ಇದು ಬೆತ್ತಲೆ ಚಿತ್ರವಲ್ಲ, ಬೆತ್ತಲೆ ಎದೆಗಾರ್ತಿ ರಚಿಸಿದ ಚಿತ್ರ

ದೊಡ್ಡ ಕಾನ್ವಸ್ ಮೇಲೆ ಚಿತ್ರ ಬರೆಯಲು ಬಂದ ಮಹಿಳಾ ಸ್ಪರ್ಧಿ ಮಾಡಿರುವ ಕೃತ್ಯದಿಂದ ಥೈಲೆಂಡ್ ತಲೆ ತಗ್ಗಿಸಿದೆ. ಸಂಸ್ಕೃತಿ ಇಲಾಖೆ ಸಚಿವಾಲಯ ಮಹಿಳಾ ಸ್ಪರ್ಧಿಯ ಬೆತ್ತಲೆ ಚಿತ್ರ ರಚನೆ ಬಗ್ಗೆ ಸ್ಪಷ್ಟಣೆ ಕೋರಿ 'Thailand has Got Talent'ರಿಯಾಲಿಟಿ ಶೋ ನಿರ್ಮಾಪಕರಿಗೆ ನೋಟಿಸ್ ನೀಡಿದ್ದಾರೆ.
ಸಹಜತೆ,ಸಭ್ಯತೆ, ಕ್ರಿಯಾಶೀಲತೆಯ ಎಲ್ಲೆ ಮೀರಿದ ಕೃತ್ಯ ಇದಾಗಿದ್ದು, ಬೆತ್ತಲೆ ಸಂಸ್ಕೃತಿ ನಮ್ಮ ದೇಶಕ್ಕೆ ತಟ್ಟಲು ಬಿಡುವುದಿಲ್ಲ ಎಂದು ಸಂಸ್ಕೃತಿ ಸಚಿವ ಸುಕುಮೋಲ್ ಖುನಪೋಮ್ ಹೇಳಿದ್ದಾರೆ.
ಲೈವ್ ಕಾರ್ಯಕ್ರಮವೊಂದರಲ್ಲಿ ಈ ರೀತಿ ಘಟನೆ ನಡೆದಿರುವುದು ಇದೇ ಮೊದಲು. ಆ ಮಹಿಳಾ ಸ್ಪರ್ಧಿ ಏಕೆ ಹೀಗೆ ಮಾಡಿದಳೋ ಗೊತ್ತಿಲ್ಲ. ಮೊದಲೇ ಸೂಚನೆ ಸಿಕ್ಕಿದ್ದರೆ ಎಡಿಟ್ ಮಾಡಿ ಪ್ರಸಾರ ಮಾಡಬಹುದಾಗಿತ್ತು ಎಂದು ಕಾರ್ಯಕ್ರಮದ ನಿರ್ವಾಹಕರು ಹೇಳಿದ್ದಾರೆ.
ಏನು ಮಾಡಿದಳು ಗೋತ್ತಾ?: ಟ್ಯಾಲೆಂಟ್ ಶೋ ಗೆ ಎಲ್ಲರಂತೆ ಸ್ಪರ್ಧಿಯಾಗಿ ಬಂದ ಮಹಿಳಾ ಸ್ಪರ್ಧಿ ದೊಗಳೆ ಅಂಗಿ ಧರಿಸಿ, ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದಳು. ದೊಡ್ಡದಾದ ಪೇಂಟ್ ಬ್ರಷ್ ಆಕೆಗೆ ನೀಡಲಾಯಿತು. ಮೂವರು ಜಡ್ಜ್ ಗಳಿಗೆ ಬೆನ್ನು ತೋರಿಸುತ್ತಾ ದೊಡ್ಡ ಕ್ಯಾನ್ವಸ್ ಮೇಲೆ ಏನೋ ಬಣ್ಣ ಬಳಿದು ಬೊಂಬೆ ರೀತಿ ಏನನ್ನೂ ಚಿತ್ರಿಸತೊಡಗಿದಳು.
ನಂತರ ಕುಕ್ಕರಗಾಲಲ್ಲಿ ಕುಳಿದು ತನ್ನ ಅಂಗಿ ಗುಂಡಿಗಳನ್ನು ಒಂದೊಂದಾಗಿ ಬಿಚ್ಚುತ್ತಾ, ಪೋಲ್ ಡ್ಯಾನ್ಸರ್ ಮಾದರಿಯಲ್ಲಿ ನರ್ತಿಸಿ, ನುಲಿಯ ತೊಡಗಿದಳು. ಆಕೆ ಏನು ಮಾಡುತ್ತಿದ್ದಾಳೆ ಎಂಬು ಜಡ್ಜ್ ಗಳಿಗೆ ತಿಳಿಯುವಷ್ಟರಲ್ಲಿ ಅಂಗಿಯನ್ನು ಕಿತ್ತು ಎಸೆದಿದ್ದಳು.
ಮಹಿಳಾ ಜಡ್ಜ್ ಒಬ್ಬರು ಸ್ಪರ್ಧೆಗೆ ಅನರ್ಹ ಎಂದು ರೆಡ್ ಸಿಗ್ನಲ್ ಬಟನ್ ಒತ್ತುವಷ್ಟರಲ್ಲಿ ಮಹಿಳೆ ಬ್ರಾ ಕಿತ್ತೊಗೆದಿದ್ದಳು. ಬೆತ್ತಲೆ ಎದೆಯ ಮೇಲೆ ಅಲ್ಲಿಂದ ವಿವಿಧ ಬಣ್ಣದ ಪೇಂಟ್ ಗಳನ್ನು ಸುರಿದು ಕೊಳ್ಳಲಾರಂಭಿಸಿದಳು.
ನಂತರ ವರ್ಣಮಯವಾದ ತನ್ನ ಎದೆ ಭಾಗ ಕಾನ್ವಸ್ ಮೇಲೆ ಉಜ್ಜತೊಡಗಿದಳು. ಕೆಲ ನಿಮಿಷದ ನಂತರ ಜಡ್ಜ್ ಗಳ ಸಮ್ಮುಖದಲ್ಲಿ ನಿಂತು ಹಲ್ಲುಕಿರಿಯ ತೊಡಗಿದಳು.
23 ವರ್ಷದ ಈ ಸ್ಪರ್ಧಿಯ ಕೃತ್ಯವನ್ನು ಜಡ್ಜ್ ಗಳು ಖಂಡಿಸಿ, ದೇಶದ ಸಂಸ್ಕೃತಿ ನಾಶವಾಗಿಬಿಟ್ಟಿದೆ ಎಂದರು. ಆದರೆ, ಅಷ್ಟರಲ್ಲಿ ಅನರ್ಥವಾಗಿಬಿಟ್ಟಿತ್ತು. ಮಹಿಳಾ ಸ್ಪರ್ಧಿಯ bare act ವಿಡಿಯೋ ಯ್ಯೂಟ್ಯೂಬ್ ಸೇರಿ ಜನಪ್ರಿಯತೆ ಗಳಿಸತೊಡಗಿತ್ತು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications