ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಪನ್ಯಾಸಕರ ಅಮಾನತಿಗೆ ನಾರಾಯಣಸ್ವಾಮಿ ತಕರಾರು
ಅವರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಶ್ನೆ ಪತ್ರಿಕೆ ಬಹಿರಂಗ ವಿಚಾರದಲ್ಲಿ ಎಲ್ಲಿ ಏನು ನಡೆದಿದೆ ಎಂಬ ಮಾಹಿತಿ ಇನ್ನೂ ಸ್ಪಷ್ಟ ಇಲ್ಲ. ಆಗಲೆ 14 ಜನ ಉಪನ್ಯಾಸಕರನ್ನು ಅಮಾನತ್ತು ಮಾಡಿರುವುದು ಖಂಡನಿಯ ಎಂದರು.
ಪ್ರಶ್ನೆಪತ್ರಿಕೆ ಬಹಿರಂಗವಾಗಿರುವುದು ಆತಂಕಕಾರಿಯಾದ ವಿಚಾರ. ಇಂತಹ ಘಟನೆಗಳು ಮರುಕಳಿಸದಂತೆ ಈ ವಿಚಾರವಾಗಿ ಸಿಬಿಐ ವತಿಯಿಂದ ಸಮಗ್ರ ತನಿಖೆಯಾಗಬೇಕಿದೆ. ಈ ಮೂಲಕ ನಿಜವಾದ ತಪಿತಸ್ಥರು ಯಾರು ಎಂಬ ಸತ್ಯಾಂಶ ಹೊರಬಿಳುತ್ತದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸರ್ಕಾರ ಪ್ರೌಡಶಾಲೆ ಶಿಕ್ಷಕರಿಗೆ 6ನೇ ವೇತನ ನೀಡಿರುವುದು ಶಿಕ್ಷಕರ ಹೋರಾಟಕ್ಕೆ ಸಂದ ಜಯ ಎಂದು ಅಭಿಪ್ರಾಯಪಟ್ಟರು.
ಮಾರ್ಚ್ 24ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ರಾಜ್ಯಾದ್ಯಂತ ಮತ್ತೆ ಆರಂಭವಾಗಿದ್ದು, ಏಪ್ರಿಲ್ ಐದರವರೆಗೆ ನಡೆಯಲಿವೆ. ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣದಿಂದಾಗಿ ಎಲ್ಲೆಡೆ ಬಿಗಿ ಭದ್ರತೆಯಲ್ಲಿ ಪರೀಕ್ಷೆಗಳು ನಡೆಯುತ್ತಿವೆ. [ಪರಿಷ್ಕೃತ ವೇಳಾಪಟ್ಟಿ]
Comments
English summary
Member of Legislative Council Y.A. Narayanaswamy from Kolar has objected to the suspension of teachers allegedly involved in leakage of 2nd PU papers. He said, nothing is proved yet, so action was unwarranted.
Story first published: Monday, March 26, 2012, 11:25 [IST]