ಮಂಗಳೂರು ರಸ್ತೆಗಳ ಅಗಲೀಕರಣಕ್ಕೆ ಡಿಸಿ ಸೂಚನೆ

ಪಿ ಎಂ ರಾವ್ ರಸ್ತೆ ಹಾಗೂ ಶರವು ಮಹಾಗಣಪತಿ ದೇವಾಲಯದ ರಸ್ತೆಗಳ ಜೊತೆ ಯು ಪಿ ಮಲ್ಯ ರೋಡ್, ಗಣಪತಿ ಹೈಸ್ಕೂಲ್ ರಸ್ತೆ, ಹೋಟೆಲ್ ವಿಮಲೇಶ್ ರಸ್ತೆ, ಕೆ ಎಸ್ ರಾವ್ ರೋಡ್ ಹೀಗೆ ಮಂಗಳೂರು ಪಟ್ಟಣದ ಕೆಲವು ರಸ್ತೆಗಳನ್ನು ಪರಿಶೀಲಿಸಿದ ನಂತರ ಡಿಸಿ ಚೆನ್ನಪ್ಪ ಗೌಡ ಅವರು ಈ ರೀತಿ ನಿರ್ದೇಶನ ನೀಡಿದ್ದಾರೆ. ಅಷ್ಟೇ ಅಲ್ಲ, ಅದಕ್ಕಾಗಿ ಅಗತ್ಯವಿರುವ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಸೂಚಿಸಿದ್ದಾರೆ.
ಪಾರದರ್ಶಕವಾಗಿ ಈ ಎಲ್ಲಾ ಬೆಳವಣಿಗೆಗಳು ನಡೆಯಬೇಕೆಂದು ಎಂಸಿಸಿ ಅಧಿಕಾರಿಗಳಿಗೆ ಒತ್ತಿಹೇಳಿರುವ ಚೆನ್ನಪ್ಪ ಗೌಡರು, ಈ ಅಭಿವೃದ್ಧಿ ಕಾಮಗಾರಿಗೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಯೋಜನೆ ಪ್ರಕಾರ, ಜಿಎಚ್ ಎಸ್ ರೋಡ್ ಈಗಿರುವ 25 ಅಡಿಗಳಿಂದ 50 ಅಡಿಗಳಿಗೆ ಹಾಗೂ ಶರವು ಮಹಾಗಣಪತಿ ರಸ್ತೆಯು 40 ಅಡಿಗಳಿಗೆ ಬದಲಾಗಲಿದೆ. ಈ ಕೆಲಸಕ್ಕಾಗಿ ಸುಮಾರು 31 ಭೂಮಾಲೀಕರು ತಮ್ಮ ಜಮೀನು ನೀಡಿ ಸಹಕರಿಸಬೇಕಿದೆ.
ನಗುರಿಯಿಂದ ಮಂಗಳೂರು ಜಂಕ್ಷನ್ ರೇಲ್ವೆ ಸ್ಟೇಷನ್ ರಸ್ತೆಯು 60 ಅಡಿಗೆ ವಿಸ್ತಾರವಾಗಲಿದ್ದು ಮಿಕ್ಕ ರಸ್ತೆಗಳೆಲ್ಲವೂ 40 ಅಡಿಗಳಿಗೆ ವಿಸ್ತಾರಗೊಳ್ಳಲಿವೆ. ಈ ಅಭಿವೃದ್ಧಿ ಕಾಮಗಾರಿಗಾಗಿ ಸುಮಾರು 11 ಕಟ್ಟಡಗಳು ಹಾಗೂ ಕಂಪೌಂಡ್ ಗೋಡೆಗಳು ಒತ್ತುವರಿ ಮಾಡಿಕೊಳ್ಳಲಾಗುವುದು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ಬಹಳಷ್ಟು ಎಂಸಿಸಿ ಅಧಿಕಾರಿಗಳು ಹಾಗು ಇಂಜಿನಿಯರುಗಳು ಅವರ ಈ ಹೇಳಿಕೆ ವೇಳೆ ಉಪಸ್ಥಿತರಿದ್ದರು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications