ಸಚಿನ್, ಸೋನಿಯಾ ನಂತರ ಅಖಿಲೇಶ್ ಮಾವು

ಕಸಿ ತಜ್ಞ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೋಟಗಾರಿಕಾ ತಜ್ಞ ಹಾಜಿ ಕಲೀಮುಲ್ಲಾ ಖಾನ್ ಅವರು 'ಅಖಿಲೇಶ್ ಆಮ್' ಈ ಋತುವಿನಲ್ಲಿ ಹೊರ ತರುತ್ತಿದ್ದಾರೆ.
ಕಡಿಮೆ ವಯಸ್ಸಿನ ಮಾವಿನ ಮರವೊಂದು ಫಲ ಕೊಟ್ಟಿದ್ದು ಕಂಡು ಆ ಮಾವಿನ ತಳಿಗೆ 'ಅಖಿಲೇಶ್' ಹೆಸರು ಸೂಕ್ತ ಎಂದು ಕಲೀಮುಲ್ಲಾ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಅಖಿಲೇಶ್ ಮಾವು ಹೇಗಿದೆ: ಕೆಂಬಣ್ಣದ ರುಚಿಕರ ಈ ಮಾವಿನ ಹಣ್ಣಿನ ಸಿಪ್ಪೆ ತೆಳುವಾಗಿದ್ದು ಜನಪ್ರಿಯವಾಗಲಿದೆ. ಈ ಮಾವಿನ ತಳಿಯ ಮೊದಲ ಫಸಲನ್ನು ಮುಖ್ಯಮಂತ್ರಿ ಅಖಿಲೇಶ್ ಅವರಿಗೆ ಅರ್ಪಿಸುತ್ತೇನೆ ಎಂದು ಖಾನ್ ಹೇಳಿದ್ದಾರೆ.
ಮಲಿಯಾಬಾದ್ ನ ಮಾವಿನ ತಜ್ಞ 70 ವರ್ಷದ ಖಾನ್ ಅವರು ಸುಮಾರು 300ಕ್ಕೂ ಅಧಿಕ ಮಾವಿನ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಸುಮಾರು 100 ವರ್ಷಕ್ಕೂ ಅಧಿಕ ವಯಸ್ಸಿನ ಮರಗಳನ್ನು ಸಂರಕ್ಷಿಸಿದ್ದಾರೆ.












Click it and Unblock the Notifications