ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಅನಂತ ಸಂಪತ್ತು ಮತ್ತೆ ಸುದ್ದಿಗೆ

By Srinath
|
Google Oneindia Kannada News

kerala-temple-treasure-valuation-report-in-sc-feb15
ತಿರುವನಂತಪುರ, ಫೆ.15: ಕಳೆದ ಜೂನ್ ತಿಂಗಳಲ್ಲಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ ಇಲ್ಲಿನ ಅನಂತ ಪದ್ಮನಾಭ ಸ್ವಾಮಿ ದೇಗುಲ ಮತ್ತೆ ಸುದ್ದಿಗೆ ಬಂದಿದೆ. ದೇಗುಲದ ನೆಲಮಾಳಿಗೆಯಲ್ಲಿರುವ ಅಪಾರ ಪ್ರಮಾಣದ ಸಂಪತ್ತಿನ ಮೌಲ್ಯಮಾಪನ ಮತ್ತು ದಾಖಲೀಕರಣ ಸುದೀರ್ಘ‌ ಪ್ರಕ್ರಿಯೆ ಆರಂಭವಾಗಿದ್ದು, ಇಂದು (ಫೆ.15) ಸುಪ್ರೀಂ ಕೊರ್ಟಿಗೆ ಮೊದಲ ವರದಿ ಸಲ್ಲಿಕೆಯಾಗಲಿದೆ. ಜತೆಗೆ, ಕುತೂಹಲದ ಗೂಡಾಗಿರುವ ಬಿ ಉಗ್ರಾಣದ ಬಗ್ಗೆಯೂ ಕೋರ್ಟಿಗೆ ಇಂದು ವರದಿ ಸಲ್ಲಿಕೆಯಾಗಲಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿಯ ಉಪಸ್ಥಿತಿಯಲ್ಲಿ ಪ್ರಾಯೋಗಿಕವಾಗಿ ಮೌಲ್ಯಮಾಪನ ಮತ್ತು ದಾಖಲೀಕರಣ ನಡೆಸಲಾಗಿದ್ದು, ಇದು ಪೂರ್ತಿಯಾಗಲು ತಿಂಗಳುಗಟ್ಟಲೆ ಸಮಯ ಹಿಡಿಯಬಹುದು. ಸಂಪತ್ತಿನ ಅಧಿಕೃತ ಮೌಲ್ಯಮಾಪನ ಮತ್ತು ದಾಖಲೀಕರಣ ಪ್ರಕ್ರಿಯೆ ಫೆ. 20ರಿಂದ ಪ್ರಾರಂಭವಾಗಲಿದೆ ಎಂದು ಸಮಿತಿಯ ಮುಖ್ಯಸ್ಥ ಎಂ.ವಿ. ನಾಯರ್‌ ಇತ್ತೀಚೆಗೆ ತಿಳಿಸಿದ್ದಾರೆ.

ಸುಪ್ರೀಂಕೊರ್ಟ್ ನೇಮಿಸಿರುವ ವೇಲಾಯುಧನ್ ನಾಯರ್ ನೇತೃತ್ವದ ಪರಿಣತರ ತಂಡಕ್ಕೆ ಇನ್ನೂ ಹಲವು ಕ್ಷೇತ್ರಗಳ ಪ್ರತಿನಿಧಿಗಳು ಸೇರ್ಪಡೆಯಾಗಲಿದ್ದಾರೆ. ಮೌಲ್ಯಮಾಪನ ಮತ್ತು ದಾಖಲೀಕರಣ ಪ್ರಕ್ರಿಯೆಗಾಗಿ ಕೇರಳ ಎಲೆಕ್ಟ್ರಾನಿಕ್ ಕಾರ್ಪೊರೇಶನ್ ಅತ್ಯಾಧುನಿಕ ಸಾಧನ, ಪರಿಕರಗಳನ್ನು ಖರೀದಿಸಿದ್ದು, ಅಮೂಲ್ಯ ಸಂಪತ್ತಿನ ವ್ಯವಸ್ಥಿತ ಮೌಲ್ಯಮಾಪನ ಕ್ಷಿಪ್ರವಾಗಿ ನಡೆಯಲಿದೆ. ಈ ನಿಟ್ಟಿನಲ್ಲಿ ತಾಂತ್ರಿಕ ಸಿಬ್ಬಂದಿಗೆ ತರಬೇತಿ ಸಹ ನೀಡಲಾಗಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ದೇಗುಲದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದನ್ನು ತೆರೆದಾಗ ಸಿಕ್ಕಿರುವ ಸಂಪತ್ತನ್ನು ನೋಡಿ ಜಗತ್ತೇ ದಂಗು ಬಡಿದಿದೆ. ಸುಮಾರು 150 ವರ್ಷಗಳಿಂದ ಮುಚ್ಚಿದ್ದ ಈ ಕೊಠಡಿಗಳಲ್ಲಿ ಸಿಕ್ಕಿರುವ ಸಂಪತ್ತಿನ ಈಗಿನ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ತೆರೆಯಲು ಬಾಕಿಯಿರುವ ಬಿ ಉಗ್ರಾಣದಲ್ಲೂ ಇಷ್ಟೇ ಪ್ರಮಾಣದ ಸಂಪತ್ತು ಇದೆ ಎನ್ನಲಾಗುತ್ತಿದೆ.

English summary
The treasure valuation report on Sri Padmanabha Swami Temple at Thiruvananthapuram, Kerala will be submitted in Supreme Court today February 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X