ರಾಡಿಯಾ ಟೇಪ್ ತಿರುಚಲಾಗಿದೆ, ಸರ್ಕಾರಿ ಹೇಳಿಕೆ
ನೀರಾ ರಾಡಿಯಾ ಟೇಪ್ಸ್ ಕುರಿತ ಸುದ್ದಿ ಪ್ರಸಾರ ಎಲ್ಲವೂ ಆಧಾರ ರಹಿತವಾಗಿದ್ದು, ಮಾಧ್ಯಮಗಳು ಸುದ್ದಿಯನ್ನು ತಿರುಚಿದೆ ಎಂದು ಸರ್ಕಾರ ಕಚೇರಿಗಳಿಂದ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ನ್ಯಾ. ಜಿಎಸ್ ಸಿಂಘ್ವಿ ಅವರಿರುವ ನ್ಯಾಯಪೀಠ ಸಲ್ಲಿಸಲಾಗಿರುವ ಮುಚ್ಚಿದ ಲಕೋಟೆಯಲ್ಲಿ ಈ ರೀತಿ ಹೇಳಿಕೆ ದಾಖಲಾಗಿದೆ. 8 ರಿಂದ 10 ಏಜೆನ್ಸಿಗಳು, ಸೇವಾದಾರ ಸಂಸ್ಥೆಗಳು, ಕಾರ್ಪೋರೇಟ್ ಲಾಬಿಗಾರ್ತಿ ನೀರಾ ರಾಡಿಯಾ[ನೀರಾ ರಾಡಿಯಾ ಬಗ್ಗೆ ಸಂಪೂರ್ಣ ಚಿತ್ರಣ] ದೂರವಾಣಿ ಕದ್ದಾಲಿಕೆಯಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಲಾಗಿದೆ.
ಟೇಪ್ಸ್ ಬಹಿರಂಗ ಮಾಡಿದವರು ಯಾರು? ಮೊದಲ ಹಾಗೂ ಕೊನೆಯ ಸಂಭಾಷಣೆ ಏಕೆ ಹೊಂದಿಕೆಯಾಗುತ್ತಿಲ್ಲ ಎಂಬುದರ ಬಗ್ಗೆ ತನಿಖಾಧಿಕಾರಿಗಳಿಗೆ ಸ್ಪಷ್ಟ ಮಾಹಿತಿಯಿಲ್ಲ ಎಂದು ನ್ಯಾಯಪೀಠ ಹೇಳಿದೆ.2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಸಿಬಿಐ ಪ್ರಕಾರ ಇದುವರೆಗೂ 5000 ಕರೆಗಳನ್ನು ದಾಖಲಿಸಿದ್ದು, ಅದರಲ್ಲಿ ಈಗಾಗಲೇ 104 ಧ್ವನಿ ಮುದ್ರಣಗಳು ಸೋರಿಕೆಯಾಗಿತ್ತು.(ಪಿಟಿಐ)