ರಾಜು ಅನಂತಸ್ವಾಮಿ ನೆನಪಲ್ಲಿ ಸಂಗೀತ ಸಂಜೆ

ರಾಜು ಅನಂತಸ್ವಾಮಿ ನಮಗಾಗಿ ಹಾಡಿದ ಹಾಗೂ ಅವರು ಇಷ್ಟಪಟ್ಟು ಹಾಡುತ್ತಿದ್ದ ಹಾಡುಗಳ ಮೂಲಕ ಅವರನ್ನು ನೆನೆಯುವ ಸಲುವಾಗಿ ಕಲೆ ತಂಡ ಹಲವು ಗೆಳೆಯರೊಂದಿಗೆ ಸೇರಿ 'ನೆನಪಿಗೆ ಮೀರಿದ್ದು" ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ರಾಜು ಅನಂತಸ್ವಾಮಿಯವರ ಕೆಲವು ಶಿಷ್ಯರು, ಆಪ್ತ ಕಲಾವಿದರು ಹಾಡಲಿದ್ದು, ಇದಕ್ಕೆ ಜೊತೆಯಾಗಿ ಅವರ ಜೊತೆಗೆ ವಾದ್ಯಗಳನ್ನು ನುಡಿಸುತ್ತಿದ್ದ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.
ದಿನಾಂಕ: 17 ಜನವರಿ 2012
ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ, ಬೆಂಗಳೂರು
ಸಂಜೆ:7.30 ರಿಂದ
ಪ್ರಸ್ತುತಿ: ಕಲೆ ತಂಡ ಹಾಗು ಗೆಳೆಯರು
ಹಾಡಿನಲ್ಲಿ: ಸುಜಯ್ ಶಾಸ್ತ್ರಿ, ಪ್ರದೀಪ್ ಬಿ ವಿ, ಸ್ಮಿತಾ ವಸಂತ್, ಮಧುಮಾಲ, ಪ್ರವೀಣ್ ಬಿ ವಿ ಹಾಗೂ ರಾಜು ಅನಂತಸ್ವಾಮಿಯವರೊಂದಿಗೆ ಹಾಡಿರುವ, ಅವರ ಬಳಿ ಕಲಿತಿರುವ ಅತಿಥಿ ಗಾಯಕರು.
ಗಿಟಾರ್: ಸುದರ್ಶನ್
ರಿದಂ ಪ್ಯಾಡ್ : ಜೆರಾಲ್ಡ್
ಕೀಬೋರ್ಡ್ : ಕೃಷ್ಣ ಉಡುಪ
ತಬಲ: ಎಂ.ಸಿ.ಶ್ರೀನಿವಾಸ್
ಕೊಳಲು: ವಸಂತ್
ಆಹ್ವಾನಿತರು: ಈ ಕಾರ್ಯಕ್ರಮಕ್ಕೆ ರಾಜು ಅನಂತಸ್ವಾಮಿಯವರ ಒಡನಾಟದಲ್ಲಿದ್ದ ಹಲವು ಗೆಳೆಯರನ್ನು ಆಹ್ವಾನಿಸಲಾಗಿದೆ. ಅವರು ರಾಜು ಅನಂತಸ್ವಾಮಿಯವರ ಜೊತೆಗಿನ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮ ಸಹಯೋಗ: ಲಹರಿ ಆಡಿಯೋ ಸಂಸ್ಥೆ ಹಾಗು ಸಂವಾದ ಡಾಟ್ ಕಾಂ(samvaada.com)
ಹೆಚ್ಚಿನ ವಿವರಗಳಿಗೆ ವಿನಯ್ ಶೇಷಾದ್ರಿ(ಕಲೆ ತಂಡದ ನಿರ್ದೇಶಕ)ಯನ್ನು 98860 84111 ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.












Click it and Unblock the Notifications