ಗಣಿಗಾರಿಕೆ ನಿಷೇಧ, 4000 ಕೋಟಿ ರು ನಷ್ಟ
ಕಬ್ಬಿಣ ಉಕ್ಕು ವಲಯದಿಂದ ರೈಲ್ವೇ ಇಲಾಖೆಗೆ ಬರುತ್ತಿದ್ದ ಆದಾಯ ಶೇ.7.1ರಷ್ಟು ಇಳಿಮುಖ ಕಂಡು 5,238 ಕೋಟಿ ರು ಮಾತ್ರ ದಾಖಲಾಗಿದೆ. ಕಳೆದ ವರ್ಷ ಇದೆ ಅವಧಿಯಲ್ಲಿ(ಏಪ್ರಿಲ್ ನಿಂದ ನವೆಂಬರ್ ವರೆಗೆ) 5,640 ಕೋಟಿ ರು ಗಳಿಕೆಯಾಗಿತ್ತು.
2009-10ರಲ್ಲಿ ಇಲಾಖೆ ಬಳ್ಳಾರಿಯಿಂದ 23 ಮಿಲಿಯನ್ ಟನ್ ಕಬ್ಬಿಣದ ಅದಿರನ್ನು ಸಾಗಾಟ ಮಾಡಲಾಗಿತ್ತು. 2010-11 ರಲ್ಲಿ ಈ ಸಂಖ್ಯೆ 16 ಮಿಲಿಯನ್ ಟನ್ ಗಳಿಗೆ ಕುಸಿತವಾಗಿದೆ.
ರಾಜ್ಯದಲ್ಲಿ ವಾರ್ಷಿಕ 42 ಮಿಲಿಯನ್ ಟನ್ ಗಳಷ್ಟು ಕಬ್ಬಿಣದ ಅದಿರು ಉತ್ಪಾದನೆ ಆಗುತ್ತಿದ್ದು ಇದರಲ್ಲಿ ಬಳ್ಳಾರಿಯ ಪಾಲು 35 ಮಿಲಿಯನ್ ಟನ್ ಗಳಾಗಿವೆ. ಗಣಿಗಾರಿಕೆ ನಿಷೇಧದಿಂದ ರೇಲ್ವೇ ಇಲಾಖೆಗೆ 2010 ರಲ್ಲಿ 1071 ಕೋಟಿ ರೂಪಾಯಿಗಳಷ್ಟು ಆದಾಯ ನಷ್ಟ ಅನುಭವಿಸಿತ್ತು.
ಪ್ರಸಕ್ತ ವರ್ಷ ಅದಿರು, ಖನಿಜ ರಫ್ತು ಪ್ರಮಾಣ 65 ಮಿಲಿಯನ್ ಟನ್ ಮುಟ್ಟುವ ನಿರೀಕ್ಷೆಯಿದೆ. ಕಳೆದ ವರ್ಷ ಈ ಪ್ರಮಾಣ 97 ಮಿಲಿಯನ್ ಟನ್ ನಷ್ಟಿತ್ತು. ರಫ್ತು ತೆರಿಗೆಯನ್ನು ಶೇ.30ರಷ್ಟು ಹೆಚ್ಚಿಸುವ ಸರ್ಕಾರದ ಪ್ರಸ್ತಾಪದಿಂದಾಗಿ ರಫ್ತು ಪ್ರಮಾಣ 50 ಮಿಲಿಯನ್ ಟನ್ ಗಳಿಗೆ ಇಳಿಯುವ ನಿರೀಕ್ಷೆಯಿದೆ.