ಮಂಗಳೂರು ರಸ್ತೆಗಳ ಅಗಲೀಕರಣಕ್ಕೆ ಡಿಸಿ ಸೂಚನೆ

ಪಿ ಎಂ ರಾವ್ ರಸ್ತೆ ಹಾಗೂ ಶರವು ಮಹಾಗಣಪತಿ ದೇವಾಲಯದ ರಸ್ತೆಗಳ ಜೊತೆ ಯು ಪಿ ಮಲ್ಯ ರೋಡ್, ಗಣಪತಿ ಹೈಸ್ಕೂಲ್ ರಸ್ತೆ, ಹೋಟೆಲ್ ವಿಮಲೇಶ್ ರಸ್ತೆ, ಕೆ ಎಸ್ ರಾವ್ ರೋಡ್ ಹೀಗೆ ಮಂಗಳೂರು ಪಟ್ಟಣದ ಕೆಲವು ರಸ್ತೆಗಳನ್ನು ಪರಿಶೀಲಿಸಿದ ನಂತರ ಡಿಸಿ ಚೆನ್ನಪ್ಪ ಗೌಡ ಅವರು ಈ ರೀತಿ ನಿರ್ದೇಶನ ನೀಡಿದ್ದಾರೆ. ಅಷ್ಟೇ ಅಲ್ಲ, ಅದಕ್ಕಾಗಿ ಅಗತ್ಯವಿರುವ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ಪಾರದರ್ಶಕವಾಗಿ ಈ ಎಲ್ಲಾ ಬೆಳವಣಿಗೆಗಳು ನಡೆಯಬೇಕೆಂದು ಎಂಸಿಸಿ ಅಧಿಕಾರಿಗಳಿಗೆ ಒತ್ತಿಹೇಳಿರುವ ಚೆನ್ನಪ್ಪ ಗೌಡರು, ಈ ಅಭಿವೃದ್ಧಿ ಕಾಮಗಾರಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಯೋಜನೆ ಪ್ರಕಾರ, ಜಿಎಚ್ ಎಸ್ ರೋಡ್ ಈಗಿರುವ 25 ಅಡಿಗಳಿಂದ 50 ಅಡಿಗಳಿಗೆ ಹಾಗೂ ಶರವು ಮಹಾಗಣಪತಿ ರಸ್ತೆಯು 40 ಅಡಿಗಳಿಗೆ ಬದಲಾಗಲಿದೆ. ಈ ಕೆಲಸಕ್ಕಾಗಿ ಸುಮಾರು 31 ಭೂಮಾಲೀಕರು ತಮ್ಮ ಜಮೀನು ನೀಡಿ ಸಹಕರಿಸಬೇಕಿದೆ.
ನಗುರಿಯಿಂದ ಮಂಗಳೂರು ಜಂಕ್ಷನ್ ರೇಲ್ವೆ ಸ್ಟೇಷನ್ ರಸ್ತೆಯು 60 ಅಡಿಗೆ ವಿಸ್ತಾರವಾಗಲಿದ್ದು ಮಿಕ್ಕ ರಸ್ತೆಗಳೆಲ್ಲವೂ 40 ಅಡಿಗಳಿಗೆ ವಿಸ್ತಾರಗೊಳ್ಳಲಿವೆ. ಈ ಅಭಿವೃದ್ಧಿ ಕಾಮಗಾರಿಗಾಗಿ ಸುಮಾರು 11 ಕಟ್ಟಡಗಳು ಹಾಗೂ ಕಂಪೌಂಡ್ ಗೋಡೆಗಳು ಒತ್ತುವರಿ ಮಾಡಿಕೊಳ್ಳಲಾಗುವುದು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ಬಹಳಷ್ಟು ಎಂಸಿಸಿ ಅಧಿಕಾರಿಗಳು ಹಾಗು ಇಂಜಿನಿಯರುಗಳು ಅವರ ಈ ಹೇಳಿಕೆ ವೇಳೆ ಉಪಸ್ಥಿತರಿದ್ದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications