ನಿತ್ಯಾನಂದ ಪ್ರಭುಗೆ ಜು 30 ವಿಕ್ಟೋರಿಯಾದಲ್ಲಿ ಟೆಸ್ಟ್

ತನ್ನ ಷಂಡತನವನ್ನು ಬಹಿರಂಗವಾಗಿ ಒಪ್ಪಿಕೊಂಡ ನಿತ್ಯಾನಂದ ಮಹಾಸ್ವಾಮಿಗಳಿಗೆ ಸಿಐಡಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಗಾಗು ಎಂದು ತಾಕೀತು ಮಾಡುತ್ತಲೇ ಇದ್ದರು. ಆದರೆ ಅವಯ್ಯ ಅದೆಲ್ಲ ಆಗಾಕ್ಕಿಲ್ಲ ಎಂದು ಕೈಯೆತ್ತುತ್ತಿದ್ದ.
ಇತ್ತೀಚೆಗೆ ನಿತ್ಯಾನಂದ ಮಹಾಪ್ರಭುವಿನ ನಸೀಬ್ ಕೆಟ್ಟು ಒಂದಾದ ಮೇಲೊಂದರಂತೆ ವಿವಾದಗಳನ್ನು ಮೈಮೇಲೆ ಹಾಕಿಕೊಂಡಾಗ, ಎಚ್ಚೆತ್ತ ಪೊಲೀಸರು ನೋಡಿ ನಿತ್ಯಾನಂದ ಟೆಸ್ಟ್ ಗೆ ಬರೋಲ್ಲ ಅಂತಿದ್ದಾನೆ ಎಂದು ಹೈಕೋರ್ಟ್ ಮೊರೆಹೋಗಿದ್ದರು. ಇದನ್ನು ಆಲಿಸಿದ ಹೈಕೋರ್ಟ್ 'ಮೊದಲು ಕರಕೊಂಡು ಹೋಗಿ ಟೆಸ್ಟ್ ಮಾಡಿಸಿ' ಎಂದು ಝಾಡಿಸಿತು. ಹಾಗಾಗಿ ಸ್ವಾಮಿಗಳಿಗೆ ಸಿಐಡಿ ಪೊಲೀಸರು ವೈದ್ಯಕೀಯ ಪರೀಕ್ಷೆ ಮಾಡಿಸ್ತಾರಂತೆ.
ಪ್ರಧಾನವಾಗಿ ತನಗೆ ಸಂಭೋಗದಲ್ಲಿ ತೊಡಗಲು ಆಗದು ಎಂಬುದು ನಿತ್ಯಾನಂದನ ಅಳಲು. ಮೊದಲು ಅದನ್ನೇ ಟೆಸ್ಟ್ ಮಾಡಲಾಗುವುದು. ಕುತೂಹಲದ ಸಂಗತಿಯೆಂದರೆ ವೈದ್ಯರು ಇಲ್ಲಿ ಸರ್ವಸ್ವತಂತ್ರರು. ನಿತ್ಯಾನಂದನ ಮೇಲೆ ಯಾವ ಟೆಸ್ಟ್ ಬೇಕಾದರೂ ಮಾಡಬಹುದು. ಗಮನಾರ್ಹವೆಂದರೆ ಪರೀಕ್ಷೆಗಳು ಸೂಕ್ಷ್ಮವಾಗಿರುವುದರಿಂದ ವೈದ್ಯರ ತಂಡದಲ್ಲಿ ಯಾವೆಲ್ಲ ವೈದ್ಯರಿದ್ದಾರೆ ಎಂಬುದನ್ನು ಸಿಐಡಿ ಬಹಿರಂಗಪಡಿಸಿಲ್ಲ.
ಟೆಸ್ಟ್ ಸಂಬಂಧ ಈಗಾಗಲೇ ಬಿಡದಿ ಆಶ್ರಮಕ್ಕೆ ನೋಟಿಸ್ ತಲುಪಿದೆ. 'ಜುಲೈ 30ರಂದು ಸಿಐಡಿ ಮುಖ್ಯಕಚೇರಿಗೆ ಬಂದುಬಿಡು. ಅಲ್ಲಿಂದ ಹತ್ತಿರದಲ್ಲೇ ಇರುವ ವಿಕ್ಟೋರಿಯಾ ಆಸ್ಪತ್ರೆಗೆ ಬಿಗಿ ಭದ್ರತೆಯಲ್ಲಿ ನಾವೇ ಕರೆದುಕೊಂಡು ಹೋಗುತ್ತೇವೆ' ಎಂದು ಸಿಐಡಿ ಅಧಿಕಾರಿಗಳು ನಿತ್ಯಾನಂದನಿಗೆ ಸೂಚಿಸಿದ್ದಾರೆ. ಮಹಾಸ್ವಾಮಿಗೆ ಅನ್ಯ ಮಾರ್ಗವಿಲ್ಲ. ಅಂದು ರಾಯನ್ ಸರ್ಕಲ್ಲಿನಲ್ಲಿರುವ ಸಿಐಡಿ ಮುಖ್ಯ ಕಚೇರಿಯತ್ತ ಬರಲೇಬೇಕು.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications