ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಕುಣಿಕೆಯಿಂದ ಯಡಿಯೂರಪ್ಪ ಬಚಾವ್ ಅಸಾಧ್ಯ

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಮಾ.7: ಅಕ್ರಮ ಗಣಿಕಾರಿಕೆ ಕುರಿತ ಲೋಕಾಯುಕ್ತ ವರದಿಯಲ್ಲಿ ಹೇಳಿರುವಂತೆ ಜಿಂದಾಲ್ ಕಂಪನಿಗೂ ನನಗೂ ಸಂಬಂಧವಿಲ್ಲ. ನಾನು ಯಾವುದೇ ಗಣಿಗಾರಿಕೆ ಮಾಡಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದ್ದು ಹೈಕೋರ್ಟ್ ಗೆ ಕೇಳಿಸಿದೆ ಆದರೆ, ಇನ್ನೂ ಸುಪ್ರೀಂಕೋರ್ಟ್ ಗೆ ತಲುಪಿಲ್ಲ.

ಜಿಂದಾಲ್ ಹಾಗೂ ಅದಾನಿ ಕಂಪನಿ ಮೇಲೆ ವರದಿ ನೀಡಲು ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಸಿಬಿಐ ತನಿಖೆಗೆ ದಾರಿ ಎಡೆಮಾಡಿಕೊಡುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಿದ್ದಾರೆ.

ಸಿಇಸಿ ಶಿಫಾರಸ್ಸು ಮುಖ್ಯ: ಅಕ್ರಮ ಗಣಿಗಾರಿಕೆಯ ವಿಚಾರದಲ್ಲಿ ಸುಪ್ರೀಂಕೋರ್ಟ್ ಸಿಇಸಿ ಶಿಫಾರಸುಗಳನ್ನು ನಿರಾಕರಿಸಲಾಗುವುದಿಲ್ಲವಾದ್ದರಿಂದ ಯಡ್ಡಿ ಕುಟುಂಬದ ಪ್ರೇರಣಾ ಟ್ರಸ್ಟ್ ಜಿಂದಾಲ್ ಕಂಪನಿಯಿಂದ 20 ಪ್ಲಸ್ ಕೋಟಿ ಪಡೆದಿರುವ ಪ್ರಕರಣ ಹೊಸ ತಿರುವು ಪಡೆಯಲಿದೆ.

ಹಣ ಪಡೆದಿರುವುದನ್ನು ಸ್ವತಃ ಯಡಿಯೂರಪ್ಪ ಅವರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಅದು ನನ್ನ ಮಕ್ಕಳ ವ್ಯವಹಾರ ನನಗೂ ಅವರಿಗೂ ಸಂಬಂಧ ಕಡೆದು ಹೋಗಿ ಸುಮಾರು ವರ್ಷ ಆಯಿತು ಎಂದು ಜಾಣತನ ಉತ್ತರ ನೀಡಿದ್ದಾರೆ.

ಈ ಮಧ್ಯೆ ಕರ್ನಾಟಕ ಹೈಕೋರ್ಟ್ ಯಡಿಯೂರಪ್ಪ ಅವರಿಗೆ ಬುಧವಾರ ಕ್ಲೀನ್ ಚಿಟ್ ನೀಡಿದೆ. ಗಣಿಗಾರಿಕೆ ಸಂಬಂಧಿಸಿದ ಉಳಿದ ಪ್ರಕರಣಗಳಲ್ಲೂ ಯಡಿಯೂರಪ್ಪ ಅವರಿಗೆ ಖುಲಾಸೆ ಆಗಲಿದೆ ಎಂದು ಯಡಿಯೂರಪ್ಪ ಪರ ವಕೀಲ ಸಂದೀಪ್ ಪಾಟೀಲ್ ಹೇಳಿದ್ದಾರೆ.

English summary
With Supreme court ordering CEC is to probe on irregularities by Jindal and Adani Group in Bellary. Yeddyurappa is fearing CBI Probe. NGO Samaj Parivartan Samudaya, counsel Prashant Bhushan reffered Lokayukta report on illegal mining and mentioned Yeddyurappa's role. But HC has given cleanchit yo BSY on Wednesday(Mar.7) based on the same Lokayukta report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X