ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿಯಂತೆ ಅಪ್ಪಳಿಸಲು ಯಡಿಯೂರಪ್ಪ ರೆಡಿ

By Prasad
|
Google Oneindia Kannada News

Yeddyurappa Tsunami ready to hit BJP
ಬೆಂಗಳೂರು, ಮಾ. 28 : ಸುನಾಮಿ ಏಳುವ ಸಂದರ್ಭದಲ್ಲಿ ಕೆಲಕಾಲ ಹಿಂಜರಿದು ಶಾಂತವಾಗುವ ಸಾಗರದಂತೆ ಸುಮ್ಮನಿದ್ದ ಯಡಿಯೂರಪ್ಪನವರು ಸುನಾಮಿ ಎಬ್ಬಿಸಿ ಬಿಜೆಪಿಯನ್ನು ಅಪ್ಪಳಿಸಲು ಸಿದ್ಧವಾಗಿದ್ದಾರೆ. ಸದಾನಂದ ಗೌಡರೇ ಮುಂದುವರಿಯಬೇಕೆಂದು ರಾಜ್ಯದ ಕೆಲ ನಾಯಕರು ಹಿರಿಯರನ್ನು ಕೇಳಿಕೊಂಡಿರುವ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತೆ ಸಿಡಿದುನಿಂತಿದ್ದಾರೆ.

ಬಜೆಟ್ ಅಧಿವೇಶನ ಮುಗಿಯುತ್ತಿರುವ ಮಾರ್ಚ್ 30ರಂದೇ ಬಿಜೆಪಿಯ 121 ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಲು ಯಡಿಯೂರಪ್ಪ ಸಿದ್ಧರಾಗುತ್ತಿದ್ದು, ತಮ್ಮ ವಿರೋಧಿ ರಾಜ್ಯ ನಾಯಕರ ವಿರುದ್ಧ ಮತ್ತು ಬಿಜೆಪಿ ಹೈಕಮಾಂಡಿನ ವಿರುದ್ಧ ಮತ್ತೆ ತಿರುಗಿ ನಿಂತಿದ್ದಾರೆ. ಸದಾನಂದ ಗೌಡ ಮಂಡಿಸಿದ್ದ ಬಜೆಟ್ಟಿಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯದಂತೆ ಮಾಡಲು ಸರ್ವಯತ್ನ ನಡೆಸುತ್ತಿದ್ದಾರೆ.

ಬುಧವಾರ ಸಂಜೆಯೇ ದೆಹಲಿಗೆ ಯಡಿಯೂರಪ್ಪನವರು ದೌಡಾಯಿಸುವ ಸಂಭವನೀಯತೆಯಿದೆ. ಬಲ್ಲ ಮೂಲಗಳ ಪ್ರಕಾರ, ಮುಖ್ಯಮಂತ್ರಿ ಪಟ್ಟಕ್ಕೆ ಮತ್ತೆ ಗಾಳ ಹಾಕಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈ ಬಾರಿ ಒಲಿಯದಿದ್ದರೆ ಮುಂದಿನ ತಿಂಗಳು ಶಿವಮೊಗ್ಗದಲ್ಲಿ ಅವರು ನಡೆಸಲಿರುವ ಸಭೆಯಲ್ಲಿ ಮುಂದಿನ ನಡೆಯನ್ನು ಪ್ರಕಟಗೊಳಿಸಲಿದ್ದಾರೆ.

ಕೆಲ ದಿನಗಳ ಹಿಂದೆ ನವದೆಹಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿಯಾಗಿ ಬಂದಿದ್ದ ಯಡಿಯೂರಪ್ಪ ಬರಿಗೈಯಲ್ಲಿ ಮರಳಿ ಬಂದಿದ್ದರು. ಬಜೆಟ್ ಅಧಿವೇಶನ ಮುಗಿಯುವವರೆಗೆ ಸುಮ್ಮನಿರಬೇಕೆಂದು ಕಿವಿಮಾತು ಹೇಳಿಸಿಕೊಂಡು ಕೂಡ ಬಂದಿದ್ದರು. ಆದರೆ, ಬಜೆಟ್ ಅಧಿವೇಶನ ಮುಗಿಯುವ ಮೊದಲೇ ಅವರು ಹೈಕಮಾಂಡಿಗೆ ಸೆಡ್ಡು ಹೊಡೆದಿದ್ದಾರೆ. ಉನ್ನತ ಹುದ್ದೆ ದೊರೆಯದಿದ್ದರೆ ಏಪ್ರಿಲ್ ತಿಂಗಳಲ್ಲಿ ಸಾಮೂಹಿಕ ರಾಜೀನಾಮೆ ನೀಡಲು ಕೂಡ ಅವರು ಬೆಂಬಲಿಗ ಶಾಸಕರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

English summary
BS Yeddyurappa is all set to hit BJP like Tsunami on March 30, the last day of Budget Session. It is learnt that BSY has issued notice to 121 supporting MLAs to be ready for any eventuality, if BJP high command again denied him top post in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X