ಯಡಿಯೂರಪ್ಪ ವಿರುದ್ಧ FIR ರದ್ದು : ತೀರ್ಪಲ್ಲೇನಿದೆ?

Karnataka High Court
ಬೆಂಗಳೂರು, ಮಾ. 8 : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ವರದಿಯ ಆಧಾರದ ಮೇಲೆ ಮತ್ತು ರಾಜ್ಯಪಾಲರ ನಿರ್ದೇಶನದಂತೆ ಹೂಡಲಾಗಿದ್ದ ಕ್ರಿಮಿನಲ್ ಪ್ರಕರಣ (Crime No. 36/2011)ನಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ ರದ್ದುಗೊಳಿಸಿ ನ್ಯಾಯಮೂರ್ತಿಗಳಾದ ಡಾ. ಕೆ ಭಕ್ತವತ್ಸಲ ಮತ್ತು ನ್ಯಾ. ಕೆ. ಗೋವಿಂದರಾಜು ಅವರು ಹೊರಡಿಸಿರುವ ಆದೇಶದ ಕೆಲ ಪ್ರಮುಖ ಅಂಶಗಳು ಕೆಳಗಿನಂತಿವೆ.

* ಲೋಕಾಯುಕ್ತರು ವರದಿ ಸಲ್ಲಿಸುವ ಮುನ್ನ ಯಡಿಯೂರಪ್ಪ ಅವರಿಗೆ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಒಂದು ಪ್ರತಿ ನೀಡಿ ಅವರ ಉತ್ತರಗಳನ್ನು ಪಡೆದುಕೊಂಡಿಲ್ಲ.

* ಆರೋಪಕ್ಕೆ ಪ್ರತಿಯಾಗಿ ಆರೋಪಿಯ ವಿವರಗಳನ್ನು ಆಲಿಸುವ ಅವಕಾಶವನ್ನೇ ಲೋಕಾಯುಕ್ತರು ನೀಡಿಲ್ಲ. ಹೀಗಾಗಿ ತನಿಖೆ ಪೂರ್ತಿಗೊಂಡಂತಾಗುವುದಿಲ್ಲ.

* ಯಡಿಯೂರಪ್ಪನವರು ಆರೋಪಿಸಿದಂತೆ ಕೆಲ ಗಣಿಗಾರಿಕೆ ಸಂಸ್ಥೆಯಿಂದ ಪಡೆದರೆನ್ನಲಾದ ಹಣದ ಬಗ್ಗೆ ಲೋಕಾಯುಕ್ತರಿಗೆ ಸಂಶಯವಿದೆ.

* ಲೋಕಾಯುಕ್ತ ಅರೆನ್ಯಾಯಾಂಗ ಅಧಿಕಾರಿಯಾದ್ದರಿಂದ ವರದಿಯಲ್ಲಿ ನಿಖರವಾದ ಕಾರಣಗಳನ್ನು ನೀಡಬೇಕಾಗಿತ್ತು. ಆದರೆ, ಲೋಕಾಯುಕ್ತರು ಆರೋಪಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವಾಗ ನಿಖರವಾದ ಕಾರಣಗಳನ್ನೇ ನೀಡಿಲ್ಲ.

* ಯಡಿಯೂರಪ್ಪನವರಿಗೆ ಅವಕಾಶವನ್ನೇ ನೀಡದೆ ಲೋಕಾಯುಕ್ತ ಸಂಸ್ಥೆ ಸ್ವಾಭಾವಿಕ ನ್ಯಾಯವನ್ನು ಸಾರಾಸಗಟಾಗಿ ಗಾಳಿಗೆ ತೂರಿದೆ.

* ಭ್ರಷ್ಟ ಮನಸ್ಸು ಅಂದರೆ ಏನು? ಮತದಾರರಿಗೆ ಟಿವಿ, ಫ್ರಿಜ್ ನೀಡುವುದು ಭ್ರಷ್ಟಾಚಾರವೆ? ರೆಪ್ರೆಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್ 1950 ತಿದ್ದುಪಡಿ ಮಾಡಲು ಇದು ಸಕಾಲ.

* ಮುಖ್ಯಮಂತ್ರಿ ಪದವಿ ತ್ಯಜಿಸಬೇಕೆಂದು ಲೋಕಾಯುಕ್ತ ಹೇಳಿಲ್ಲವಾದ್ದರಿಂದ ಅವರನ್ನು ಆಲಿಸುವ ಪ್ರಮೇಯವೇ ಇಲ್ಲ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ.

* ಯಾವುದೇ ಕಂಪನಿಗಳಿಗೆ ಯಡಿಯೂರಪ್ಪ ಔದಾರ್ಯ ತೋರಿದ್ದಾರೆನ್ನುವುದಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸಲಾಗಿಲ್ಲ. ಗಣಿಗಾರಿಕೆ ಕಂಪನಿಗಳಿಗೆ ಅನುಮತಿ ನೀಡಿದಾಗ ಆರೋಪಿ ಗಣಿ ಮಂತ್ರಿ ಅಥವಾ ಮುಖ್ಯಮಂತ್ರಿ ಕೂಡ ಆಗಿರಲಿಲ್ಲ.

* ಮುಖ್ಯಮಂತ್ರಿ ಸ್ಥಾನ ಶಾಶ್ವತವಲ್ಲ, ಆದರೆ ಗೌರವವೆಂಬುದು ಯಾವತ್ತಿಗೂ ಶಾಶ್ವತ. ಯಡಿಯೂರಪ್ಪ ಅವರ ಮೇಲೆ ಆರೋಪ ಹೊರಿಸಿ ಅವರ ಗೌರವಕ್ಕೆ ಚ್ಯುತಿ ತರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+