ಲಕ್ಷ್ಮಿ ಕೊಟ್ಟ ಬಿಜೆಪಿ ಕೃಷ್ಣನ ಲೆಕ್ಕ ಸಿಬಿಐಗೆ ನೀಡಿ

ಇದರ ಬಗ್ಗೆ ರಾಜ್ಯದಲ್ಲಿ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. 22 ಶಾಸಕರಿಗೆ ತಲಾ ಐದು ಕೋಟಿ ರು, ಬಿಬಿಎಂಪಿ ಚುನಾವಣೆಗೆ 60 ಕೋಟಿ ರೂಗಳನ್ನು ಬಿಜೆಪಿ ತನ್ನ ಬೊಕ್ಕಸದಿಂದ ಬಿಡುಗಡೆ ಮಾಡಿತ್ತು ಎಂದು ಲಕ್ಷ್ಮಿ ಹೇಳಿದ್ದರು.
ಆದರೆ, ಈ ಬಗ್ಗೆ ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂಪಿ ನಾಡಗೌಡ ಅವರು ಮಾತ್ರ ಕೂಗಾಡಿ, ರಾಜ್ಯ ಬಿಜೆಪಿಯಲ್ಲಿ ನೂರಾರು ಕೋಟಿ ರು. ಕಪ್ಪು ಹಣ ಹರಿದಾಡಿರುವುದು, ಗಣಿ ಹಗರಣ ಮತ್ತು ಡಿನೋಟಿಫಿಕೇಷನ್ ದಿಂದ ಬಂದ ಹಣವನ್ನು ಚುನಾವಣೆ, ಆಪರೇಷನ್ ಕಮಲಕ್ಕೆ ಸದ್ವಿನಿಯೋಗಿಸಿರುವುದು ಸ್ಪಷ್ಟವಾಗುತ್ತದೆ, ಈ ಲೆಕ್ಕಾಚಾರಗಳನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿದ್ದರು.
ಬಿಜೆಪಿಯ ರಾಜ್ಯ ಹಾಗೂ ಕೇಂದ್ರ ನಾಯಕರನ್ನೂ ಸಿಬಿಐ ತನಿಖೆಗೊಳಪಡಿಸಬೇಕು ನಾಡಗೌಡ ಆಗ್ರಹಪಡಿಸಿದ್ದರು. ಅಷ್ಟು ಬಿಟ್ಟರೆ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿಕೆಗೆ ರಾಜಕೀಯ ಮಾರುಕಟ್ಟೆಯಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿರಲಿಲ್ಲ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಗೆ 25 ಕೋಟಿ ರು. ಹಾಗೂ ರಾಜ್ಯ ಬಿಜೆಪಿ ಕಚೇರಿ ನಿರ್ಮಾಣಕ್ಕೆ 10 ಕೋಟಿ ರು ಬಳಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತರಾಗಿರುವ ಲಕ್ಷ್ಮೀನಾರಾಯಣ್ ಅವರು ಖಾಸಗಿ ವಾಹಿನಿಗೆ ನೀಡಿದ್ದ ಹೇಳಿಕೆ ಕೆಲಕಾಲ ಸಂಚಲನ ಉಂಟುಮಾಡಿತ್ತು.












Click it and Unblock the Notifications