ಭುಟ್ಟೋ ಪುತ್ರನ ಕರೆ, ಪಾಕಿಸ್ತಾನಕ್ಕೆ ರಾಹುಲ್

ರಾಹುಲ್ ಗಾಂಧಿ ಅವರು ಪಾಕಿಸ್ತಾನಕ್ಕೆ ಬರುವ ಆಶ್ವಾಸನೆ ನೀಡಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ನೀಡಿದ ಭೋಜನಕೂಟದಲ್ಲಿ ರಾಹುಲ್ ಗಾಂಧಿ ಹಾಗೂ ಬಿಲಾವಲ್ ಅವರು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಅತ್ತ ಭಾರತದ ಹಿರಿಯ ನಾಯಕರ ಜೊತೆ ಅಪ್ಪ ಜರ್ದಾರಿ ನಗು ನಗುತ್ತಾ ಮಾತಾಡುತ್ತಿದ್ದಾರೆ. ಪಾಕಿಸ್ತಾನ ಯುವ ನಾಯಕ ಬಿಲಾವಲ್ ಮಾತ್ರ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದ್ದರು.
41 ವರ್ಷದ ರಾಹುಲ್ ಗಾಂಧಿ ಹಾಗೂ 23 ವರ್ಷ ಬಿಲಾವಲ್ ಭುಟ್ಟೋ ಜರ್ದಾರಿ ಇಬ್ಬರ ಜೀವನದಲ್ಲೂ ಒಂದಿಷ್ಟು ಸಾಮ್ಯತೆ ಇರುವುದು ಇಬ್ಬರ ಮಾತುಕತೆಗೆ ಇನ್ನಷ್ಟು ವೇಗ ತಂದುಕೊಟ್ಟಿತು.
ಕೇಂಬ್ರಿಡ್ಜ್ ನಲ್ಲಿ ರಾಹುಲ್ ವ್ಯಾಸಂಗ ಮಾಡಿದ್ದರೆ, ಬಿಲಾವಲ್ ಆಕ್ಸ್ ಫರ್ಡ್ ವಿದ್ಯಾರ್ಥಿಯಾಗಿದ್ದರು. ರಾಹುಲ್ ಅಪ್ಪ ರಾಜೀವ್ ಹಾಗೂ ಬಿಲಾವಲ್ ಅಮ್ಮ ಬೆನಜೀರ್ ಭುಟ್ಟೋ ಇಬ್ಬರು ಹಂತಕರ ಸಂಚಿಗೆ ಬಲಿಯಾದರು.
ರಾಹುಲ್ ರಂತೆ ಬಿಲಾವಲ್ ಕೂಡಾ ಪ್ರಜಾಪ್ರಭುತ್ವ, ಯುವಜನಾಂಗದ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದ್ದಾರೆ. ಬಿಲಾವಲ್ ಭಾರತದ ಭೇಟಿ ಕುರಿತ ಅಪ್ಡೇಟ್ ಗಲನ್ನು ಅವರ ಅಭಿಮಾನಿಗಳು ಟ್ವೀಟರ್ ಮೂಲಕ ಆಗಾಗ ತಿಳಿದುಕೊಳ್ಳುತ್ತಿದ್ದಾರೆ.
ಮಾತುಕತೆ ನಡೆಯಿತು.. ಆದರೆ: ಭಯೋತ್ಪಾದಕರ ಹಾವಳಿ, ಮುಂಬೈ ದಾಳಿಯ ರೂವಾರಿ ಸಯೀದ್ ಹಫೀಜ್ ವಿರುದ್ಧ ಕಠಿಣ ಕ್ರಮದ ವಿಚಾರ, ಕಾಶ್ಮೀರ ಸಮಸ್ಯೆ, ಪ್ರಾದೇಶಿಕ ವಿಷಯಗಳು, ಇದಲ್ಲದೇ ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಸರಬ್ಜಿತ್ ಸಿಂಗ್ ಕ್ಷಮಾದಾನ, ಸಿಯಾಚಿನ್, ಕಾಶ್ಮೀರ ವಿಷಯವಾಗಿ ಮಾತನಾಡಿದ್ದು, ಚರ್ಚಿಸಿದ್ದು ಜರ್ದಾರಿ ಹಾಗೂ ಮನಮೋಹನ್ ಸಿಂಗ್ ಅಲ್ಲ ಬದಲಿಗೆ ರಾಹುಲ್ ಹಾಗೂ ಬಿಲಾವಲ್ ಎಂಬುದು ಗಮನಾರ್ಹ ಸಂಗತಿ.
ಸುಮಾರು 40 ನಿಮಿಷಗಳ ಕಾಲ ರಾಹುಲ್ ಜೊತೆ ಊಟ, ಚರ್ಚೆ ನಡೆಸಿದ ಬಿಲಾವಲ್ ಇದು ನನಗೆ ಸಂತೋಷಕರ ಭೋಜನ ಕೂಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿಯಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಆಹ್ವಾನ ಸಿಕ್ಕಿದೆ. ಆದರೆ, ಭಾರತದ ಪ್ರಮುಖ ನಾಯಕರು ಪಾಕಿಸ್ತಾನಕ್ಕೆ ಯಾವಾಗ ತೆರಳುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications