ಏ.8ಕ್ಕೆ ಮಲ್ಪೆಯಲ್ಲಿ ಬೀಚ್ ಆಹಾರ ಉತ್ಸವ

ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಈ ಶಾಖಾಹಾರಿ ಖಾದ್ಯಗಳ ವಿಶಿಷ್ಟ ಆಹಾರೋತ್ಸವ ನಡೆಯುತ್ತಿದೆ.
ಉಡುಪಿಯ ವಿವಿಧ ಖಾದ್ಯಗಳ ಬಗ್ಗೆ ಇಲ್ಲಿ ಪ್ರಾತ್ಯಕ್ಷಿಕೆ ಹಾಗೂ ಆಹಾರೋತ್ಸವ ನಡೆಯಲಿದೆ ಎಂದರು.
ಬೆಲೆ ಕಡಿಮೆ : ಶ್ರೀಸಾಮಾನ್ಯನಿಗೂ ಕೈಗಟಕುವ 10 ಹಾಗೂ 20 ರು.ಬೆಲೆ ಇರಿಸಲಾಗಿದೆ. ಇದರೊಂದಿಗೆ ಅಲ್ಲಿ ಭಕ್ತಿಸಂಗೀತ, ಭರತನಾಟ್ಯ, ಜಾನಪದ ನೃತ್ಯ, ಹಾಸ್ಯ ಲಹರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲ್ಕೂರ ಹೇಳಿದರು.
ಬೀಚ್ ಆಹಾರೋತ್ಸವವನ್ನು ಎ.4ರ ಅಪರಾಹ್ನ 3ಕ್ಕೆ ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ಹಾಗೂ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.
ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಪ್ರಮೋದ್ ಮಧ್ವರಾಜ್, ನಗರಸಭಾ ಅಧ್ಯಕ್ಷ ಕಿರಣ್ಕುಮಾರ್, ಆಯುಕ್ತ ಗೋಕುಲದಾಸ ನಾಯಕ್ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಈ ಆಹಾರೋತ್ಸವದಲ್ಲಿ ಸುಮಾರು 20,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇತ್ತೀಚೆಗೆ ನಡೆದ ಬೀಚ್ ಉತ್ಸವದಲ್ಲಿ ಸುಮಾರು 40 ಸಾವಿರ ಜನ ಪಾಲ್ಗೊಂಡಿದ್ದರು.
ಮೆನು ಏನು?: ಉಡುಪಿಯ ಸಾಂಪ್ರದಾಯಿಕ ತಿನಿಸುಗಳಾದ ಸೇವಿಗೆ ಕೂರ್ಮ, ಗುಂಡ ಮೆಣಸ್ಕಾಯಿ, ಮೂಡೆ ಕೊಡೆಕೆನ, ಅವಲಕ್ಕಿ ವಗ್ಗರಣೆ, ಪುಂಡಿ ಗಟ್ಟಿ, ಪತ್ರೊಡೆ, ಬನ್ಸ್, ಮಸಾಲೆ ದೋಸೆ, ತುಪ್ಪ ದೋಸೆ, ಗೋಳಿ ಬಜೆ, ವಿವಿಧ ರೀತಿಯ ಪೋಡಿಗಳು, ಮಡ್ಡಿ, ಸುರ್ಕುಂಡೆ, ಹಾಲ್ಬಾಯಿ, ಹಲಸಿನ ಅಪ್ಪ, ನಿಪ್ಪಟ್ಟು, ಚಕ್ಕುಲಿ ಸೇರಿದಂತೆ 25ಕ್ಕೂ ಅಧಿಕ ಖಾದ್ಯಗಳು ಸಾರ್ವಜನಿಕರಿಗೆ ಕಾದಿದೆ.
ಬಾಳೆಹಣ್ಣಿನ ರಸಾಯನ, ಇಬ್ಬುಳ ರಸಾಯನ, ಮಾವಿನಹಣ್ಣಿನ ರಸಾಯನ, ಎಳ್ಳು ಜ್ಯೂಸ್, ಹೆಸರುಬೇಳೆ ಪಾಯಸ ಮುಂತಾದ ಪಾನೀಯಗಳನ್ನು ಸ್ಥಳದಲ್ಲೇ ತಯಾರಿಸಿ ಕೊಡಲಾಗುವುದು ಎಂದು ಕಲ್ಕೂರ ಹೇಳಿದರು.












Click it and Unblock the Notifications