ರಸ್ತೆ ನಿಯಮ ಗಾಳಿಗೆ ತೂರಿದರೆ ಹುಷಾರ್ : ಅಶೋಕ್

Traffic rule violators beware : R Ashok
ಬೆಂಗಳೂರು, ಜ. 7 : ಕುಡಿದು ವಾಹನ ಚಲಾಯಿಸುವವರ, ರಸ್ತೆ ಸಂಚಾರ ನಿಯಮಗಳನ್ನು ಗಾಳಿಗೆ ತೂರುವವರ ಲೈಸೆನ್ಸುಗಳನ್ನು ಸ್ಥಳದಲ್ಲೇ ರದ್ದುಪಡಿಸಲಾಗುವುದು ಎಂದು ಗೃಹ ಮತ್ತು ಸಾರಿಗೆ ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಮಾವೇಶದಲ್ಲಿ ಅಶೋಕ್, ಸಾರ್ವಜನಿಕರು ರಸ್ತೆ ನಿಯಮಗಳನ್ನು ಪಾಲಿಸಿ ಸಂಚಾರಿ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ನುಡಿದರು. ಗ್ರಾಹಕರನ್ನು ಕಡೆಗಣಿಸುವ ರಿಕ್ಷಾ ಚಾಲಕರನ್ನೂ ಅಶೋಕ್ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಕೂಡ ಭಾಗವಹಿಸಿದ್ದರು. ಈ ಸುಪ್ತಾಹದ ಅಂಗವಾಗಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಜನತೆಗೆ ಸಂಚಾರಿ ನಿಯಮಗಳ ಬಗ್ಗೆ ಅರಿವನ್ನು ಮೂಡಿಸಲು ಬೃಹತ್ ಜಾಥಾ ಕೂಡ ಹಮ್ಮಿಕೊಳ್ಳಲಾಗಿತ್ತು.

ಅಶೋಕ್ ನೀಡಿರುವ ಪ್ರಮುಖ ಎಚ್ಚರಿಗೆಗಳು ವಾಹನ ಚಾಲಕರ ಗಮನಕ್ಕೆ.

* ಕುಡಿದು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದರೆ ಕೂಡಲೆ ಲೈಸೆನ್ಸ್ ರದ್ದು.
* ಮೂರು ಬಾರಿ ಅಪಘಾತ ಮಾಡಿದರೂ ಲೈಸೆನ್ಸ್ ರದ್ದು.
* ಮೊಬೈಲ್ ಬಳಸುತ್ತ ವಾಹನ ಓಡಿಸಿದರೂ ಲೈಸೆನ್ಸ್ ರದ್ದು.
* ರಿಕ್ಷಾ ಬಳಕೆದಾರರಿಂದ ದೂರುಗಳು ಬಂದರೆ ಚಾಲಕನ ವಿರುದ್ಧ ಕಠಿಣ ಕ್ರಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+