ಬೀದಿನಾಯಿಗೆ ಹಾಲುಣಿಸಿದ ಯುವತಿಯ ಗ್ಯಾಂಗ್ ರೇಪ್

ಇಷ್ಟಕ್ಕೂ ರೋಶ್ನಿ ಮಜುಂದಾರ್ ಮಾಡಿದ ಮಹಾಪರಾಧವಾದರೂ ಏನಪಾ ಅಂದರೆ... ಪ್ರಾಣಿ ದಯಾ ಸಂಘದ ಕಾರ್ಯಕರ್ತೆ ರೋಶ್ನಿ ಅವರು ತುರ್ಭೆ ಪೊಲೀಸ್ ಠಾಣೆ ವ್ಯಾಪ್ತಿಯ ಸನಪದ ಸೆಕ್ಟರ್ 5ರಲ್ಲಿ ಕುಂಟುತ್ತಾ, ನರಳುತ್ತಿದ್ದ ಬೀದಿ ನಾಯಿಗೆ ಹಾಲುಣಿಸಿ, ಆರೈಕೆ ಮಾಡುತ್ತಿದ್ದರು. ಇದನ್ನು ಕಂಡ ದುರುಳರಿಗೆ ಏನನ್ನಿಸಿತೋ... ಮಾಡಬಾರದ್ದನ್ನೇ ಮಾಡಿಬಿಟ್ಟರು.
ಅಸಹಾಯಕ ಶ್ವಾನಕ್ಕೆ ನೆರವಾದ ರೋಶ್ನಿ ಮಾಡಿದ ಕಾರ್ಯದ ಬಗ್ಗೆ ಮೆಚ್ಚುಗೆ ಸೂಚಿಸದೆ ಬೀದಿ ಬಸವನ ಹಾಗೆ ಆಕೆಯ ಮೇಲೆ ಮುಗಿಬಿದ್ದಿದ್ದಾರೆ. 'ಸೋಮವಾರ ರಾತ್ರಿ 9.45ರಲ್ಲಿ ಕಪ್ಪು-ಬಿಳಿ ನಾಯಿಗೆ ಹಾಲುಣಿಸುತ್ತಿದ್ದೆ. ಆಗ ಆರು ಮಂದಿ ಯುವಕರು ಅಲ್ಲಿಗೆ ಬಂದು ಕೆಟ್ಟಕೆಟ್ಟದಾಗಿ ಮಾತನಾಡತೊಡಗಿದರು.
ಏನೇನೋ ಸಂಜ್ಞೆಗಳನ್ನೂ ಮಾಡತೊಡಗಿದರು. ನನ್ನ ಕುಟಂಬದವರನ್ನೂ ಹೀಯಾಳಿಸತೊಡಗಿದರು' ಎಂದು ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಇಂಟರ್ನ್ ಆಗಿ ವ್ಯಾಸಂಗ ಮಾಡುತ್ತಿರುವ ರೋಶ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
ಆ ಅಪವೇಳೆಯಲ್ಲಿ ದುರುಳರು ನನ್ನ ಬಗ್ಗೆ ಸಲ್ಲದ ಕಾಮೆಂಟ್ಸ್ ಮಾಡುತ್ತಿದ್ದಾಗ ನನ್ನ ಕಸಿನ್ ನನ್ನ ರಕ್ಷಣೆಗೆ ಕೂಗಿದೆ. ಕಸಿನ್ ಸಿಮಿತ್ ಸ್ಥಳಕ್ಕೆ ಬಂದವನೇ ಆ ಗ್ಯಾಂಗಿನವರ ಬಳಿ ತೆರಳಿ, ವಿಷಯ ಏನೆಂದು ವಿಚಾರಿಸತೊಡಗಿದ. ಆಗ ಪುಂಡರ ಗ್ಯಾಂಗ್ ನಮ್ಮಿಬ್ಬರ ಮೇಲೂ ಅಟ್ಯಾಕ್ ಮಾಡಿತು.
'ಸ್ಥಳೀಯರೇ ಹೆಚ್ಚಾಗಿದ್ದ ಸುಮಾರು ನೂರು ಮಂದಿ ಸ್ಥಳದಲ್ಲಿ ಜಮಾಯಿಸತೊಡಗಿದರು. ಆದರೆ ಆ ಪಾಪಿಗಳು ರೋಶ್ನಿ ಮೇಲೆ ಅತ್ಯಾಚಾರ ನಡೆಸಿ, ನನ್ನನ್ನು ಹಿಂಸಿಸುತ್ತಿದ್ದರೂ ಸುಮ್ಮನೆ ನೋಡುತ್ತಾ ನಿಂತುಬಿಟ್ಟರು. ಸುಮಾರು ಹೊತ್ತು ಆದ ಮೇಲೆ ಆ ಬೀದಿ ಗೂಂಡಾಗಳು ಸ್ಥಳದಿಂದ ಪರಾರಿಯಾದರು' ಎಂದು ಕಸಿನ್ ಸಿಮಿತ್ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಮೂವರು ಅನಾಮಿಕರ ವಿರುದ್ಧ ಅತ್ಯಾಚಾರ ಆರೋಪ ಮತ್ತು ಇತರೆ ಮೂವರು ಅವರಿಗೆ ಸಹಕರಿಸಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications