ಪುಣೆ ನಿವೃತ್ತಿ ನಿವಾಸ ಕೈಬಿಟ್ಟ ರಾಷ್ಟ್ರಪತಿ ಪ್ರತಿಭಾ

ಆದರೆ, ನಿಯಾವಳಿಗಳನ್ನು ಉಲ್ಲಂಘಿಸಿ ರಕ್ಷಣಾ ಪಡೆಯ ಭೂಮಿಯಲ್ಲಿ ಬಂಗಲೆ ನಿರ್ಮಿಸ ಹೊರಟಿದ್ದ ಪ್ರತಿಭಾ ಅವರ ವಿರುದ್ಧ ಆರ್ ಟಿಐ ಕಾರ್ಯಕರ್ತರು ತಿರುಗಿಬಿದ್ದ ಹಿನ್ನೆಲೆಯಲ್ಲಿ ಯೋಜನೆಯನ್ನು ಪ್ರತಿಭಾ ಅವರು ಕೈಬಿಟ್ಟಿದ್ದಾರೆ.
ರಾಷ್ಟ್ರಪತಿ ಪ್ರತಿಭಾ ಅವರಿಗೆ ನಿಮಯ ಉಲ್ಲಂಘಿಸಿ ಮಂಜೂರಾದ ಭೂಮಿ ಬಗ್ಗೆ ಆರ್ ಟಿಐ ಕಾರ್ಯಕರ್ತರು ಹಾಗೂ ಜಸ್ಟೀಸ್ ಫಾರ್ ಜವಾನ್ಸ್ ಎಂಬ ಎನ್ ಜಿಒಗಳು ಮಾಧ್ಯಮಗಳಿಗೆ ವರದಿ ನೀಡಿದ್ದರು.
ಖಾಡಿ ಎಂಬಲ್ಲಿ ನಿರ್ಮಾಣಕಾರ್ಯ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರಪತಿ ತಮ್ಮ ನಿವೃತ್ತಿ ನಿವಾಸಕ್ಕೆ ಹೊಸ ಸ್ಥಳ ಆಯ್ಕೆ ಮಾಡಿರುವ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಭೂ ಮೀಸಲಾತಿ ನೀತಿ ಬದಲಾವಣೆ, ಕಟ್ಟಡಗಳ ಅಕ್ರಮ ನೆಲಸಮ ಹಾಗೂ ಮರಗಳನ್ನು ಕಡಿದಿರುವುದರ ಬಗ್ಗೆ ಆರ್ ಟಿಐ ಕಾರ್ಯಕರ್ತರು ಪ್ರಶ್ನಿಸಿದ್ದರು.












Click it and Unblock the Notifications