ಕೋಮುಗಲಭೆ ಸೃಷ್ಟಿಸಲು ಪಾಕ್ ಧ್ವಜ ಹಾರಿಸಿದರು!

ಪೊಲೀಸರ ಪ್ರಕಾರ ಪಟ್ಟಣದ ಶ್ರೀರಾಮಸೇನೆಯ ವಿದ್ಯಾರ್ಥಿ ಘಟಕದ ಕಾರ್ಯಕರ್ತರೆನ್ನಲಾದ ಆರು ಮಂದಿ ಇಂತಹ ದುಷ್ಟಾಲೋಚನೆ ಹೊಂದಿದ್ದರು. ಪೊಲೀಸರು ಹೇಳುವಂತೆ 'ಬಂಧಿತರು ಕೋಮುಗಲಭೆ ಸೃಷ್ಟಿಸಲು ಅತ್ಯಂತ ವ್ಯವಸ್ಥಿತವಾಗಿ ಮತ್ತು ಸಾವಧಾನವಾಗಿ ಪಾಕಿಸ್ತಾನದ ಧ್ವಜವನ್ನು ಹಾರಿಸಿದರು' ಎಂದು ತಿಳಿದು ಬಂದಿದೆ.
ಈ ಮದ್ಯೆ, 'ಬಂಧಿತ ಆರೋಪಿಗಳು ಈ ಕೃತ್ಯ ನಡೆಸಲು ಕಾರಣವೇನು? ಕೃತ್ಯದ ಹಿಂದೆ ಯಾರಿದ್ದಾರೆ? ಎಂಬುದರ ಕುರಿತು ತನಿಖೆ ಕೈಗೊಳ್ಳಲಾಗಿದೆ. ಕೋಮು ಸೌಹಾರ್ದತೆ ಕದಡುವ ಉದ್ದೇಶಕ್ಕಾಗಿ ಈ ಕೃತ್ಯ ನಡೆಸಿದ್ದಾರೆಯೇ? ಎಂಬುದರ ಬಗ್ಗೆಯೂ ವಿಚಾರಣೆ ಮಾಡಲಾಗುತ್ತಿದೆ' ಎಂದು ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ.ರಾಜಪ್ಪ ತಿಳಿಸಿದ್ದಾರೆ.












Click it and Unblock the Notifications