್ ಗೆ ಗೆಲುವು 18-21, 21-13, 21-13
* ಚೀನಾ ಮಾಸ್ಟರ್ಸ್ (16.9.2011) ಯಿಹಾನ್ ಗೆ ಗೆಲುವು 21-8, 21-12
* ಇಂಡೋನೇಶಿಯಾ ಓಪನ್ (26.06.2011) ಯಿಹಾನ್ ಗೆ ಗೆಲುವು 12-21, 23-21, 21-14
* ಥಾಮಸ್ ಉಬೇರ್ ಕಪ್ (12.5.2010) ಯಿಹಾನ್ ಗೆ ಗೆಲುವು 14-21, 21-11, 21-18
ಕಂಚು ಸಿಗಬಹುದೇ?: ಸೈನಾ ಕ್ವಾರ್ಟರ್ ಫೈನಲಿನಲ್ಲಿ ನೆದರ್ಲೆಂಡ್ ನ ಜಿ ಯೊ ವಿರುದ್ಧ 21-4, 21-16ರಿಂದ ಗೆಲುವು ಸಾಧಿಸಿದ್ದರು.ಡೆನ್ಮಾರ್ಕಿನ ಬಾನ್ (ವಿಶ್ವದ 7ನೇ ಶ್ರೇಯಾಂಕಿತ) ಅವರನ್ನು 21-15, 22-20 ಅಂತರದಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಆದರೆ, ಚೀನಾದ ಪ್ರಬಲ ಎದುರಾಳಿ ಯಿಹಾನ್ ವಿರುದ್ಧ ನೇರ ಸೆಟ್ ಗಳಲ್ಲಿ 21-13, 21-13 ಅಂತರದಲ್ಲಿ ಸೋತಿದ್ದಾರೆ.
ಹೀಗಾಗಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಚೀನಾ ದೇಶದ ಎದುರಾಳಿ ವಿರುದ್ಧವೇ ಅಡಬೇಕಾಗಿದೆ. ಯಿಹಾನ್ ಫೈನಲ್ ಪ್ರವೇಶಿಸಿದ್ದರೆ, ಉಳಿದ ಸೆಮಿಫೈನಲ್ ನಲ್ಲೂ ಚೀನಾದ ಆಟಗಾರ್ತಿಯರಿದ್ದಾರೆ. ಶನಿವಾರ (ಆ .4) ಕ್ಸಿನ್ ವಿರುದ್ಧ ಸೈನಾ ಸೆಣಸಲಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications