ರೈಲ್ವೆ ಇಲಾಖೆಗೆ ಒಂದು ಲಕ್ಷ ಸಿಬ್ಬಂದಿ ನೇಮಕ

ಮೈಸೂರು-ಬೆಂಗಳೂರು ನಗರಗಳನ್ನು ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರಗಳ ಮಾದರಿಯಲ್ಲಿ ಅಭಿವದ್ಧಿಪಡಿಸಲಾಗುವುದು. ಮೈಸೂರು-ಬೆಂಗಳೂರು ನಡುವಿನ ರೈಲು ಸೇವೆ ಮತ್ತಷ್ಟು ವಿಸ್ತಾರಗೊಳ್ಳಬೇಕಿದೆ. ಪ್ರಯಾಣ ಇನ್ನಷ್ಟು ತ್ವರಿತವಾಗಬೇಕಿದ್ದು, ಇದು ಸಾಧ್ಯವಾದರೆ ಉಭಯ ನಗರಗಳ ನಡುವೆ ಸಂಚಾರಕ್ಕೆ ಹಾದಿ ಸುಗಮವಾಗಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.
ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ರೈಲ್ವೆ ಮಾರ್ಗ ಸಿದ್ಧವಾಗಿದ್ದು ಆದಷ್ಟು ಬೇಗ ರೈಲು ಸಂಚಾರವನ್ನು ಆರಂಭಿಸಲಾಗುವುದು. ಈಗಾಗಲೇ ತಾಳಗುಪ್ಪದಿಂದ ಮೈಸೂರು, ಹಾಸನಕ್ಕೆ ರೈಲು ಸಂಚಾರ ಆರಂಭವಾಗಿದ್ದು, ಸದ್ಯದಲ್ಲೇ ಬೆಂಗಳೂರು-ತಾಳಗುಪ್ಪ ರೈಲು ಮಾರ್ಗ ಕಾರ್ಯಾರಂಭ ಮಾಡಲಿದೆ ಎಂದರು.












Click it and Unblock the Notifications