ರುಪಾಯಿ ಚಿಹ್ನೆಗೆ ವಾಸ್ತು ದೋಷ? ಮೈ ಗಾಡ್!

ಇದಕ್ಕೆ ಮೂಲಕ ಕಾರಣ ಇತ್ತೀಚೆಗೆ ರೂಪಿಸಲಾಗಿರುವ ರುಪಾಯಿಯ ಹೊಸ ಚಿಹ್ನೆಯ ವಾಸ್ತು ದೋಷ ಅಂತಾರೆ ಗೌಹಾತಿಯ ವಾಸ್ತು ಶಾಸ್ತ್ರಜ್ಞ. 50 ವರ್ಷದ ವಾಸ್ತು ಶಾಸ್ತ್ರಜ್ಞ ರಾಜಕುಮಾರ್ ಜಾಂಝರಿ ಅವರ ಪ್ರಕಾರ, ರುಪಾಯಿಯ ಹೊಸ ಚಿಹ್ನೆ ಸರಿಯಿಲ್ಲ. ಆಂಗ್ಲ ಆರ್ ಅಕ್ಷರದ ಕತ್ತನ್ನು ಸೀಳಿದ್ದರಿಂದ ರುಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ತರ್ಕಿಸಿದ್ದಾರೆ.
ರುಪಾಯಿಯ ಈ ಹೊಸ ಚಿಹ್ನೆಯನ್ನು ರೂಪಿಸಿದವರು ಐಐಟಿ-ಗೌಹಾತಿಯ ವಿನ್ಯಾಸ ಇಲಾಖೆಯಲ್ಲಿ ಸಹಾಯಕ ಪ್ರೊಫೆಸರಾಗಿರುವ ಧರ್ಮಲಿಂಗಂ ಉದಯ ಕುಮಾರ್. 2010ರಲ್ಲಿ ಹುಟ್ಟಿದ, ದೇವನಾಗರಿ ಲಿಪಿಯ 'ರ' ಮತ್ತು ಆಂಗ್ಲ ಅಕ್ಷರ 'R' ಸಂಗಮದ ಈ ಚಿಹ್ನೆ 10, 20, 50 100, 500 ಮತ್ತು 1000 ರು ಮೌಲ್ಯದ ನೋಟುಗಳ ಮೇಲೆ ರಾರಾಜಿಸುತ್ತಿದೆ. ಮತ್ತು ಕತ್ತಿನ ಜಾಗದಲ್ಲಿ ಒಂದು ಅಡ್ಡಗೆರೆಯನ್ನು ಎಳೆಯಲಾಗಿದೆ.
"ಅಂದಿನಿಂದ ಇಂದಿನವರೆಗೆ ರುಪಾಯಿ ತನ್ನ ಮೌಲ್ಯವನ್ನು ಶೇ.23ರಷ್ಟು ಕಳೆದುಕೊಂಡಿದೆ. ಅಂದು ಡಾಲರ್ ಎದುರಿಗೆ 48 ಇದ್ದ ರು. ಬೆಲೆ ಇಂದು ಡಾಲರ್ಗೆ ಪ್ರತಿಯಾಗಿ 56 ರು. ತಲುಪಿದೆ. ಇದರ ಬಗ್ಗೆ ಕಳೆದ ವರ್ಷದ ಡಿಸೆಂಬರ್ನಲ್ಲಿ ಪತ್ರ ಬರೆದಿದ್ದೆ. ಅದೇ ಪತ್ರದ ಪ್ರತಿಯನ್ನು ವಿತ್ತ ಸಚಿವ ಮತ್ತು ರಿಸರ್ವ್ ಬ್ಯಾಂಕ್ ಇಂಡಿಯಾಗೂ ಕಳುಹಿಸಲಾಗಿತ್ತು" ಎಂದು ರಾಜಕುಮಾರ್ ಅವರು ನುಡಿದಿದ್ದಾರೆ.
"ರುಪಾಯಿಯ ಹೊಸ ಚಿಹ್ನೆ ರೂಪ ತಾಳುವ ಮೊದಲು 2009ರಲ್ಲಿ ಭಾರತ ಆರ್ಥಿಕ ಹೊಡೆತವನ್ನು ಸಮರ್ಥವಾಗಿ ಎದುರಿಸಿತ್ತು. ಚಿಹ್ನೆ ರೂಪಿಸಿದ ನಂತರರ ಮತ್ತೆ ಆರ್ಥಿಕ ಬಿಕ್ಕಟ್ಟು ಎದುರಾಗುವ ಅಪಾಯ ಬಂದಿದೆ. ರುಪಾಯಿ ಚಿಹ್ನೆಯ ವಾಸ್ತವನ್ನು ಬದಲಿಸುವುದೇ ಉಳಿದಿರುವ ಏಕೈಕ ಮಾರ್ಗ" ಎಂದು ವಾದವನ್ನು ರಾಜಕುಮಾರ್ ಮುಂದಿಟ್ಟಿದ್ದಾರೆ. ಈ ವಾದದ ಬಗ್ಗೆ ಪ್ರತಿಕ್ರಿಯಿಸಿರುವ ಧರ್ಮಲಿಂಗ್ ಉದಯ ಕುಮಾರ್ ಅವರು, ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದಿದ್ದಾರೆ.
ಈ ವಾದವನ್ನು ನೀವು ನಂಬುತ್ತೀರಾ? ರಾಜಕುಮಾರ್ ಜಾಂಝರಿ ಅವರ ವಾದದಲ್ಲಿ ಹುರುಳಿದೆಯಾ? ರುಪಾಯಿ ಚಿಹ್ನೆ ವಿನ್ಯಾಸ ಬದಲಿಸಿದರೆ ಭಾರತದ ಆರ್ಥಿಕ ಸ್ಥಿತಿ ಸುಧಾರಿಸುವುದಾ?
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications