ಕೋಮುಗಲಭೆ ಸೃಷ್ಟಿಸಲು ಪಾಕ್ ಧ್ವಜ ಹಾರಿಸಿದರು!

sri-rama-sene-hoist-pak-flag-to-create-violence
ಸಿಂದಗಿ (ಬಿಜಾಪುರ ಜಿಲ್ಲೆ), ಜ 5: ಪ್ರಶಾಂತವಾಗಿರುವ ವಾತಾವರಣವನ್ನು ಕದಡಲು, ಆ ಮೂಲಕ ಕೋಮು ಗಲಭೆ ಸೃಷ್ಟಿಸಲು ದುಷ್ಕರ್ಮಿಗಳು ಎಂತೆಂಥ ಹೀನಕೃತ್ಯಕ್ಕೆ ಕೈಹಾಕುತ್ತಾರೆ ಎಂಬುದು ಸಿಂದಗಿ ಧ್ವಜ ಪ್ರಕರಣದಿಂದ ಬಟಾಬಯಲಾಗಿದೆ. ಸಮಾಧಾನಕರ ಸಂಗತಿಯೆಂದರೆ ಜನ ಸಂಯಮ ತೋರಿ ಶಾಂತಿ ಮೆರೆದಿದ್ದರೆ ಪೊಲೀಸರು ಮೂರೇ ದಿನಗಳಲ್ಲಿ ಪ್ರಕರಣಕ್ಕೆ ಮಂಗಳ ಹಾಡಿದ್ದಾರೆ.

ಪೊಲೀಸರ ಪ್ರಕಾರ ಪಟ್ಟಣದ ಶ್ರೀರಾಮಸೇನೆಯ ವಿದ್ಯಾರ್ಥಿ ಘಟಕದ ಕಾರ್ಯಕರ್ತರೆನ್ನಲಾದ ಆರು ಮಂದಿ ಇಂತಹ ದುಷ್ಟಾಲೋಚನೆ ಹೊಂದಿದ್ದರು. ಪೊಲೀಸರು ಹೇಳುವಂತೆ 'ಬಂಧಿತರು ಕೋಮುಗಲಭೆ ಸೃಷ್ಟಿಸಲು ಅತ್ಯಂತ ವ್ಯವಸ್ಥಿತವಾಗಿ ಮತ್ತು ಸಾವಧಾನವಾಗಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದರು' ಎಂದು ತಿಳಿದು ಬಂದಿದೆ.

ಈ ಮದ್ಯೆ, 'ಬಂಧಿತ ಆರೋಪಿಗಳು ಈ ಕೃತ್ಯ ನಡೆಸಲು ಕಾರಣವೇನು? ಕೃತ್ಯದ ಹಿಂದೆ ಯಾರಿದ್ದಾರೆ? ಎಂಬುದರ ಕುರಿತು ತನಿಖೆ ಕೈಗೊಳ್ಳಲಾಗಿದೆ. ಕೋಮು ಸೌಹಾರ್ದತೆ ಕದಡುವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿದ್ದಾರೆಯೇ? ಎಂಬುದರ ಬಗ್ಗೆಯೂ ವಿಚಾರಣೆ ಮಾಡಲಾಗುತ್ತಿದೆ' ಎಂದು ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ.ರಾಜಪ್ಪ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+