ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಕ್ರಮ ಆಸ್ತಿ ವೀರ' ಜಗನ್ ಗೆ ಕೋರ್ಟ್ ಬುಲಾವ್

By Srinath
|
Google Oneindia Kannada News

hyderabad-cbi-principal-judge-summons-jagan
ಹೈದರಾಬಾದ್, ಮೇ 8: ರಾಜಕೀಯವಾಗಿ ಸೂಕ್ಷ್ಮವಾಗಿರುವ ಹಿನ್ನೆಲೆಯಲ್ಲಿ ಪ್ರಭಾವಿ ಜನನಾಯಕ, ಕಡಪ ಸಂಸದ ವೈ.ಎಸ್. ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಲು ಸಿಬಿಐ ಹಿಂದು ಮುಂದು ನೋಡುತ್ತಿದೆ. ಇದನ್ನು ಮನಗಂಡು ಸ್ವತಃ ನ್ಯಾಯಾಲಯವೇ ಸಿಬಿಐಅನ್ನು ತರಾಟೆಗೆ ತೆಗೆದುಕೊಂಡಿದೆ. ಆದರೆ ಈ ಬಾರಿ ಜಗನ್ ಬಂಧನಕ್ಕೆ ಮಹೂರ್ತ ನಿಕ್ಕಿಯಾದಂತಿದೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ವಿಚಾರಣೆ ಜರುಗುತ್ತಿದ್ದು, ತನ್ನಿಮಿತ್ತ ಮೇ 28 ರಂದು ಕೋರ್ಟ್ ಹಾಜರಾಗಿ ಎಂದು ಸಿವಿಐ ಪ್ರಧಾನ ವಿಶೇಷ ಜಡ್ಜ್ ಎ ಪುಲ್ಲಯ್ಯ ಅವರು ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಸುಪುತ್ರ ಜಗನ್‌ ಹಾಗೂ ಇತರೆ 12 ಮಂದಿಗೆ ಸಮನ್ಸ್ ಜಾರಿ ಮಾಡಿದ್ದಾರೆ.

ಮಾರ್ಚ್ 31ರಂದು ಸಿಬಿಐ ದಾಖಲಿಸಿದ ಮೊದಲ ಆರೋಪಪಟ್ಟಿಯ ಅನುಸಾರ ಕೋರ್ಟ್ ಈ ತೀರ್ಮಾನಕ್ಕೆ ಬಂದಿದೆ. ಈ ಮಧ್ಯೆ, ಜಗನ್ ರನ್ನು A1 ಎಂದು ಗುರುತಿಸಿ ಸಿಬಿಐ ಮೂರನೇ ಆರೋಪಪಟ್ಟಿಯನ್ನೂ ದಾಖಲಿಸಿದೆ.

ಒಂದು ವಾರದ ಹಿಂದೆಯೇ ಸಮನ್ಸ್ ಜಾರಿಯಾಗಬೇಕಿತ್ತಾದರೂ ನಿನ್ನೆ ಸೋಮವಾರ ಸ್ವಯಂ ಕೇಸ್ ಕೈಗೆತ್ತಿಕೊಂಡ ಜಡ್ಜ್ ಪುಲ್ಲಯ್ಯ ಅವರು ಜಗನ್ ಗೆ ಸಮನ್ಸ್ ನೀಡಿ, ರಜೆ ಮೇಲೆ ಹೋದ ಕಾರಣ ಜಗನ್ ಗೆ 20 ದಿನಗಳ ಕಾಲಾವಕಾಶ ನೀಡಿದ್ದಾರೆ. ಜಗನ್ ಆಡಿಟರ್ ವಿಜಯ್ ಸಾಯಿರೆಡ್ಡಿ, ಐಎಎಸ್ ಅಧಿಕಾರಿ ಬಿಪಿ ಆಚಾರ್ಯ, ಹೆಟಿತೊ ಡೈರೆಕ್ಟರ್ ಎಂ ಶ್ರೀನಿವಾಸ ರೆಡ್ಡಿ, ಅರಬಿಂದೋ ಸಂಸ್ಥೆಯ ನಿತ್ಯಾನಂದ ರೆಡ್ಡಿ ಸೇರಿದಂತೆ ಒಟ್ಟು 13 ಮಂದಿಗೆ ಸಮನ್ಸ್ ಜಾರಿಯಾಗಿದೆ.

ಅಂದಿನ ಬೆಲೆಯಲ್ಲಿ ಸುಮಾರು 18 ಕೋಟಿ ರುಪಾಯಿ ಮೌಲ್ಯದ 75 ಎಕರೆ ಜಮೀನನ್ನು ಸುಮಾರು 5 ಕೋಟಿ ರು. ಗೆ ವಿಶೇಷ ವಿತ್ತ ವಲಯಕ್ಕೆಂದು ಐಎಎಸ್ ಅಧಿಕಾರಿ ಬಿಪಿ ಆಚಾರ್ಯ 'ಮಧ್ಯಸ್ಥಿಕೆಯಲ್ಲಿ' ಜಗನ್ ಕಂಪನಿಗೆ ಪರೋಕ್ಷವಾಗಿ ಸಂದಾಯವಾಗಿದೆ ಎಂಬುದು ಮೊದಲ ಆರೋಪಪಟ್ಟಿಯಲ್ಲಿನ ದೂರು.

English summary
CBI special judge issued summons to YSR Congress chief Jagan Mohan Reddy and 12 others asking them to appear before the court on May 28. The court took cognisance of the CBI’s first chargesheet in the case that was filed on March 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X