ಮಂಗಳಮುಖಿಯರತ್ತ ಶೋಭಾ ನೆರವಿನ ಹಸ್ತ

shobha-promises-again-eunuchs-survey-ration-cards
ಬೆಂಗಳೂರು, ಮೇ 4: ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಮಂಗಳಮುಖಿಯರತ್ತ ಮುಖ ಮಾಡಿದ್ದಾರೆ. ಸಾಮಾಜಿಕವಾಗಿ ಹಿಂದುಳಿದ ಮಂಗಳಮುಖಿಯರಿಗೆ ಪಡಿತರ ಚೀಟಿ ವಿತರಿಸುವ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದೆಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಶೋಭಾ ಭರವಸೆ ನೀಡಿದ್ದಾರೆ. ದಾಖಲಾರ್ಹವೆಂದರೆ 2 ವರ್ಷಗಳ ಹಿಂದೆಯೂ ಶೋಭಾ ಮೇಡಂ ಇದೇ ಭರವಸೆಯನ್ನು ನೀಡಿದ್ದರು.

ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿದ ಮಾತನಾಡಿದ ಸಚಿವೆ ಶೋಭಾ, ಪಡಿತರ ಚೀಟಿಗಾಗಿ ಮಂಗಳಮುಖಿಯರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಕೆಲವು ಅರ್ಜಿಗಳು ಬಂದಿವೆ. ಅವುಗಳನ್ನು ಪರಿಗಣಿಸಿ ಅರ್ಹರಿಗೆ ಪರಿತರ ಚೀಟಿ ವಿತರಿಸಲಾಗುವುದು ಎಂದು ತಿಳಿಸಿದರು.

ಮಂಗಳಮುಖಿಯರ ಸಮೀಕ್ಷೆ: ದನ-ಕರು, ಜಾನುವಾರುಗಳ ಬಗ್ಗೆ ಸಮೀಕ್ಷೆ ನಡೆಯುತ್ತದೆ. ಆದರೆ ಮಂಗಳಮುಖಿಯರ ಬಗ್ಗೆ ಇದುವರೆಗೂ ಯಾರೂ ಸಮೀಕ್ಷೆ ನಡೆಸಿಲ್ಲ. ಪಡಿತರ ಚೀಟಿ ವಿತರಣೆಗೆ ಮುನ್ನ ಅಂತಹ ಸಮೀಕ್ಷೆ ಅಗತ್ಯವಾಗಿ ಆಗಬೇಕಿದೆ. ಆದ್ದರಿಂದ ಶೀಘ್ರವೇ ಮಂಗಳಮುಖಿಯರ ಸಮೀಕ್ಷೆ ಕಾರ್ಯ ಆರಂಭಿಸಲಾಗುವುದು ಎಂದು ಶೋಭಾ ಹೇಳಿದರು.

ಮಂಗಳಮುಖಿಯರಿಗೆ ಪಡಿತ ಚೀಟಿ ವಿತರಣೆ ಸಂಬಂಧ ಈಗಾಗಲೇ ಕೆಲ ಸಂಘಸಮಸ್ಥೆಗಳೊಂದಿಗೆ ಚಚರ್ಚೆ ನಡೆಸಲಾಗಿದೆ. ಮಂಗಳಮುಖಿಯರಿಗೆ ಯಾವುದೇ ಚೀಟಿ, ವಿಳಾಸ ಇಲ್ಲದ ಹಿನ್ನೆಲೆಯಲ್ಲಿ ಅಂತಹವರನ್ನು ಗುರುತಿಸುವ ಕಾರ್ಯಕ್ಕೆ ಈಗಾಗಲೇ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದೂ ಅವರು ವಿವರಿಸಿದರು.

ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಯೋಜನಾ ಆಯೋಗದ ಉಪಾಧ್ಯಕ್ಷ ರಾಮಚಂದ್ರ ಗೌಡ, ಹಿರಿಯ ಪತ್ರಕರ್ತೆ ಡಾ. ಪೂರ್ಣಿಮಾ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+