ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡಿಗೆ ಜನರಿಂದ ಸನ್ಮಾನ ಬೇಡ್ವೇ ಬೇಡ: ಡಿವಿಎಸ್

By Srinath
|
Google Oneindia Kannada News

i-dont-want-bsy-like-fecilitation-sadananda-gowda
ಬೆಂಗಳೂರು, ಏ.2: ಮುಖ್ಯಮಂತ್ರಿ ಪಟ್ಟಕ್ಕಾಗಿ ಮಾಜಿ ಮತ್ತು ಹಾಲಿಗಳ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಮುಖ್ಯಮಂತ್ರಿ ಅಂಗಳದಲ್ಲಿ ಬಿದ್ದು ಹೊರಳಾಡುತ್ತಿದೆ. 'ಲಕ್ಷಾಂತರ ರುಪಾಯಿ ಖರ್ಚು ಮಾಡಿ 'ನಮ್ಮಭಿಮಾನ' ಮೂಲಕ ಬಲ ಪ್ರದರ್ಶನ ಮಾಡಿಸಿಕೊಂಡ ಮಾಜಿ ಸಿಎಂ ಯಡಿಯೂರಪ್ಪಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಸೋಮವಾರ ಬೆಳಗ್ಗೆ ಖಡಕ್ ಉತ್ತರ ನೀಡಿದ್ದಾರೆ.

'ನಮ್ಮದೇ ಸರಕಾರವಿದ್ದರೂ, ಆಡಳಿತದಲ್ಲಿ ಸ್ವಲ್ಪ ಸಮಸ್ಯೆಯಿದೆ' ಎಂದು ಸದಾನಂದಗೌಡರನ್ನು ಯಡಿಯೂರಪ್ಪ ಕೆಣಕಿದ್ದರು. ಅದಕ್ಕೆ ಉತ್ತರಿಸಿರುವ ಸದಾನಂದರು 'ಬರ ಬಿದ್ದು ಜನ ಸಂಕಟದಲ್ಲಿರುವಾಗ ಬಾಡಿಗೆ ಜನರನ್ನು ಕರೆಸಿಕೊಂಡು ಬಂದು ಸನ್ಮಾನ ಮಾಡಿಸಿಕೊಳ್ಳುವ ತೆವಲು ನನಗಿಲ್ಲ' ಎಂದಿದ್ದಾರೆ.

'ಕೆಲವು ಶಾಸಕರು, ಸಚಿವರು ಸೇರಿಕೊಂಡು ನನಗೆ ಸನ್ಮಾನ ಮಾಡಲು ಆಯೋಜಿಸಿದ್ದಾರೆ' ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂತು. ಆದರೆ ಅದಕ್ಕಾಗಿ ಬಾಡಿಗೆ ಬಸ್ಸುಗಳು, ಅದರ ತುಂಬ ಜನರನ್ನು ಕರೆದುಕೊಂಡು ಬಂದು ಸುಳ್ಳೇ ಸನ್ಮಾನ ಮಾಡಿಸಿಕೊಳ್ಳುವ ಜರೂರತ್ತು ನನಗಿಲ್ಲ' ಎಂದು ಸದಾನಂದರು ಸೋಮವಾರ ಬೆಳಗ್ಗೆ ಯಡ್ಡಿಗೆ ಕುಟುಕಿದ್ದಾರೆ.

ಕಳೆದ ವಾರ ಬೆಂಗಳೂರಿನಲ್ಲಿ ಯಡಿಯೂರಪ್ಪ ನಡೆಸಿದ 'ಫುಡ್ ಪಾಲಿಟಿಕ್ಸ್'ಗೂ ಸದಾನಂದರು ಹೀಗೆ ತಿರುಗೇಟು ನೀಡಿದ್ದರು. 'ಊಟ ಹಾಕಿಸಿ, ಜನರನ್ನು ಸಾಕುವ ಅನಿವಾರ್ಯ ಕರ್ಮ ನನಗಿಲ್ಲ. ಅದರ ಹಂಗೂ ಎನಗಿಲ್ಲ ಎಂದಿದ್ದರು.

English summary
The tussle for chief ministership between the former and present chief ministers B S Yeddyurappa and DV Sadananda Gowda respectively not respectfully intesifies. DVS indirectly said that he doesnt want BSY-like fecilitations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X