ಹೆಚ್ಚುತ್ತಿರುವ ಅಗ್ನಿ ದುರಂತ: ಬೆಂಗಳೂರಿಗೆ ಹೊಸ ನೀತಿ
ನಿವಾಸಿಗಳ ಸುರಕ್ಷತೆಗೆ ಆದ್ಯ ಗಮನಹರಿಸಲಾಗಿದ್ದು, 15 ಮೀಟರಿಗಿಂತ ಹೆಚ್ಚು ಎತ್ತರವಿರುವ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆ ಸಂಬಂಧ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯ ಸರಕಾರ ಹೊಸದಾಗಿ ರೂಪಿಸಿದೆ. ಹೈಕೋರ್ಟಿನ ಮಧ್ಯಂರ ಆದೇಶವನ್ನು ಪರಿಗಣಿಸಿ, ಸರಕಾರ ಈ ನೀತಿಯನ್ನು ಜಾರಿಗೆಗೊಳಿಸಿದೆ.
ಇನ್ನು ಮುಂದೆ, ಅಗ್ನಿಶಾಮಕ ದಳ ತಪಾಸಣೆ ನಡೆಸಿ, NOC ನೀಡಿದ ನಂತವರೇ ಬಿಬಿಎಂಪಿ ತನ್ನ ಅಂತಿಮ ಅನುಮೋದನೆ ನೀಡಬೇಕಾಗಿದೆ. ಅಗ್ನಿಶಾಮಕ ಇಲಾಖೆಯ ನಿರೀಕ್ಷಕರು ವರ್ಷಕ್ಕೆ ಒಂದೆರಡು ಬಾರಿ ಅನಿರೀಕ್ಷಿತ ತಪಾಸಣೆ ನಡೆಸಿ, ವರದಿ ಸಲ್ಲಿಸಬೇಕು. ಸ್ಥಳೀಯ ಸಂಸ್ಥೆಗಳು (ಬಿಬಿಎಂಪಿ) ನಿಗದಿಗೊಳಿಸಿರುವ ಕಾನೂನು ಕಟ್ಟಳೆಗಳನ್ನು ಪಾಲಿಸಲಾಗಿದೆಯಾ ಎಂಬುದರ ಬಗ್ಗೆಯೂ ವರದಿ ಸಲ್ಲಿಕೆಯಾಗಬೇಕಾಗುತ್ತದೆ. ವರದಿಯಲ್ಲಿ ಲೋಪಗಳು ಪತ್ತೆಯಾದಲ್ಲಿ occupancy certificate ತಡೆಹಿಡಿಯಲಾಗುತ್ತದೆ.
ಅಗ್ನಿಶಾಮಕ ಇಲಾಖೆಯ ಜಿಲ್ಲಾ ಅಧಿಕಾರಿ ಇಂತಹ NOC ನೀಡುವ ಅಧಿಕಾರ ಹೊಂದಿರುತ್ತಾರೆ. ಈಗಾಗಲೇ ವಾಸವಿರುವ ಕಟ್ಟಡಗಳೂ ಇಲಾಖೆಯಿಂದ NOC ಪಡೆಯುವುದು ಕಡ್ಡಾಯವಾಗಿದೆ.