ಬ್ಯಾಂಕ್ ಬಡ್ಡಿ ದರ, ತರಕಾರಿ ಬೆಲೆ ಶೀಘ್ರ ಇಳಿಕೆ ?

ಆರ್ಬಿಐ ವಿತ್ತ ಧೋರಣಾ ಪರಾಮರ್ಶೆ(Economic Advisory Council)ಯ ಸಮಯದಲ್ಲಿ ಬಡ್ಡಿ ದರ ಕಡಿತ ಮಾಡಬೇಕೆಂದು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಶಿಫಾರಸು ಮಾಡಿದೆ. ಬ್ಯಾಂಕರ್ಗಳು ಮತ್ತು ತಜ್ಞರು ಬಡ್ಡಿ ದರದಲ್ಲಿ ಶೇ. 1 ಕಡಿತವನ್ನು ನಿರೀಕ್ಷಿಸಿದ್ದಾರೆ.
ಆರ್ಬಿಐ ಅಂಕಿ ಅಂಶಗಳ ಪ್ರಕಾರ ವಾಣಿಜ್ಯ ಬ್ಯಾಂಕ್ಗಳ ಮೂಲ ದರ ಶೇ. 10ರಿಂದ 10.75ರ ವರೆಗೆ ವಿವಿಧ ಪ್ರಮಾಣದಲ್ಲಿದೆ.
ತರಕಾರಿ ಬೆಲೆ ಇಳಿಕೆ: ಈರುಳ್ಳಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.73.74 ರಷ್ಟು ಕಡಿಮೆಯಾಗಲಿದೆ. ಆಲೂಗೆಡ್ಡೆ ಬೆಲೆ ಶೇ.34.01ರಷ್ಟು ಕೆಳಗಿಳಿಯಲಿದೆ. ಗೋಧಿ ಬೆಲೆ ಶೇ 3.41 ರಷ್ಟು ಹಾಗೂ ಎಲ್ಲಾ ತರಕಾರಿಗಳ ಬೆಲೆ ಶೇ 50.22 ರಷ್ಟು ಕಡಿಮೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.
ಆರ್ಬಿಐ ಮಾ. 2010ರಿಂದ 13 ಬಾರಿ ಪ್ರಮುಖ ದರಗಳನ್ನು ಹೆಚ್ಚಿಸಿದೆ. ಹಣದುಬ್ಬರ ನಿಯಂತ್ರಣಕ್ಕೆ ಬಂದರೆ, ಬಿಗು ಹಣಕಾಸು ನೀತಿಯ ತನ್ನ ಧೋರಣೆಯನ್ನು ಸಡಿಲಿಸುವ ಸೂಚನೆಯನ್ನು ಅದು ತನ್ನ ಡಿಸೆಂಬರ್ ಧೋರಣಾ ಪರಾಮರ್ಶೆ ವೇಳೆ ನೀಡಿತ್ತು.












Click it and Unblock the Notifications