ನೀಲಿ ಚಿತ್ರ : ಪತ್ರಕರ್ತರನ್ನು ಬೆಂಬಲಿಸಿದ ನ್ಯಾ. ಕಾಟ್ಜು

ಸೋಮವಾರ ಕರ್ನಾಟಕದ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ, ನೀಲಿ ಚಿತ್ರದ ಘಟನೆಯನ್ನು ವರದಿ ಮಾಡಿದ ಪತ್ರಕರ್ತರನ್ನು ಬೆಂಬಲಿಸಿದ್ದಾರೆ. ಅಶ್ಲೀಲ ಚಿತ್ರ ನೋಡಿದ ಶಾಸಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಪತ್ರಕರ್ತರ ವಿರುದ್ಧ ನಡೆಸುತ್ತಿರುವ ತನಿಖೆಯನ್ನು ಕೂಡಲೆ ಕೈಬಿಡಬೇಕೆಂದು ಅವರು ಬೋಪಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.
ಇಂಥ ತನಿಖೆಯಿಂದಾಗಿ, ಭಾರತದ ಸಂವಿಧಾನದಲ್ಲಿ ಪತ್ರಕರ್ತರಿಗೆ ನೀಡಲಾಗಿರುವ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಕಸಿದಂತಾಗುತ್ತದೆ. ಈ ಘಟನೆಯಿಂದಾಗಿ ಶಾಸಕರ ಬದಲು ಪತ್ರಕರ್ತರೇ ವಿಧಾನಸಭೆಗೆ ಅಗೌರವ ತೋರಿದಂತೆ ಚಿತ್ರಣ ನೀಡಿದಂತಾಗುತ್ತದೆ ಮತ್ತು ಅವರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.












Click it and Unblock the Notifications