Get Updates
Get notified of breaking news, exclusive insights, and must-see stories!

ಸಂವಿಧಾನ ಕರ್ತೃ ಅಂಬೇಡ್ಕರ್ ಗೆ ನೊಬೆಲ್ ನೀಡಿ

Nobel Prize for Dr Ambedkar |
ಯಲಹಂಕ, ಏ.12: ಮಹಾನ್ ಮಾನವತವಾದಿ ಡಾ. ಬಿಆರ್ ಅಂಬೇಡ್ಕರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ರಾಜ್ಯ ಪ್ರಜಾ ವಿಮೋಚನಾ ಚಳವಳಿ ಪ್ರಧಾನ ಕಾರ್ಯದರ್ಶಿ ಮುನಿ ಅಂಜಿನಪ್ಪ ಒತ್ತಾಯಿಸಿದ್ದಾರೆ. ಅಂಜನಪ್ಪ ತಮ್ಮ ವಾದಕ್ಕೆ ತಾಂತ್ರಿಕವಾಗಿ ಸಮರ್ಥನೆ ಕೂಡಾ ನೀಡಿದ್ದಾರೆ.

ಭಾರತದ ಎರಡು ಸಾವಿರ ವರ್ಷಗಳ ಇತಿಹಾಸದಲ್ಲಿ ಎಲ್ಲರಿಗೂ ಸಮಾನತೆ ತಂದುಕೊಟ್ಟು ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾಗಿ ಅಂಬೇಡ್ಕರ್ ಸೇವೆ ಸಲ್ಲಿಸಿದ್ದಾರೆ.

ಅಮೆರಿಕದ ಆಕ್ಸ್ ಫರ್ಡ್ ಯೂನಿವರ್ಸಿಟಿ ಹೊರತಂದಿರುವ ದ ಮೇಕರ್ಸ್ ಆಫ್ ಯೂನಿರ್ವಸ್ ಎಂಬ ಪುಸ್ತಕದಲ್ಲಿ 10 ಸಾವಿರ ವರ್ಷಗಳಿಂದ ವಿಶ್ವಾದಾದ್ಯಂತ ಗಣನೀಯ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳ ವ್ಯಕ್ತಿ ಚಿತ್ರಗಳನ್ನು ದಾಖಲಿಸಿದೆ.

ಅದರಲ್ಲಿ ಅಂಬೇಡ್ಕರ್ ಅವರ ಮಾಹಿತಿಯೂ ಇರುವುದು ಹೆಮ್ಮೆಯ ವಿಷಯ. ಇಂಥ ವಿಶಿಷ್ಟ ಗೌರವಕ್ಕೆ ಪಾತ್ರವಾಗಿರುವ ಅಂಬೇಡ್ಕರ್ ಅವರಿಗೆ ಹೆಚ್ಚಿನ ಮಾನ್ಯತೆ ಸಿಗಬೇಕಿದೆ ಎಂದು ಮುನಿಅಂಜನಪ್ಪ ಹೇಳಿದ್ದಾರೆ.

ಚಿಕ್ಕಜಾಲ ಹಾಗೂ ಸಾಗೇನಹಳ್ಳಿಯಲ್ಲಿ ಏ.14ರಂದು ಅಂಬೇಡ್ಕರ್ ಜಯಂತಿ ಆಚರಣೆಗೆ ಸಿದ್ಧತೆ ನಡೆದಿದೆ. ಮಾಜಿ ಶಾಸಕ ವಿ ಕೃಷ್ಣಪ್ಪ, ಹಾಲಿ ಶಾಸಕ ವಿಶ್ವನಾಥ್, ಮೇಯರ್ ಶಾರದಮ್ಮ, ಶಾಸಕ ಕೃಷ್ಣಭೈರೇಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಅಂಜನಪ್ಪ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+