ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಚಿನ್, ಸೋನಿಯಾ ನಂತರ ಅಖಿಲೇಶ್ ಮಾವು
ಕಸಿ ತಜ್ಞ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೋಟಗಾರಿಕಾ ತಜ್ಞ ಹಾಜಿ ಕಲೀಮುಲ್ಲಾ ಖಾನ್ ಅವರು 'ಅಖಿಲೇಶ್ ಆಮ್' ಈ ಋತುವಿನಲ್ಲಿ ಹೊರ ತರುತ್ತಿದ್ದಾರೆ.
ಕಡಿಮೆ ವಯಸ್ಸಿನ ಮಾವಿನ ಮರವೊಂದು ಫಲ ಕೊಟ್ಟಿದ್ದು ಕಂಡು ಆ ಮಾವಿನ ತಳಿಗೆ 'ಅಖಿಲೇಶ್' ಹೆಸರು ಸೂಕ್ತ ಎಂದು ಕಲೀಮುಲ್ಲಾ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಅಖಿಲೇಶ್ ಮಾವು ಹೇಗಿದೆ: ಕೆಂಬಣ್ಣದ ರುಚಿಕರ ಈ ಮಾವಿನ ಹಣ್ಣಿನ ಸಿಪ್ಪೆ ತೆಳುವಾಗಿದ್ದು ಜನಪ್ರಿಯವಾಗಲಿದೆ. ಈ ಮಾವಿನ ತಳಿಯ ಮೊದಲ ಫಸಲನ್ನು ಮುಖ್ಯಮಂತ್ರಿ ಅಖಿಲೇಶ್ ಅವರಿಗೆ ಅರ್ಪಿಸುತ್ತೇನೆ ಎಂದು ಖಾನ್ ಹೇಳಿದ್ದಾರೆ.
ಮಲಿಯಾಬಾದ್ ನ ಮಾವಿನ ತಜ್ಞ 70 ವರ್ಷದ ಖಾನ್ ಅವರು ಸುಮಾರು 300ಕ್ಕೂ ಅಧಿಕ ಮಾವಿನ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಸುಮಾರು 100 ವರ್ಷಕ್ಕೂ ಅಧಿಕ ವಯಸ್ಸಿನ ಮರಗಳನ್ನು ಸಂರಕ್ಷಿಸಿದ್ದಾರೆ.
Comments
English summary
The famous 'dussheri' belt of Uttar Pradesh has a new offering this summer - 'Akhilesh aam', a new variety of mango named after the state's youngest Chief Minister Akhilesh Yadav.
Story first published: Monday, April 30, 2012, 15:28 [IST]