ಹೈದರಾಬಾದಿನಲ್ಲಿ ನಿಧಿ ಏನು,ಎತ್ತ,ನೋಡಿದ್ದು ಯಾರು?

Hyderabad Vidyaranya High School Treasure Hunt
ಹೈದರಾಬಾದ್, ಫೆ.19: ಆಂಧ್ರ ವಿಧಾನಸಭೆ ಸಚಿವಾಲಯದ ಎದುರು ಪುರಾತನ ವಿದ್ಯಾರಣ್ಯ ಪಾಠಶಾಲೆಯ ನೆಲಮಾಳಿಗೆಯಲ್ಲಿ 'ಅನಂತ ಸಂಪತ್ತು' ಇದೆಯೆಂದು ಶಾಲೆಯ ನೆಲ ಅಗೆಯುವ ಕಾರ್ಯ ಆರಂಭವಾಗಿದೆ. ಇಲ್ಲಿ ಅಂದಾಜು 20,000 ಕೋಟಿ ರುಪಾಯಿ ಮೌಲ್ಯದ ಸಂಪತ್ತು ಇರಬಹುದು ಎಂದು ಈಗಾಗಲೇ ಅಂದಾಜಿಸಲಾಗಿದೆ.

ಹಾಗಾದರೆ ಇದನ್ನು ಮೊದಲು ನೋಡಿದ್ದು ಯಾರು? ಇಲ್ಲಿ ಭಾರಿ ಸಂಪತ್ತು ಇರುವುದು ನಿವಾ, ಅಥವಾ ಕೇವಲ ಊಹಾಪೋಹವಾ? ಗಾಳಿಸುದ್ದಿಯಾ? ಎಂಬ ಪ್ರಶ್ನೆಗಳು ಕಾಡ್ಗಿಚ್ಚಿನಂತೆ ಸುಳಿದಾಡುತ್ತಿದೆ. ತಿರುವನಂತಪುರದ ಅನಂತ ಸಂತ್ತಿನ ಬಗ್ಗೆಯೂ ಹೀಗೆ ಅನಾದರಣೆ ವ್ಯಕ್ತವಾಗಿತ್ತು. ಅಸಲಿಗೆ ದೇವಸ್ಥಾನದಡಿ ನೆಲಮಾಳಿಗೆಯೇ ಇಲ್ಲ. ಇನ್ನು ಅಷ್ಟೊಂದು ಸಂಪತ್ತು ಎಲ್ಲಿ ಶೇಖರಣೆಯಾಗಲು ಸಾಧ್ಯ ಎಂಬೆಲ್ಲ ಅನುಮಾನದ ಹುತ್ತಗಳು ಎದ್ದಿದ್ದವು.

ಆದರೆ ಅಲ್ಲೇನಿತ್ತು ಎಂಬುದು ಇಡೀ ಜಗತ್ತೇ ನಿಬ್ಬೆರಗಾಗಿ ನೋಡುತ್ತಿದೆ. ಮತ್ತೂ ಒಂದು ವಿಷಯ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಗೆ ಸಂಪರ್ಕ ಕಲ್ಪಿಸುವ 2 ನೆಲಮಾಳಿಗೆಗಳು ಇವೆ ಎಂಬ ಖಚಿತ ಮಾತೂ ಇದೆ.

ಈ ಮಧ್ಯೆ, ಹೈದರಾಬಾದ್ ಅನಂತ ಸಂಪತ್ತನ್ನು ಮೊದಲು ನೋಡಿದ್ದು ಯಾರು? ಆ ಬಗ್ಗೆ ನಿಖರ ಮಾಹಿತಿ ದೊರೆತಿದ್ದಾದರೂ ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ... ಮಲ್ಲೇಶ ಎಂಬ ವ್ಯಕ್ತಿ ಪ್ರತ್ಯಕ್ಷನಾಗುತ್ತಾನೆ. ಈತನೇ ಈಗ ಸುರಂಗ ಮಾರ್ಗಕ್ಕೆ ಮಾರ್ಗದರ್ಶಿಯಾಗಿದ್ದಾನೆ. ಆರ್ಕಿಯಾಲಜಿ ಡಿಪಾರ್ಟಿಮೆಂಟಿನವರು ಈತನ ಮಾರ್ಗದರ್ಶನದಲ್ಲಿ ಇಂದು ಬೆಳಗ್ಗೆಯಿಂದ ಸುರಂಗ ಅಗೆಯುತ್ತಿದ್ದಾರೆ. ಸುರಂಗ ಮಾರ್ಗದಲ್ಲಿ ಮಲ್ಲೇಶ ಕಂಡಿದ್ದಾದರೂ ಏನು? ಮುಂದೆ ಓದಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+