ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಜನ್ಮದಲ್ಲಿ ಎನ್ ಸಿಪಿ ಸೇರುವುದಿಲ್ಲ: ಬಿಎಸ್ ವೈ

By Mahesh
|
Google Oneindia Kannada News

BS Yeddyurappa
ತುಮಕೂರು,ಜ.19: ಯಡಿಯೂರಪ್ಪ ಅವರು ಎನ್‌ಸಿಪಿ ಸೇರುತ್ತಾರೆ, ಎನ್ ಸಿಪಿ ರಾಜ್ಯ ಘಟಕದ ಅಧ್ಯಕ್ಷರಾಗುತ್ತಾರೆ, ಕೇಂದ್ರ ರಾಜಕಾರಣಕ್ಕೂ ಎಂಟ್ರಿ ಕೊಡ್ತಾರೆ ಎಂಬ ಗಾಳಿಸುದ್ದಿಯನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಲ್ಲಗೆಳೆದಿದ್ದಾರೆ.

ಯಡಿಯೂರಪ್ಪ ಅವರು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಸೇರುತ್ತಾರೆ ಎಂದು ಪಕ್ಷದ ಕಾರ್ಯಾದ್ಯಕ್ಷ ಅಶೋಕ ಜವಳಿ ಹೇಳಿಕೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಯಡಿಯೂರಪ್ಪ, 'ಈ ಜನ್ಮದಲ್ಲಿ ನಾನು ಎನ್‌ಸಿಪಿ ಸೇರುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ.ಬೇಕಿದ್ದರೆ ಎನ್‌ಸಿಪಿ ನಾಯಕರೇ ಬಿಜೆಪಿ ಸೇರಲಿ ಎಂದು ತೀರುಗೇಟು ನೀಡಿದ್ದಾರೆ.

ಮತ್ತೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕರೆ, ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸುತ್ತೇನೆ. ಆದರೆ, ಅವಕಾಶ ನೀಡುವುದು ಹೈಕಮಾಂಡ್ ಗೆ ಬಿಟ್ಟ ವಿಷ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ತುಮಕೂರಿನಲ್ಲಿ ಹೇಳಿದರು.

ತುಮಕೂರಿನ ಗೊಳೂರು, ಹೆಬ್ಬೂರಿನಲ್ಲಿ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ ಅವರು, ನಾನು ಶಕ್ತಿ ಪ್ರದರ್ಶನ ಮಾಡಲು ಈ ಪ್ರವಾಸ ಕೈಗೊಂಡಿಲ್ಲ ಎಂದು ಪುನರುಚ್ಚರಿಸಿದರು.

English summary
Former CM BS Yeddyurappa has denied rumours about him joining the National Congress Party. Yeddyurappa is currently touring Karnataka to strengthen the BJP. I will never leave BJP he added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X