Get Updates
Get notified of breaking news, exclusive insights, and must-see stories!

ಇಬ್ಬರನ್ನು ಕಾಪಾಡಿ ಸಮುದ್ರಪಾಲಾದ ಸಾಹಸಿ ಮೀನುಗಾರ

Brave fisherman washed away after rescuing two
ಮಂಗಳೂರು, ಜು. 21 : ಭಾರೀ ಕಡಲ ಅಲೆಗಳ ಹೊಡೆತಕ್ಕೆ ಸಿಲುಕಿಕೊಂಡ ಇಬ್ಬರನ್ನು ಉಳಿಸಲು ಹೋದ ಮೀನುಗಾರನೊಬ್ಬ ಅದೇ ಅಲೆಗಳ ಹೊಡೆತಕ್ಕೆ ಬಲಿಯಾದ ದಾರುಣ ಘಟನೆ ಉಲ್ಲಾಳದ ಕೋಟಪುರ ಕೋಡಿ ಕಡಲ ತೀರದಲ್ಲಿ ಶನಿವಾರ ನಡೆದಿದೆ.

ಕಡಲ ಪಾಲಾದ ಉಲ್ಲಾಳದ ಮೀನುಗಾರನನ್ನು ಮೈಕಲ್ ಡಿಸೋಜಾ ಎಂದು ಗುರುತಿಸಲಾಗಿದೆ. ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮೀನುಗಾರಿಕೆ ಮಾಡಲು ಕಡಲಿಗೆ ಇಳಿಯಬಾರದೆಂದು ಮೀನುಗಾರರಿಗೆ ಎಚ್ಚರಿಕೆ ನೀಡಿದ್ದರೂ ಸಾಹಸಕ್ಕೆ ಇಳಿದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.

ಶನಿವಾರ ಬೆಳಗಿನ ಜಾವ 6.30ಕ್ಕೆ ಮೀನು ಹಿಡಿಯಲೆಂದು ಕಡಲಿಗಿಳಿದ ಇಬ್ಬರು ಮೀನುಗಾರರಾದ ಜಯರಾಮ್ ಮತ್ತು ಡೇವಿಡ್ ಅವರಿದ್ದ ಬೋಟ್ ಅಲೆಗಳ ಹೊಡೆತಕ್ಕೆ ಸಿಲುಕಿ ಮುಗುಚಿದ್ದರಿಂದ ಮೀಂಗುಲಿಗರಿಬ್ಬರು ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಗಮನಿಸಿದ ಅದೇ ಸ್ಥಳದಲ್ಲಿದ್ದ ಮೈಕಲ್ ಅವರನ್ನು ಪಾರು ಮಾಡಲು ಕಡಲಿಗಿಳಿದಿದ್ದಾರೆ.

ಅಸಾಧ್ಯ ಸಾಹಸ ಪ್ರದರ್ಶಿಸಿದ ಮೈಕಲ್ ಡಿಸೋಜಾ ಅವರಿಬ್ಬರನ್ನು ಪಾರು ಮಾಡುವಲ್ಲಿ ಯಶಸ್ವಿಯಾದರು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಸ್ನೇಹಿತರಿಬ್ಬರನ್ನು ಪಾರು ಮಾಡಿದ ಕೆಲ ಕ್ಷಣಗಳಲ್ಲಿಯೇ ಬಲವಾದ ಅಲೆಗಳ ಹೊಡೆತಕ್ಕಿ ಸಿಕ್ಕು ಮೈಕಲ್ ಡಿಸೋಜಾ ಅವರು ಸಮುದ್ರದಲ್ಲಿ ಮುಳುಗಿದರು.

ಕೂಡಲೆ ಸಮುದ್ರ ತೀರಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿಗಳು ಸಾಕಷ್ಟು ಹುಡುಕಾಟ ನಡೆಸಿದರೂ ಮೈಕಲ್ ಡಿಸೋಜಾ ಪತ್ತೆಯಾಗಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+